ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 2 SEPTEMBER 2023
ವಿಮಾನ ನಿಲ್ದಾಣ ಕುರಿತು ಹಾಡು ರೆಡಿ
SHIMOGA : ನಗರದ ಗಾಯಕರ ತಂಡ ಶಿವಮೊಗ್ಗ ವಿಮಾನ ನಿಲ್ದಾಣದ (Airport) ಮತ್ತು ವಿಮಾನಯಾನ ಸೇವೆ ಆರಂಭದ ಕುರಿತು ಕುರಿತು ಸಾಂಗ್ ರೆಡಿ ಮಾಡಿ, ಯು ಟ್ಯೂಬ್ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಫ್ಲೈ ಶಿವಮೊಗ್ಗ ಥೀಮ್ನೊಂದಿಗೆ ಹಾಡು ರಚಿಸಲಾಗಿದೆ. ಪೃಥ್ವಿ ಗೌಡ ಲಿರಿಕ್ಸ್ ಬರೆದಿದ್ದು, ಪಾರ್ಥ ಚಿರಂತನ್ ಮ್ಯೂಸಿಕ್ನಲ್ಲಿ ಹಾಡು ಮೂಡಿ ಬಂದಿದೆ. ಪೃಥ್ವಿ ಗೌಡ, ಪಾರ್ಥ ಚಿರಂತನ್ ಮತ್ತು ಸಂಜನಾ ಎಸ್.ಕುಮಾರ್ ಅವರು ಹಾಡಿಗೆ ಧ್ವನಿಗೂಡಿಸಿದ್ದಾರೆ. ಹಾಡಿನ ವಿಡಿಯೋ ಇಲ್ಲಿದೆ.
ರಾತ್ರೋರಾತ್ರಿ ಎತ್ತುಗಳು ನಾಪತ್ತೆ
SHIKARIPURA : ಮನೆ ಸಮೀಪ ಕಟ್ಟಿದ್ದ ಎರಡು ಎತ್ತುಗಳನ್ನು ಕಳ್ಳತನ ಮಾಡಲಾಗಿದೆ. ಶಿಕಾರಿಪುರ ತಾಲೂಕು ಹೊಸಮುಗುಳುಗೆರೆ ಗ್ರಾಮದ ಭರ್ಮಪ್ಪ ಕಾಶನ್ನನವರ್ ಅವರಿಗೆ ಸೇರಿದ ಎತ್ತುಗಳು ನಾಪತ್ತೆಯಾಗಿವೆ. ಮನೆ ಸಮೀಪದ ಬೀರಲಿಂಗೇಶ್ವರ ದೇವಸ್ಥಾನದ ಊಟದ ಹಾಲ್ ಪಕ್ಕದಲ್ಲಿ ಕಾಂಕ್ರಿಟ್ ರಸ್ತೆ ಬದಿಯಲ್ಲಿ ಕಟ್ಟಿ ಹಾಕಲಾಗಿತ್ತು. ರಾತ್ರಿ ಮೇವು ಹಾಕಿ ಭರ್ಮಪ್ಪ ಅವರು ಮನೆಗೆ ಬಂದಿದ್ದರು. ಬೆಳಗಿನ ಜಾವ ಬಂದು ನೋಡಿದಾಗ ಎತ್ತುಗಳು ನಾಪತ್ತೆಯಾಗಿದ್ದವು. ಎಲ್ಲಡೆ ಹುಡಕಾಡಿದರು ಎತ್ತುಗಳು ಸಿಗದ ಹಿನ್ನೆಲೆ ಠಾಣೆಗೆ ದೂರು ನೀಡಿದ್ದಾರೆ. ಶಿಕಾರಿಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ – ಭದ್ರಾವತಿಯ ಇಬ್ಬರು ಶಿಕ್ಷಕರು ಅಮಾನತು, ಕಾರಣವೇನು?
ತೋಟದಲ್ಲಿ ಮೋಟರ್ ಕಳ್ಳತನ
BHADRAVATHI : ಪಂಪ್ ಹೌಸ್ನ ಗೋಡೆ ಒಡೆದು ಮೋಟರ್ ಕಳ್ಳತನ ಮಾಡಲಾಗಿದೆ. ಭದ್ರಾವತಿ ತಾಲೂಕು ಅರಳಿಹಳ್ಳಿಯಲ್ಲಿ ಘಟನೆ ಸಂಭವಿಸಿದೆ. ಸತೀಶ್ ಕುಮಾರ್ ಎಂಬುವವರ ತೋಟದಲ್ಲಿನ ಪಂಪ್ ಹೌಸ್ ಗೋಡೆ ಒಡೆದು, ಕಬ್ಬಿಣದ ಬಾಗಲಿನ ಇಂಟರ್ ಲಾಕ್ ಮುರಿದು ಕಳ್ಳರು ಒಳ ನುಗ್ಗಿದ್ದಾರೆ. ಪಂಪ್ ಹೌಸ್ನಲ್ಲಿದ್ದ 15 ಹೆಚ್.ಪಿ. ಕರೆಂಟ್ ಮೋಟರ್, ಒಂದು ಸ್ಟಾಟರ್ ಬಾಕ್ಸ್, 2 ಕಬ್ಬಿಣ ಹಾರೆಗಳನ್ನು ಕಳ್ಳತನ ಮಾಡಲಾಗಿದೆ. ಇವುಗಳ ಅಂದಾಜು ಮೌಲ್ಯ 60 ಸಾವಿರ ರೂ. ಎಂದು ದೂರಿನಲ್ಲಿ ತಿಳಿಸಲಾಗಿದೆ. ಭದ್ರಾವತಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
LATEST NEWS
- ಶಿವಮೊಗ್ಗದ ದೇಗುಲಗಳಿಗೆ ಸಂಜೆ ಬಳಿಕ ಹೆಚ್ಚಿದ ಭಕ್ತರು, ವಿಶೇಷ ಪೂಜೆ

- ಬೆಟ್ಟೆ, ರಾಶಿ ರೇಟ್ ಇವತ್ತು ಎಷ್ಟಿದೆ? ಸರಕು ದರ ಮತ್ತೆ ಹೆಚ್ಚಾಯ್ತಾ? – 3 ಮಾರ್ಚ್ 2026

- ಶಿವಮೊಗ್ಗದಲ್ಲಿ ರಂಗ ಹಬ್ಬ, ನಾಲ್ಕು ದಿನ ನಾಟಕೋತ್ಸವ, ಯಾವ್ಯಾವ ದಿನ ಯಾವ ನಾಟಕವಿದೆ?

- ಶಿವಮೊಗ್ಗ ಬಸ್ ನಿಲ್ದಾಣದಲ್ಲಿ ವ್ಯಕ್ತಿಗೆ ಬಿಸಿ ಮುಟ್ಟಿಸಿದ ಅಕ್ಕ ಪಡೆ, ಆಗಿದ್ದೇನು?

- ದುರ್ಗಿಗುಡಿಯಲ್ಲಿ ವೈಭವದ ರಥೋತ್ಸವ, ಈ ಬಾರಿ ಉತ್ಸವ ಬೆಳಗ್ಗೆ ನಡೆದಿದ್ದೇಕೆ?

About The Editor
ನಿತಿನ್ ಆರ್.ಕೈದೊಟ್ಲು






