ಶಿವಮೊಗ್ಗ ಪೊಲೀಸ್‌ ಚೌಕಿ ಸೇರಿ ವಿವಿಧೆಡೆ ಆ.2ರಂದು ಇಡೀ ದಿನ ಕರೆಂಟ್‌ ಇರಲ್ಲ

power cut mescom ELECTRICITY

SHIVAMOGGA LIVE | 1 AUGUST 2023 SHIMOGA : ಆಲ್ಕೊಳ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ಆ.2ರಂದು ತುರ್ತು ಕಾಮಗಾರಿ ಹಮ್ಮಿ ಕೊಳ್ಳಲಾಗಿದೆ. ಅಂದು ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ಶಿವಮೊಗ್ಗ ನಗರದ ವಿವಿಧೆಡೆ ವಿದ್ಯುತ್‌ ವ್ಯತ್ಯಯವಾಗಲಿದೆ (Power Cut). ಎಲ್ಲೆಲ್ಲಿ ಕರೆಂಟ್‌ ಇರಲ್ಲ? ಪೊಲೀಸ್ ಚೌಕಿ, ಸೂಡಾ ಕಚೇರಿ, ದಯಾನನ ಪ್ರಿಂಟರ್ಸ್, ಕೆಂಚಪ್ಪ ಲೇಔಟ್, ಎನ್.ಎಂ.ಸಿ ಕಾಂಪೌಂಡ್, ಕುವೆಂಪು ಬಡಾವಣೆ, ಲಕ್ಷ್ಮೀಪುರ ಹಾಗೂ ಸುತ್ತಮುತ್ತಲಿನ ಹಳ್ಳಿಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ … Read more

VISL ಕಾರ್ಮಿಕರಿಗೆ ಗುಡ್‌ ನ್ಯೂಸ್‌ ನೀಡಿದ ಸಂಸದ, ಉತ್ಪಾದನಾ ಚುಟುವಟಿಕೆ ಪುನಾರಂಭಕ್ಕೆ ದಿನಾಂಕ ಫಿಕ್ಸ್‌

BY-Raghavendra-and-Bhadravathi-VISL

SHIVAMOGGA LIVE | 1 AUGUST 2023 BHADRAVATHI : ವಿಐಎಸ್‌ಎಲ್‌ ಕಾರ್ಖಾನೆಯಲ್ಲಿ (VISL) ಉತ್ಪಾದನಾ ಚಟುವಟಿಕೆ ಪುನಾರಂಭಕ್ಕೆ ಸೇಲ್‌ ಆಡಳಿತ ಮಂಡಳಿ ಅನುಮತಿ ನೀಡಿದೆ. ಆ.10ರಿಂದ ಬಾರ್‌ ಮಿಲ್‌ ಕೆಲಸ ಆರಂಭವಾಗಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್‌ ಷಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಮತ್ತು ಉಕ್ಕು ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರ ನಿರ್ದೇಶನದ ಬಳಿಕ ಸೇಲ್‌ ಆಡಳಿತ ಮಂಡಳಿ ವಿಐಎಸ್‌ಎಲ್‌ (VISL) ಕಾರ್ಖಾನೆಯಲ್ಲಿ ಉತ್ಪಾದನಾ ಚುಟವಟಿಕೆ ಪುನಾರಂಭ … Read more

ರಸ್ತೆ ಬದಿ ಹೊಂಡಕ್ಕೆ ಜಾರಿದ KSRTC ಬಸ್‌, ಸ್ವಲ್ಪದರಲ್ಲಿ ತಪ್ಪಿತು ದೊಡ್ಡ ಅನಾಹುತ

KSRTC-Bus-mishap-near-talaguppa-in-Sagara.

SHIVAMOGGA LIVE | 1 AUGUST 2023 TALAGUPPA : ಕಾರಿಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ಕೆಎಸ್‌ಆರ್‌ಟಿಸಿ ಬಸ್‌ (KSRTC BUS) ರಸ್ತೆ ಬದಿಯ ಹೊಂಡಕ್ಕೆ ಬಿದ್ದಿದೆ. ಅದೃಷ್ಟವಶಾತ್‌ ಯಾವುದೆ ಪ್ರಾಣ ಹಾನಿ ಸಂಭವಿಸಿಲ್ಲ. ಸಾಗರ ತಾಲೂಕು ತಾಳಗುಪ್ಪ ಸಮೀಪದ ಬಲೇಗಾರು ಬಳಿ ಕಳೆದ ರಾತ್ರಿ ಘಟನೆ ಸಂಭವಿಸಿದೆ. ಶಿರಸಿ – ಸಾಗರ ಕೆಎಸ್‌ಆರ್‌ಟಿಸಿ ಬಸ್‌ ಅಪಘಾತಕ್ಕೀಡಾಗಿದೆ. ಎದುರಿನಿಂದ ವೇಗವಾಗಿ ಬರುತ್ತಿದ್ದ ಕಾರಿಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ಚಾಲಕ ಎಡಗಡೆಗೆ ಬಸ್‌ ತಿರುಗಿಸಿದ್ದಾರೆ. ಇದರಿಂದ ಬಸ್‌ ಹೊಂಡಕ್ಕೆ … Read more

ವರದಾ ನದಿಯಲ್ಲಿ ಮೃತದೇಹ ಪತ್ತೆ, ಕೈ ಮೇಲಿದೆ ಹಚ್ಚೆ

soraba anavatti graphics

SHIVAMOGGA LIVE | 1 AUGUST 2023 ANAVATTI : ವರದಾ ನದಿಯಲ್ಲಿ (Varada River) ಮೃತದೇಹ ಪತ್ತೆಯಾಗಿದೆ. ಮೃತನ ಕೈ ಮೇಲೆ ಹೃದಯ ಮತ್ತು ವಿ.ಆರ್‌. ಅಕ್ಷರಗಳ ಹಚ್ಚೆ ಇದೆ. ಸೊರಬ ತಾಲೂಕು ಆನವಟ್ಟಿ ಸಮೀಪದ ಬಂಕಸಾಣ – ಮೂಗೂರು ಗ್ರಾಮದ ಬಳಿ ಮೃತದೇಹ ಸಿಕ್ಕಿದೆ. ವರದಾ ನದಿಯಲ್ಲಿ ಮೃತದೇಹ ತೇಲುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಇದು ಅದೇ ಮೃತದೇಹ ಇರಬಹುದು ಎಂದು ಶಂಕಿಸಲಾಗಿದೆ. ವಾರದ ಹಿಂದೆ ಈ ವ್ಯಕ್ತಿ ನದಿಗೆ (Varada … Read more

ಶಿವಮೊಗ್ಗ ಕಮಿಷನರ್‌ಗೆ ಪ್ರತಿ ದಿನ ಊಟ ಬಡಿಸುತ್ತಿದ್ದ ನೌಕರ, ನಿವೃತ್ತಿ ದಿನ ಮಧ್ಯಾಹ್ನ ಆಗಿದ್ದೆ ಬೇರೆ

Different-send-of-for-Kariyanna-in-Shimoga-Palike-Commissioner-office-by-Mayanna-gowda.

SHIVAMOGGA LIVE | 1 AUGUST 2023 SHIMOGA : ತಮ್ಮ ಆಪ್ತ ಶಾಖೆಯ ನೌಕರೊಬ್ಬರಿಗೆ ಶಿವಮೊಗ್ಗ ಮಹಾನಗರ ಪಾಲಿಕೆ ಕಮಿಷನರ್‌ ವಿಭಿನ್ನವಾಗಿ ಬೀಳ್ಕೊಡುಗೆ (send off) ನೀಡಿದ್ದಾರೆ. ನಿವೃತ್ತ ನೌಕರನಿಗೆ ತಾವೇ ಖುದ್ದು ಸಿಹಿ ಊಟ ಬಡಿಸಿ ಮಾದರಿಯಾಗಿದ್ದಾರೆ. ಪಾಲಿಕೆ ಕಮಿಷನರ್‌ ಆಪ್ತ ಶಾಖೆ ನೌಕರ ಕರಿಯಣ್ಣ ಜು.31ರಂದು ನಿವೃತ್ತರಾದರು. ಕಮಿಷನರ್‌ ಮಾಯಣ್ಣಗೌಡ ಅವರಿಗೆ ಕರಿಯಣ್ಣ ಅವರು ಪ್ರತಿ ದಿನ ಊಟ, ತಿಂಡಿಯ ವ್ಯವಸ್ಥೆ ಮಾಡುತ್ತಿದ್ದರು. ಸಿಹಿ ಊಟ ತರಿಸಿ ಬಡಿಸಿದರು ಜು.31ರ ಮಧ್ಯಾಹ್ನ ಕಮಿಷನರ್‌ … Read more

ನಡುರಾತ್ರಿ ಉಪನ್ಯಾಸಕನ ಮನೆಗೆ ನುಗ್ಗಲು ಯತ್ನಿಸಿದ ಯುವಕರ ಗುಂಪು, ಯುವತಿಗಾಗಿ ಶೋಧ, ಆಗಿದ್ದೇನು?

Hosanagara-Police-Station-Board

SHIVAMOGGA LIVE | 1 AUGUST 2023 HOSANAGARA : ಯುವಕರ (Youths) ಗುಂಪೊಂದು ನಡುರಾತ್ರಿ ಉಪನ್ಯಾಸಕರೊಬ್ಬರ ಮನೆಗೆ ನುಗ್ಗಲು ಯತ್ನಿಸಿದೆ. ಬಾಗಿಲು ಒಡೆದು ಒಳ ಬಂದರೆ ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಒಡ್ಡಿದೆ ಎಂದು ಆರೋಪಿಸಲಾಗಿದೆ. ಹೊಸನಗರದ ಕ್ರಿಶ್ಚಿಯನ್‌ ಕಾಲೋನಿಯಲ್ಲಿರುವ ಉಪನ್ಯಾಸಕ ಅಂಜನ್‌ ಕುಮಾರ್‌ ಮನೆ ಮೇಲೆ 10 ರಿಂದ 15 ಯುವಕರು ದಾಳಿ ನಡೆಸಿದ್ದಾರೆ. ಏನಿದು ಪ್ರಕರಣ? ಜು.29ರ ರಾತ್ರಿ 12 ಗಂಟೆ ಹೊತ್ತಿಗೆ ಉಪನ್ಯಾಸಕ ಅಂಜನ್‌ ಕುಮಾರ್‌ ಮನೆ ಕಾಂಪೌಂಡ್‌ ಒಳಗೆ … Read more

ಬೀಳ್ಕೊಡುಗೆ ಬಳಿಕ ಕಚೇರಿಯಿಂದ ಹೊರ ಬಂದ ನೌಕರನಿಗೆ ಕಾದಿತ್ತು ಅಚ್ಚರಿ, ಮಾದರಿಯಾದರು ಹಿರಿಯ ಅಧಿಕಾರಿ

Pallavi-Sathenahalli-gave-different-send-of-for-d-group-employee-in-Sagara

SHIVAMOGGA LIVE | 1 AUGUST 2023 SAGARA : ನಿವೃತ್ತ ನೌಕರರೊಬ್ಬರನ್ನು (Retired Employee) ತಮ್ಮ ಕಾರಿನಲ್ಲಿ ಮನೆವರೆಗೆ ಕರೆದೊಯ್ದು ಹಿರಿಯ ಅಧಿಕಾರಿಯೊಬ್ಬರು ಬೀಳ್ಕೊಡುಗೆ ನೀಡಿದ್ದಾರೆ. ಸಾಗರ ಉಪ ವಿಭಾಗೀಯ ಕಚೇರಿಯಲ್ಲಿ ಈ ವಿಭಿನ್ನ ಬೀಳ್ಕೊಡುಗೆ ನಡೆಯಿತು. ಯಾರಿಗೆ ಬೀಳ್ಕೊಡುಗೆ? ಉಪ ವಿಭಾಗಾಧಿಕಾರಿ ಕಚೇರಿಯಲ್ಲಿ  ಡಿ ದರ್ಜೆ ನೌಕರರಾಗಿದ್ದ ಕೃಷ್ಣಪ್ಪ ಅವರು ಜು.31ರಂದು ನಿವೃತ್ತರಾದರು. ಉಪ ವಿಭಾಗಾಧಿಕಾರಿ ಕಚೇರಿ ಸಿಬ್ಬಂದಿ ಸನ್ಮಾನ ಮಾಡಿ, ಗೌರವ ಸಲ್ಲಿಸಿದರು. ಅಲ್ಲದೆ ಎಲ್ಲರು ನಿಂತು ಸಾಮೂಹಿಕ ಫೋಟೊ ಕ್ಲಿಕ್ಕಿಸಿಕೊಂಡರು. ತಮ್ಮ … Read more

ಅಡಿಕೆ ರೇಟ್‌ | 31 ಜುಲೈ 2023 | ರಾಜ್ಯದ ಯಾವ್ಯಾವ ಮಾರುಕಟ್ಟೆಯಲ್ಲಿ ಇವತ್ತು ಎಷ್ಟಿದೆ ಅಡಿಕೆ ಧಾರಣೆ?

ADIKE-RATE-SHIVAMOGGA-LIVE-NEWS - Areca Price

SHIVAMOGGA LIVE | 31 JULY 2023 SHIMOGA : ಶಿವಮೊಗ, ಸಾಗರ ಸೇರಿದಂತೆ ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಇವತ್ತಿನ ಅಡಿಕೆ ಧಾರಣೆ (Adike Rate). ಶಿವಮೊಗ್ಗ ಮಾರುಕಟ್ಟೆ ಗೊರಬಲು 17499 43650 ಬೆಟ್ಟೆ 49099 54139 ರಾಶಿ 42099 56099 ಸರಕು 50009 78896 ಕುಮಟ ಮಾರುಕಟ್ಟೆ ಕೋಕ 23509 35209 ಚಿಪ್ಪು 32999 35509 ಫ್ಯಾಕ್ಟರಿ 15019 22969 ಹಳೆ ಚಾಲಿ 39099 41699 ಹೊಸ ಚಾಲಿ 38699 42009 ಪುತ್ತೂರು ಮಾರುಕಟ್ಟೆ ಕೋಕ … Read more

ತಾಲೂಕು ಕಚೇರಿಗೆ MLA ದಿಢೀರ್‌ ಭೇಟಿ, ಅಧಿಕಾರಿ, ಸಿಬ್ಬಂದಿಗಳ ಕುರ್ಚಿ ಖಾಲಿ ಖಾಲಿ, ಮುಂದೇನಾಯ್ತು?

Araga-Jnanendra-Sudden-Visit-to-Taluk-office-in-Thirthahalli

SHIVAMOGGA LIVE | 31 JULY 2023 THIRTHAHALLI : ಮಾಜಿ ಸಚಿವ ಆರಗ ಜ್ಞಾನೇಂದ್ರ ಇವತ್ತು ತೀರ್ಥಹಳ್ಳಿ ತಾಲೂಕು ಕಚೇರಿಗೆ ದಿಢೀರ್‌ ಭೇಟಿ (Sudden Visit) ನೀಡಿ ಪರಿಶೀಲಿಸಿದರು. ಈ ವೇಳೆ ಅಧಿಕಾರಿಗಳ ಕುರ್ಚಿಗಳು ಖಾಲಿ ಇದ್ದಿದ್ದನ್ನು ಕಂಡು ಆಕ್ರೋಶಗೊಂಡರು. ಸಂಜೆ 4.30ರ ಹೊತ್ತಿಗೆ ತಾಲೂಕು ಕಚೇರಿಗೆ ಶಾಸಕ ಆರಗ ಜ್ಞಾನೇಂದ್ರ ಹಠಾತ್‌ ಭೇಟಿ ನೀಡಿದ್ದರು. ಈ ವೇಳೆ ವಿವಿಧ ಸೆಕ್ಷನ್‌ಗಳಲ್ಲಿ ಅಧಿಕಾರಿಗಳು, ಸಿಬ್ಬಂದಿ ಇಲ್ಲದಿರುವುದನ್ನು ಕಂಡು ಸಿಟ್ಟಾದರು. ಕೂಡಲೆ ರಿಜಿಸ್ಟರ್‌ ತರಿಸಿಕೊಂಡು ಪರಿಶೀಲನೆ ನಡೆಸಿದರು. … Read more

ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗದಲ್ಲಿ ನಂದಿನಿ ಹಾಲು ರೇಟ್‌ ಹೆಚ್ಚಳ, ಹಿಂದೆ ಎಷ್ಟಿತ್ತು? ಈಗ ಎಷ್ಟಾಗುತ್ತೆ?

Nandini-Milk-In-Shimoga-Shimul

SHIVAMOGGA LIVE | 31 JULY 2023 SHIMOGA : ಆ.1ರಿಂದ ನಂದಿನಿ ಹಾಲು, ಮೊಸರು ಮತ್ತು ಸ್ವೀಟ್‌ ಲಸ್ಸಿ ದರ (Milk Rate) ಹೆಚ್ಚಳವಾಗಲಿದೆ. ಈ ಸಂಬಂಧ ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಹಾಲು ಒಕ್ಕೂಟದ ಆಡಳಿತ ಮಂಡಳಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಯಾವ್ಯಾವ ಹಾಲಿನ ದರ ಎಷ್ಟು? ಹಾಲು ವೆರೈಟಿ ಅಳತೆ ಹಿಂದಿನ ದರ ಹೊಸ ದರ ಟೋನ್ಡ್‌ ಹಾಲು 1 ಲೀಟರ್‌ 39 ರೂ. 42 ರೂ. ಟೋನ್ಡ್‌ ಹಾಲು 510 ಎಂ.ಎಲ್‌ … Read more