ರಾತ್ರಿ ಮಲಗುವಾಗ ಇತ್ತು 3 ಮೂಟೆ ಅಡಿಕೆ, ನಡುರಾತ್ರಿ ಎಚ್ಚರವಾದಾಗ ಒಂದು ನಾಪತ್ತೆ, ಆಗಿದ್ದೇನು?
SHIVAMOGGA LIVE NEWS | 19 FEBRUARY 2024 THIRTHAHALLI : ಮನೆಯಲ್ಲಿದ್ದ ಒಂದು ಮೂಟೆ ಅಡಿಕೆ ಕಳ್ಳತನ ಮಾಡಲಾಗಿದೆ. ನಡುರಾತ್ರಿ ಮನೆಯಲ್ಲಿದ್ದವರು ಎಚ್ಚರವಾದಾಗ ಕಳ್ಳತನ ಬೆಳಕಿಗೆ ಬಂದಿದೆ. ತೀರ್ಥಹಳ್ಳಿ ತಾಲೂಕು ಕೀಗಡಿಯಲ್ಲಿ ಘಟನೆ ಸಂಭವಿಸಿದೆ. ರುದ್ರಪ್ಪ ಎಂಬುವವರ ಮನೆಯಲ್ಲಿ ಮೂರು ಮೂಟೆ ಅಡಿಕೆ ಇಡಲಾಗಿತ್ತು. ಫೆ.15ರ ರಾತ್ರಿ ಕುಟುಂಬದವರು ಮಲಗುವಾಗ ಅಡಿಕೆ ಇತ್ತು. ಮಧ್ಯರಾತ್ರಿ 2 ಗಂಟೆಗೆ ರುದ್ರಪ್ಪ ಅವರು ಎಚ್ಚರವಾಗಿ, ಕೊಟ್ಟಿಗೆಯಲ್ಲಿದ್ದ ಹಸು ಕರು ಹಾಕಿದೆಯೇ ಎಂದು ಪರಿಶೀಲಿಸಲು ತೆರಳಿದಾಗ ಅಡಿಕೆ ಚೀಲ ನಾಪತ್ತೆಯಾಗಿತ್ತು. … Read more