ಗೋದಾಮಿನಲ್ಲಿ ರಾತ್ರೋರಾತ್ರಿ ನಾಲ್ಕು ಮೂಟೆ ಅಡಕೆ ನಾಪತ್ತೆ

areca nut

ಶಿವಮೊಗ್ಗ ಲೈವ್.ಕಾಂ | HOLEHONNUR NEWS | 26 ಅಕ್ಟೋಬರ್ 2021 ಮನೆ ಮುಂದಿನ ಗೋದಾಮಿನಲ್ಲಿ ಇಟ್ಟಿದ್ದ ನಾಲ್ಕು ಮೂಟೆ ಅಡಕೆಯನ್ನು ರಾತ್ರೋರಾತ್ರಿ ಕಳವು ಮಾಡಲಾಗಿದೆ. ಸಂಸ್ಕರಿಸಿ ಇಟ್ಟಿದ್ದ ಅಡಕೆಯನ್ನು ಖದೀಮರು ಹೊತ್ತೊಯ್ದಿದ್ದಾರೆ. ಇದನ್ನೂ ಓದಿ | ರಾತ್ರೋರಾತ್ರಿ ತೋಟಕ್ಕೆ ನುಗ್ಗಿ ಅಡಕೆ ಸಸಿಗಳನ್ನು ಕತ್ತರಿಸಿದ ದುಷ್ಕರ್ಮಿಗಳು ಹೊಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯ ಅಗರದಹಳ್ಳಿಯಲ್ಲಿ ಘಟನೆ ಸಂಭವಿಸಿದೆ. ಹರೀಶ್ ಎಂಬುವವರ ಮನೆ ಮುಂದೆ ಗೋದಾಮಿನಲ್ಲಿ ಅಡಕೆಯನ್ನು ಇಡಲಾಗಿತ್ತು. ಮೂಟೆಯಲ್ಲಿ ಅಡಕೆಯನ್ನು ಕಟ್ಟಿ ಇರಿಸಲಾಗಿತ್ತು. ಭಾನುವಾರ ರಾತ್ರಿ ಕಳ್ಳರು ಗೋದಾಮಿನೊಳಗೆ … Read more

ಚನ್ನಗಿರಿ ಉಮಾ ವಿರುದ್ಧ ಶಿವಮೊಗ್ಗದಲ್ಲಿ ಮತ್ತೊಂದು ಕೇಸ್, ಒಂದೇ ತಿಂಗಳಲ್ಲಿ ಎರಡು ಠಾಣೆಯಲ್ಲಿ ಪ್ರತ್ಯೇಕ ದೂರು

crime name image

ಶಿವಮೊಗ್ಗ ಲೈವ್.ಕಾಂ |SHIMOGA NEWS | 22 ಅಕ್ಟೋಬರ್ 2021 ಮನೆಯವರೆಲ್ಲ ಮಲಗಿದ್ದಾಗ ಸೂಟ್ ಕೇಸ್ ತುಂಬಾ ಬೆಳ್ಳಿ ವಸ್ತುಗಳನ್ನು ತುಂಬಿಕೊಂಡು, ಪರಾರಿಯಾದ ಮನೆಗೆಲಸದಾಕೆ ವಿರುದ್ಧ, ಮತ್ತೊಂದು ಪ್ರಕರಣ ದಾಖಲಾಗಿದೆ. ಒಂದೇ ತಿಂಗಳಲ್ಲಿ ಆಕೆ ವಿರುದ್ಧ ಇದು ಎರಡನೇ ಪ್ರಕರಣವಾಗಿದೆ. ಯಾರದು ಮನೆ ಕೆಲಸದಾಕೆ? ಚನ್ನಗಿರಿಯ ಉಮಾ ಎಂಬಾಕೆ ವಿರುದ್ಧ ಈ ತಿಂಗಳಲ್ಲಿ ಎರಡು ಪ್ರಕರಣ ದಾಖಲಾಗಿದೆ. ಈಕೆ ಮನೆ ಕೆಲಸಕ್ಕೆ ಬಂದಾಗಲೆಲ್ಲ ತನ್ನನ್ನು ಚನ್ನಗಿರಿಯ ಉಮಾ ಅಲಿಯಾಸ್ ಉಮಾದೇವಿ ಎಂದು ಪರಿಚಯಿಸಿಕೊಂಡಿದ್ದಾಳೆ. ಕೆಲಸ ಮಾಡುವ ಸ್ಥಳದಲ್ಲಿ … Read more

ಮಧ್ಯಾಹ್ನ ಊಟ ಮುಗಿಸಿ ಮನೆಯಿಂದ ಹೊರ ಬರುವಷ್ಟರಲ್ಲಿ ಬೈಕ್ ಇಲ್ಲ

bike theft reference image

ಶಿವಮೊಗ್ಗ ಲೈವ್.ಕಾಂ | SHIMOGA NEWS | 19 ಅಕ್ಟೋಬರ್ 2021 ಮಧ್ಯಾಹ್ನ ಊಟ ಮುಗಿಸಿ ಮನೆಯಿಂದ ಹೊರ ಬರುವಷ್ಟರಲ್ಲಿ ಖದೀಮರು ಬೈಕ್ ಕಳ್ಳತನ ಮಾಡಿದ್ದಾರೆ. ವಿನೋಬನಗರದ ಸವಿ ಬೇಕರಿ ಬಳಿ ಘಟನೆ ಸಂಭವಿಸಿದೆ. ಅಕ್ಷಯ್ ಶರ್ಮಾ ಎಂಬುವವರಿಗೆ ಸೇರಿದ ಹೋಂಡಾ ಆಕ್ಟೀವಾ ಮೊಪೆಡ್ ವಾಹನ ಕಳುವಾಗಿದೆ. ಅ.13ರಂದು ಮಧ್ಯಾಹ್ನ ಅಕ್ಷಯ್ ಶರ್ಮಾ ಅವರು ಕೆಲಸದಿಂದ ಮನೆಗೆ ಬಂದಿದ್ದಾರೆ. ಎಂದಿನಂತೆ ಮನೆ ಮುಂದೆ ಬೈಕ್ ನಿಲ್ಲಿಸಿದ್ದಾರೆ. ಊಟ ಮುಗಿಸಿ ಹೊರಗೆ ಬಂದು ನೋಡುವಷ್ಟರಲ್ಲಿ ಬೈಕ್ ಕಣ್ಮರೆಯಾಗಿದೆ. ಎಲ್ಲೆಡೆ … Read more

ಗಾಂಧಿ ಬಜಾರಲ್ಲಿ ಮುಂದುವರೆದ ಕಳ್ಳರ ಹಾವಳಿ, ಬಟ್ಟೆ ಖರೀದಿಸಿ ಹಿಂತಿರುಗುವಷ್ಟರಲ್ಲಿ ಬೈಕ್ ನಾಪತ್ತೆ

020520 Left Right Policy in Shimoga Gandhi Bazaar 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 12 ಅಕ್ಟೋಬರ್ 2021 ಅಂಗಡಿಗೆ ಹೋಗಿ ಬಟ್ಟೆ ಖರೀದಿಸಿ ಹಿಂತಿರುಗುವಷ್ಟರಲ್ಲಿ ಹೊರಗೆ ನಿಲ್ಲಿಸಿದ್ದ ಬೈಕ್ ನಾಪತ್ತೆಯಾಗಿದೆ. ಶಿವಮೊಗ್ಗದ ಗಾಂಧಿ ಬಜಾರ್’ನ ಕಸ್ತೂರ ಬಾ ರಸ್ತೆಯಲ್ಲಿ ಘಟನೆ ಸಂಭವಿಸಿದೆ. ಅಕೌಂಟೆಂಟ್ ಪ್ರಕಾಶ್ ಎಂಬುವವರಿಗೆ ಸೇರಿದ ಬೈಕ್ ಕಳವು ಮಾಡಲಾಗಿದೆ. ಸ್ಪ್ಲೆಂಡರ್ ಬೈಕ್ ಕಳ್ಳತನ ಮಾಡಲಾಗಿದೆ. ಬಟ್ಟೆ ಖರೀದಿಗೆಂದು ಪ್ರಕಾಶ್ ಅವರು ಗಾಂಧಿ ಬಜಾರ್’ಗೆ ಬಂದಿದ್ದರು. ಕಸ್ತೂರ ಬಾ ರಸ್ತೆಯಲ್ಲಿ ಬೈಕ್ ನಿಲ್ಲಿಸಿ ಅಂಗಡಿಗೆ ಹೋಗಿ ಬರುವಷ್ಟರಲ್ಲಿ ಬೈಕ್ ನಾಪತ್ತೆಯಗಿತ್ತು. ಈ … Read more

ಶಿವಮೊಗ್ಗ ಬಸ್ ನಿಲ್ದಾಣದಲ್ಲಿ ಪ್ರಯಾಣಿಕನ ಸೋಗಿನಲ್ಲಿ ಬಸ್ ಹತ್ತಿದ, ವಿದ್ಯಾರ್ಥಿನಿಯ ಪಿಂಕ್ ಬ್ಯಾಗನ್ನು ಲಪಟಾಯಿಸಿದ

210621 KSRTC Bus Starts in Shimoga 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 11 ಅಕ್ಟೋಬರ್ 2021 ದಸರಾ ರಜೆಗೆ ಊರಿಗೆ ತೆರಳುತ್ತಿದ್ದ ಬಿಎಸ್ಸಿ ವಿದ್ಯಾರ್ಥಿನಿಯೊಬ್ಬರ ಬೈಗ್ ಕಳ್ಳತನವಾಗಿದೆ. ಬಸ್ ನಿಲ್ದಾಣದಲ್ಲೇ ಘಟನೆ ಸಂಭವಿಸಿದೆ. ಬ್ಯಾಗುಗಳನ್ನ ಬಸ್ಸಿನಲ್ಲಿ ಇರಿಸಿ ನೀರಿನ ಬಾಟಲಿ ತರಲು ಹೋದಾಗ ಕಳ್ಳ ತನ್ನ ಕೈಚಳಕ ತೋರಿಸಿದ್ದಾನೆ. ವಿದ್ಯಾರ್ಥಿನಿ ತಂದಿದ್ದ ಐದು ಬ್ಯಾಗ್’ಗಳ ಪೈಕಿ ಒಂದು ಬ್ಯಾಗ್ ನಾಪತ್ತೆಯಾಗಿದೆ. ಪಿಂಕ್ ಬ್ಯಾಗ್ ಇರಲಿಲ್ಲ ಶಿವಮೊಗ್ಗದ ಹಾಸ್ಟೆಲ್’ನಲ್ಲಿದ್ದುಕೊಂಡು ಬಿಎಸ್ಸಿ ಓದುತ್ತಿರುವ ಮಮತಾ ಎಂಬುವವರು ದಸರಾ ರಜೆ ಹಿನ್ನೆಲೆ ಊರಿಗೆ ತೆರಳುತ್ತಿದ್ದರು. ಸ್ನೇಹಿತೆಯೊಂದಿಗೆ … Read more

ನಿರ್ಮಾಣ ಹಂತದ ಕಟ್ಟಡದಲ್ಲಿ ಮೋಟರ್, ಕಬ್ಬಿಣದ ಕ್ಲಾಂಪ್, ಮೊಬೈಲ್ ಕಳ್ಳತನ

Doddapete police station in shimoga

ಶಿವಮೊಗ್ಗ ಲೈವ್.ಕಾಂ | SHIMOGA NEWS | 08 ಅಕ್ಟೋಬರ್ 2021 ಕೆಲಸಗಾರರು ನಿದ್ರೆ ಮಾಡುತ್ತಿದ್ದಾಗ ನಿರ್ಮಾಣ ಹಂತದ ಕಟ್ಟಡದಲ್ಲಿ ಕಳ್ಳತನವಾಗಿದೆ. ನೀರಿನ ಮೋಟರ್, ಕಬ್ಬಿಣದ ಬೀಮ್ ಕ್ಲ್ಯಾಂಪ್, ಮೊಬೈಲ್’ಗಳನ್ನು ಕಳ್ಳರು ಹೊತ್ತೊಯ್ದಿದ್ದಾರೆ. ಶಿವಮೊಗ್ಗದ ಶರಾವತಿ ನಗರದ ಎ ಬ್ಲಾಕ್’ನ 3ನೇ ಕ್ರಾಸ್’ನಲ್ಲಿ ಚಂದ್ರಪ್ಪ ಎಂಬುವವರಿಗೆ ಸೇರಿದ ನಿರ್ಮಾಣ ಹಂತದ ಕಟ್ಟದಲ್ಲಿ ಘಟನೆ ಸಂಭವಿಸಿದೆ. ರಾತ್ರಿ ಕೆಲಸಗಾರರು ನಿದ್ರೆ ಮಾಡುತ್ತಿದ್ದಾಗ ನುಗ್ಗಿರುವ ಕಳ್ಳರು ಒಂದು ಹೆಚ್.ಪಿ ಸಬ್ ಮರ್ಷಿಬಲ್ ಮೋಟಾರ್, ಎರಡು ಮೊಬೈಲ್’ಗಳು, 33 ಕಬ್ಬಿಣದ ಬೀಮ್ … Read more

ಶಿವಮೊಗ್ಗ KSRTC ಬಸ್ ನಿಲ್ದಾಣದ ಮುಂದೆ, ನೀರಿನ ಬಾಟಲಿಯ ಬಾಕ್ಸ್ ಕೊಟ್ಟು ಹಿಂತಿರುಗುವಷ್ಟರಲ್ಲಿ ಕಾದಿತ್ತು ಶಾಕ್

bike theft reference image

ಶಿವಮೊಗ್ಗ ಲೈವ್.ಕಾಂ | SHIMOGA NEWS | 05 ಅಕ್ಟೋಬರ್ 2021 ಮಿನರಲ್ ವಾಟರ್ ಬಾಟಲಿಯ ಬಾಕ್ಸ್’ಗಳನ್ನು ಕೊಟ್ಟು ಬರುವಷ್ಟರಲ್ಲಿ ಬೈಕ್ ಕಳ್ಳತನವಾಗಿದೆ. ಶಿವಮೊಗ್ಗದ KSRTC ಬಸ್ ನಿಲ್ದಾಣದ ಮುಂದೆ ಘಟನೆ ಸಂಭವಿಸಿದೆ. ಬಸವನಗುಡಿಯ ಪ್ರಸನ್ನ ಕುಮಾರ್ ಎಂಬುವವರಿಗೆ ಸೇರಿದ ಬೈಕ್ ಕಳವಾಗಿದೆ. ಪ್ರಸನ್ನ ಕುಮಾರ್ ಅವರು ಮಿನರಲ್ ವಾಟರ್ ಬಾಟಲಿಗಳ ಬಾಕ್ಸನ್ನು ಅಂಗಡಿಗೆ ಪೂರೈಸಲು ತೆರಳಿದ್ದರು. ಕೀಯನ್ನು ತಮ್ಮ ಹೋಂಡಾ ಡಿಯೋ ಬೈಕ್’ನಲ್ಲೇ ಬಿಟ್ಟಿದ್ದರು. ಇದನ್ನು ಗಮನಿಸಿರುವ ಕಳ್ಳರು ಬೈಕ್ ಕೊಂಡೊಯ್ದಿದ್ದಾರೆ. ಪ್ರಸನ್ನಕುಮಾರ್ ಅವರು ಹಿಂತಿರುಗಿದಾಗ … Read more

ಹೊಳೆಬೆನವಳ್ಳಿ ದೇವಸ್ಥಾನದಲ್ಲಿ ಕಳವು ಮಾಡಿ, ಸ್ಥಳೀಯರಿಗೆ ಚಾಕು ತೋರಿಸಿ ಎಸ್ಕೇಪ್ ಆಗಿದ್ದ ಒಬ್ಬ ಕಳ್ಳ ಅರೆಸ್ಟ್

theft case general image

ಶಿವಮೊಗ್ಗ ಲೈವ್.ಕಾಂ | SHIMOGA NEWS | 01 ಅಕ್ಟೋಬರ್ 2021 ದೇವಸ್ಥಾನದಲ್ಲಿ ಕಳವು ಮಾಡಿ, ಪರಾರಿಯಾಗುತ್ತಿದ್ದ ವೇಳೆ ಸ್ಥಳೀಯರಿಗೆ ಚಾಕು ತೋರಿಸಿ ಬೆದರಿಕೆ ಒಡ್ಡಿದ್ದ ಪ್ರಕರಣ ಸಂಬಂಧ ಒಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಟಿಪ್ಪುನಗರದ ಯುವಕನನ್ನು ಬಂಧಿಸಲಾಗಿದೆ. ಶಿವಮೊಗ್ಗ ತಾಲೂಕು ಹೊಳೆಬೆನವಳ್ಳಿ ಗ್ರಾಮದ ಮಾರಮ್ಮ ದೇವಸ್ಥಾನದಲ್ಲಿ ಕಳ್ಳತನವಾಗಿತ್ತು. ದೇವಸ್ಥಾನದಲ್ಲಿ ನಡುರಾತ್ರಿ ಕಳ್ಳತನ ಮಾಡುವಾಗ ಗಂಟೆ ಶಬ್ದವಾಗಿ ಸ್ಥಳೀಯರಾದ ಸತ್ಯವೇಲು ಎಂಬುವವರು ಎದ್ದು ಬಂದಿದ್ದರು. ಈ ವೇಳೆ ಸತ್ಯವೇಲು ಅವರಿಗೆ ಚಾಕು ತೋರಿಸಿ ಕಳ್ಳರು ಪರಾರಿಯಾಗಿದ್ದರು. ದೇವರ … Read more

ಹೊಳೆಬೆನವಳ್ಳಿಯಲ್ಲಿ ನಡುರಾತ್ರಿ ದೇವಸ್ಥಾನದ ಬೀಗ ಒಡೆದು ಕಳ್ಳರು, ಚಾಕು ತೋರಿಸಿ ಜನರಿಗೆ ಬೆದರಿಕೆ

ಶಿವಮೊಗ್ಗ ಲೈವ್.ಕಾಂ | SHIMOGA NEWS | 28 ಸೆಪ್ಟೆಂಬರ್ 2021 ನಡುರಾತ್ರಿ ದೇವಸ್ಥಾನದ ಬಾಗಿಲಿನ ಬೀಗ ಮುರಿದು ಚಿನ್ನಾಭರಣ ಕಳ್ಳತನ ಮಾಡಲಾಗಿದೆ. ಕಳ್ಳರನ್ನು ಹಿಡಿಯಲು ಮುಂದಾದ ಸಾರ್ವಜನಿಕರಿಗೆ ಚಾಕು ತೋರಿಸಿ ಕಳ್ಳರು ಪರಾರಿಯಾಗಿದ್ದಾರೆ. ಶಿವಮೊಗ್ಗದ ಹೊಳೆಬೆನವಳ್ಳಿ ಗ್ರಾಮದಲ್ಲಿ ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ಘಟನೆ ಸಂಭವಿಸಿದೆ. ದೇವಸ್ಥಾನದ ಬಾಗಿಲಿಗೆ ಹಾಕಲಾಗಿದ್ದ ಬೀಗವನ್ನು ಒಡೆದು ಮದ್ಯರಾತ್ರಿ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. ಜೋರು ಶಬ್ದ, ಗಂಟು ಕಟ್ಟಿ ಓಡಿದ ಕಳ್ಳರು ನಡುರಾತ್ರಿ ಜೋರು ಶಬ್ದವಾಗಿದ್ದರಿಂದ ದೇವಸ್ಥಾನದ ಸಮೀಪದ ಮನೆಯಲ್ಲಿದ್ದವರು … Read more

ಹಣಗೆರೆ ಬಳಿ ಬಾಗಿಲು ಮೀಟಿದ ಕಳ್ಳರು, ಮಹಾಲಯ ಅಮಾವಾಸ್ಯೆ ಪೂಜೆಗೆ ಹೋಗಿದ್ದವರ ಮನೆಯಲ್ಲಿ ಲಕ್ಷ ಲಕ್ಷದ ಚಿನ್ನಾಭರಣ ಕಳವು

theft case general image

ಶಿವಮೊಗ್ಗ ಲೈವ್.ಕಾಂ | THIRTHAHALLI NEWS | 28 ಸೆಪ್ಟೆಂಬರ್ 2021 ಮಹಾಲಯ ಅಮಾವಾಸ್ಯೆ ಪೂಜೆಗೆ ತೆರಳಿದ್ದ ಸಂದರ್ಭ ಮನೆಯ ಬಾಗಿಲು ಮುರಿದು ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಲಾಗಿದೆ. ತೀರ್ಥಹಳ್ಳಿ ತಾಲೂಕು ಹಣಗೆರೆ ಸಮೀಪ ಘಟನೆ ಸಂಭವಿಸಿದೆ. ಬೇಸೂರು ಶ್ರೀನಿವಾಸ್ ಅವರ ಮನೆಯಲ್ಲಿ ಕಳ್ಳತನವಾಗಿದೆ. ಇಂಟರ್ ಲಾಕ್ ಮುರಿದ ಖದೀಮರು ಮನೆಯಲ್ಲಿ ಯಾರು ಇಲ್ಲದಿರುವುದನ್ನು ಖಚಿತಪಡಿಸಿಕೊಂಡ ಕಳ್ಳರು, ಬಾಗಿಲಿನ ಇಂಟರ್ ಲಾಕ್ ಮೀಟಿ ಒಳಗೆ ನುಗ್ಗಿದ್ದಾರೆ. ರೂಮಿನ ಬೀರುವಿನಲ್ಲಿದ್ದ ಲಕ್ಷಾಂತರ ಮೌಲ್ಯದ ಚಿನ್ನಾಭರಣ ದೋಚಿಸಿದ್ದಾರೆ. ಮಹಾಲಯ … Read more