SHIMOGA NEWS, 21 SEPTEMBER 2024 : ಕಾಡಾನೆ (Wild Elephant) ದಾಳಿಗೆ ಸಿರಿಗೆರೆ ಭಾಗದಲ್ಲಿ ಬೆಳೆ ನಷ್ಟ ಉಂಟಾಗಿದೆ. ಕಳೆದ ರಾತ್ರಿ ಈ ಭಾಗದಲ್ಲಿ ತೋಟ, ಹೊಲಕ್ಕೆ ನುಗ್ಗಿರುವ ಕಾಡಾನೆಗಳು ಬೆಳೆ ಹಾನಿ ಮಾಡಿದೆ.
ಶಿವಮೊಗ್ಗ ತಾಲೂಕು ಸಿರಿಗೆರೆಯ ಆಂಧ್ರ ಕ್ಯಾಂಪ್ ಭಾಗದಲ್ಲಿ ಕಳೆದ ರಾತ್ರಿ ಹಲವರ ಜಮೀನಿಗೆ ಕಾಡಾನೆಗಳು ದಾಳಿ ನಡೆಸಿವೆ. ಜೋಳ, ಬಾಳೆ, ಅಡಿಕೆ, ತೆಂಗು ಬೆಳೆಗೆ ಹಾನಿಯಾಗಿದೆ. ಆನೆಗಳ ಉಪಟಳ ತಡೆಯುವಂತೆ ಸ್ಥಳೀಯರು ಅರಣ್ಯ ಇಲಾಖೆಗೆ ಮನವಿಗೆ ಮಾಡಿದ್ದಾರೆ.
ಈ ಸಂಬಂಧ ಶಿವಮೊಗ್ಗ ಲೈವ್.ಕಾಂ ಜೊತೆಗೆ ಮಾತನಾಡಿದ ಸ್ಥಳೀಯರಾದ ರಾಜೇಶ್, ಕಳೆದ ವಾರವು ಆನೆಗಳು ಬಂದಿದ್ದವು. ರಾತ್ರಿ ವೇಳೆ ಜಮೀನು ಕಾಯಲು ಹೋಗಿದ್ದರಿಂದ ಕೂಗಿ ಆನೆಗಳನ್ನು ಓಡಿಸಿದ್ದೆವು. ಇವತ್ತು ಕಾಡಾನೆಗಳು ದಾಳಿ ನಡೆಸಿವೆ. ಬೆಳೆ ನಷ್ಟಕ್ಕೆ ಪರಿಹಾರ ಕೇಳಿದರೆ ನೀವು ಆನೆ ಓಡಾಡುವ ಜಾಗದಲ್ಲಿ ಜಮೀನು ಮಾಡುತ್ತಿದ್ದೀರ ಎಂದು ಅಧಿಕಾರಿಗಳು ಹಾರಿ ಉತ್ತರ ನೀಡುತ್ತಾರೆ. ಬೆಳೆ ನಷ್ಟದಿಂದಾಗಿ ನಮ್ಮ ಜೀವನಕ್ಕೆ ತೊಂದರೆಯಾಗುತ್ತಿದೆ. ಆನೆಗಳ ಹಾವಳಿಗೆ ಅರಣ್ಯ ಇಲಾಖೆ ತಡೆಯೊಡ್ಡಲಿ ಎಂದರು.
ತಮ್ಮಡಿಹಳ್ಳಿ ಭಾಗದಲ್ಲಿ ಕಾಣಿಸಿದ್ದ ಆನೆ
ತಾಲೂಕಿನ ಆಯನೂರು ಹೋಬಳಿಯ ತಮ್ಮಡಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಲುಮೆಜಡ್ಡು ವರದಳ್ಳಿ ಚೌಡಪ್ಪ ಎಂಬುವರ ಗದ್ದೆಗೆ ಬುಧವಾರ ಬೆಳಗಿನ ಜಾವ ನುಗ್ಗಿದ ಕಾಡಾನೆಗಳು ಬೆಳೆ ನಾಶಮಾಡಿವೆ. ಮೂರು ಆನೆಗಳು ಕೂಡಿ, ಯರೆಬೀಸು, ಕೆಸುವಿನ ಹೊಂಡ, ಅಡೇರಿ ಭಾಗದಲ್ಲಿ ಸಂಚರಿಸುತ್ತಿವೆ.
ಗದ್ದೆ, ತೋಟಗಳಿಗೆ ನುಗ್ಗಿ ನಿರಂತರವಾಗಿ ಫಸಲು ಹಾಳುಮಾಡುತ್ತಿವೆ. ಈ ಭಾಗದಲ್ಲಿ ಸಣ್ಣ ಹಿಡುವಳಿದಾರರೇ ಹೆಚ್ಚಿದ್ದು, ಸಾಗುವಳಿ ಮಾಡಿದ ಭತ್ತದ ಗದ್ದೆಯನ್ನು ನಾಶಪಡಿಸುತ್ತಿವೆ. ಕೂಡಲೇ ಆನೆಗಳನ್ನು ಸ್ಥಳಾಂತರ ಮಾಡಬೇಕೆಂದು ರೈತರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ » ಸಾ ಮಿಲ್ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಮಾಲೀಕನ ಮಗ
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200