‘ಸಾಗರದ ಇಂದಿರಾ ಕಾಲೇಜು ವಿದ್ಯಾರ್ಥಿಗಳು ಸಣ್ಣಪುಟ್ಟದ್ದಕ್ಕೂ 400 ಕಿ.ಮೀ ಹೋಗೋದು ಬೇಡ’

250221 MLA Halappa Visit Idira Gandhi College 1

ಶಿವಮೊಗ್ಗ ಲೈವ್.ಕಾಂ | SAGARA NEWS | 25 FEBRUARY 2021 ಸಾಗರದ ಇಂದಿರಾ ಗಾಂಧಿ ಕಾಲೇಜನ್ನು ವಿಜಯಾಪುರದ ಅಕ್ಕಮಹಾದೇವಿ ವಿಶ್ವವಿದ್ಯಾಲಯದ ವ್ಯಾಪ್ತಿಗೆ ತರುವ ಸರ್ಕಾರದ ನಿರ್ಧಾರಕ್ಕೆ ಶಾಸಕ ಹರತಾಳು ಹಾಲಪ್ಪ ವಿರೋಧ ವ್ಯಕ್ತಪಡಿಸಿದ್ದಾರೆ. ಇಂದಿರಾ ಗಾಂಧಿ ಕಾಲೇಜಿನಲ್ಲಿ ಇವತ್ತು ನಡೆದ ಕಾಲೇಜು ಅಭಿವೃದ್ಧಿ ಸಮಿತಿ ಸಭೆಯಲ್ಲಿ ಮಾತನಾಡಿದ ಶಾಸಕ ಹರತಾಳು ಹಾಲಪ್ಪ, ಅಕ್ಕಮಹಾದೇವಿ ವಿವಿಯೊಂದಿಗೆ ಈ ಕಾಲೇಜನ್ನು ಸಂಯೋಜನೆಗೊಳ್ಳಲು ಅವಕಾಶ ನೀಡುವುದಿಲ್ಲ ಎಂದರು. ಸಣ್ಣಪುಟ್ಟದಕ್ಕೂ 400 ಕಿಮೀ ಹೋಗಬೇಕು ಅಕ್ಕಮಹಾದೇವಿ ವಿವಿಯೊಂದಿಗೆ ಸಂಯೋಜನೆಗೊಂಡರೆ ಇಲ್ಲಿಯ ವಿದ್ಯಾರ್ಥಿಗಳು … Read more

ಬೇಳೂರು ಗೋಪಾಲಕೃಷ್ಣ ಹುಟ್ಟುಹಬ್ಬ, ಅಭಿಮಾನಿಗಳಿಂದ ಗೋಶಾಲೆಗೆ ಮೇವು

220221 Beluru Gopalakrishna Birthday Celebration 1

ಶಿವಮೊಗ್ಗ ಲೈವ್.ಕಾಂ | SAGARA NEWS | 22 FEBRUARY 2021 ಮಾಜಿ ಸಚಿವ ಬೇಳೂರು ಗೋಪಾಲೃಷ್ಣ ಅವರ ಹುಟ್ಟುಹಬ್ಬದ ಹಿನ್ನೆಲೆ ಅವರ ಅಭಿಮಾನಿಗಳು ಇವತ್ತು ಗೋ ಶಾಲೆಗೆ ಮೇವು ವಿತರಣೆ ಮಾಡಿದ್ದಾರೆ. ಸಾಗರದ ಬೇಳೂರು ಗೋಪಾಲಕೃಷ್ಣ ಅಭಿಮಾನಿ ಬಳಗದ ವತಿಯಿಂದ, ಕೆಪಿಸಿಸಿ ವಕ್ತಾರ ಬೇಳೂರು ಗೋಪಾಲಕೃಷ್ಣ ಅವರ 55ನೇ ಹುಟ್ಟುಹಬ್ಬದ ಹಿನ್ನೆಲೆ ಮೇವು ನೀಡಲಾಯಿತು. ಸಾಗರದ ವರದಾಪುರದಲ್ಲಿ ಇರುವ ಗೋಶಾಲೆಗೆ ವಿತರಣೆ ಮಾಡಲಾಗಿದೆ. ಗಣಪತಿ ಮಂಡಗಳಲೆ , ಸುಧಾಕರ ಕುಗ್ವೆ, ಮನೋಜ್ ಕುಗ್ವೆ ಸೇರಿದಂತೆ ಹಲವರು … Read more

RAILWAY | ತಾಳಗುಪ್ಪದಿಂದಲೂ ಶುರು ರೈಲ್ವೆ ಪಾರ್ಸಲ್ ಸರ್ವಿಸ್, ಯಾವೆಲ್ಲ ರೈಲಲ್ಲಿದೆ ಸೇವೆ? ಏನೆಲ್ಲ ಕಳುಹಿಸಬಹುದು?

Talaguppa Railway Station 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 10 FEBRUARY 2021 ತಾಳಗುಪ್ಪದ ರೈಲ್ವೆ ನಿಲ್ದಾಣದಲ್ಲಿಯೂ ರೈಲ್ವೆ ಪಾರ್ಸಲ್ ಸರ್ವಿಸ್ ಆರಂಭವಾಗಿದೆ. ಈ ಸಂಬಂಧ ನೈಋತ್ಯ ರೈಲ್ವೆ ವಿಭಾಗದ ಸೀನಿಯರ್ ಡಿವಿಷನಲ್ ಕಮರ್ಷಿಯಲ್ ಮ್ಯಾನೇಜರ್ ಡಾ. ಮಂಜುನಾಥ ಕನಮಾಡಿ ಪ್ರಕಟಣೆಯಲ್ಲಿ ತಿಳಿಸಿದೆ ಯಾವೆಲ್ಲ ರೈಲಿನಲ್ಲಿ ಪಾರ್ಸಲ್ ಸೇವೆ ಇದೆ? ರೈಲು ಸಂಖ್ಯೆ  06529 / 06530 ಬೆಂಗಳೂರು – ತಾಳಗುಪ್ಪ – ಬೆಂಗಳೂರು (ಪ್ರತಿ ದಿನ) ರೈಲು ಸಂಖ್ಯೆ 06227 / 06228 ಮೈಸೂರು – ತಾಳಗುಪ್ಪ … Read more

SAGARA | ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಮನೆಗೆ ದಿಢೀರ್ ಭೇಟಿ ನೀಡಿದ ರೇವಣ್ಣ, ಒಂದು ಗಂಟೆಗೂ ಹೆಚ್ಚು ಹೊತ್ತು ಚರ್ಚೆ

100221 HD Revanna Visit Kagodu Thimmappa House 1

ಶಿವಮೊಗ್ಗ ಲೈವ್.ಕಾಂ | SAGARA NEWS | 10 FEBRUARY 2021 ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅವರು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರ ಮನೆಗೆ ದಿಢೀರ್ ಭೇಟಿ ನೀಡಿ, ಬಹು ಹೊತ್ತು ಚರ್ಚೆ ನಡೆಸಿದರು. ರೇವಣ್ಣ ಭೇಟಿ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ. ಒಂದು ಗಂಟೆಗೂ ಹೆಚ್ಚು  ಹೊತ್ತು ಚರ್ಚೆ ಸಾಗರದಲ್ಲಿರುವ ಕಾಗೋಡು ತಿಮ್ಮಪ್ಪ ಅವರ ಮನೆಗೆ ಭೇಟಿ ನೀಡಿದ್ದ ಹೆಚ್‍.ಡಿ.ರೇವಣ್ಣ, ಒಂದು ಗಂಟೆಗೂ ಹೆಚ್ಚು ಹೊತ್ತು ಚರ್ಚೆ ನಡೆಸಿದರು. ರಾಜಕೀಯ ಬೆಳವಣಿಗೆಗಳ ಕುರಿತು ಚರ್ಚೆ … Read more

SAGARA | ಸೈಕಲ್, ಬೈಕ್ ಡಿಕ್ಕಿ, ಸೈಕಲ್ ಸವಾರ ಸಾವು, ಬೈಕ್ ಸವಾರನಿಗೆ ಗಂಭೀರ ಗಾಯ

090221 Accident at Talaguppar Maraturu 1

ಶಿವಮೊಗ್ಗ ಲೈವ್.ಕಾಂ | SAGARA NEWS | 09 FEBRUARY 2021 ಸೈಕಲ್ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿದ್ದು, ಒಬ್ಬರು ಸಾವನ್ನಪ್ಪಿದ್ದು, ಮತ್ತೊಬ್ಬರಿಗೆ ಗಂಭೀರ ಗಾಯವಾಗಿದೆ. ಸಾಗರ ತಾಲೂಕು ತಾಳಗುಪ್ಪದ ಮರತ್ತೂರು ಗ್ರಾಮದ ಸಮೀಪದ ತಿರುವಿನಲ್ಲಿ ಸಂಭವಿಸಿದೆ. ಸೈಕಲ್ ಸವಾರ ಮರತ್ತೂರಿನ ಅಣ್ಣಪ್ಪ (55) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸಿದ್ದಾಪುರ ತಾಲೂಕು ನೆಜ್ಜೂರಿನ ಬೈಕ್ ಸವಾರನಿಗೆ ಗಂಭೀರ ಗಾಯವಾಗಿದೆ. ಮತ್ತೊಬ್ಬ ಬೈಕ್ ಸವಾರನಿಗೂ ಗಾಯವಾಗಿದೆ. ಮರತ್ತೂರು ಕ್ರಾಸ್‍ನಲ್ಲಿ ವಿದ್ಯುತ್ ದೀಪವಿರದ ಕಾರಣ ಎದುರಿಗಿದ್ದವರು ಕಾಣಿಸದೆ ಅಪಘಾತ ಸಂಭವಿಸಿರುವ … Read more

SAGARA | ಮೋದಿ ಮಾಡಿದ ರೀತಿಯಲ್ಲಿ ಬ್ರಿಟೀಷರೂ ನಡೆದುಕೊಂಡಿರಲಿಲ್ಲ, ಪ್ರತಿಭಟನೆಯಲ್ಲಿ ಕಾಗೋಡು ಆಕ್ರೋಶ

080221 Congess Protest Against BJP Modi in Sagara 1

ಶಿವಮೊಗ್ಗ ಲೈವ್.ಕಾಂ | SAGARA NEWS | 08 FEBRUARY 2021 ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಸಾಗರದಲ್ಲಿ ಪ್ರತಿಭಟನೆ ನಡೆಸಲಾಯಿತು. ಬ್ಲಾಕ್ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಲಾಯಿತು. ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡಸಿ ಸಾಗರ ಹೊಟೇಲ್ ಸರ್ಕಲ್‍ನಲ್ಲಿ ಪ್ರತಿಭಟನಾ ಸಭೆ ನಡೆಸಲಾಯಿತು. ಎತ್ತಿನಗಾಡಿ, ಸೈಕಲ್ ಸವಾರಿ, ಗ್ಯಾಸ್ ಸಿಲಿಂಡರ್ ಪ್ರದರ್ಶನದ ಮೂಲಕ ಪ್ರತಿಭಟನೆ ನಡೆಸಲಾಯಿತು. ಸಭೆಯಲ್ಲಿ … Read more

SAGARA | 17 ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿ ಹುಟ್ಟೂರಿಗೆ ಮರಳಿದ ಯೋಧ, ಅದ್ಧೂರಿ ಸ್ವಾಗತ

080221 Retired Soldier Mahesh Welcomed at village sagara 1

ಶಿವಮೊಗ್ಗ ಲೈವ್.ಕಾಂ | SAGARA NEWS | 08 FEBRUARY 2021 17 ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿ ಹುಟ್ಟೂರಿಗೆ ಮರಳಿದ ಬಿ.ಮಹೇಶ್ ಅವರಿಗೆ ಗ್ರಾಮಸ್ಥರು ಅದ್ಧೂರಿ ಸ್ವಾಗತ ನೀಡಿದ್ದಾರೆ. ಸಾಗರ ತಾಲೂಕು ಕರೂರು ಹೋಬಳಿಯ ಎಸ್.ಎಸ್.ಭೋಗ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಂಚಿಕೇರಿ ಗ್ರಾಮದ ಬಿ.ಮಹೇಶ್ ಅವರು ಸೇನೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಆಯಕಟ್ಟಿನ ಸ್ಥಳಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. 2004ರಲ್ಲಿ ಸೇನೆಗೆ ಸೇರಿದ ಮಹೇಶ್ ಅವರು ಜಮ್ಮು ಕಾಶ್ಮೀರ, ಪಂಜಾಬ್, ಮೈಸೂರು, ಲಡಾಕ್, ಛತ್ತೀಸ್‍ಗಢ, ದೆಹಲಿ, ಅಸ್ಸಾಂ, … Read more

SAGARA | ನಡುರಸ್ತೆಯಲ್ಲಿ ಸಿಲಿಂಡರ್ ಇರಿಸಿ, ಬೈಕ್ ನಿಲ್ಲಿಸಿ ವಿಭಿನ್ನ ಪ್ರತಿಭಟನೆ

040221 Sagara Janamana Protest Against Price Raise 1

ಶಿವಮೊಗ್ಗ ಲೈವ್.ಕಾಂ | SAGARA NEWS | 04 FEBRUARY 2021 ನಡು ರಸ್ತೆಯಲ್ಲಿ ಸಿಲಿಂಡರ್ ಇರಿಸಿ, ಪೆಟ್ರೋಲ್ ಬೆಲೆ ಇಳಿಸಿ ಎಂಬ ಬೋರ್ಡ್ ತೂಗು ಹಾಕಿರುವ ವಾಹನ ನಿಲ್ಲಿಸಿ, ಬೆಲೆ ಏರಿಕೆ ವಿರುದ್ಧ ಸಾಗರದಲ್ಲಿ ವಿಭಿನ್ನವಾಗಿ ಪ್ರತಿಭಟನೆ ನಡೆಸಲಾಯಿತು. ಇದನ್ನೂ ಓದಿ | ಇದು ಸಣ್ಣ ಸಾಧನೆಯಲ್ಲ, ಇದಕ್ಕೆಲ್ಲ ನೀವೆ ಕಾರಣ, ಧನ್ಯವಾದ ಶಿವಮೊಗ್ಗ ಪಟ್ಟಣದ ಸಾಗರ ಹೊಟೇಲ್ ಸರ್ಕಲ್‍ನಲ್ಲಿ  ಜನಮನ ಸಂಘಟನೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಮತ್ತು ಅಗತ್ಯ ವಸ್ತುಗಳ … Read more

SAGARA | ಗಣಪತಿ ಕೆರೆಯಲ್ಲಿ ನೀರು ನಾಯಿಗಳ ಚಿನ್ನಾಟ, ಕಣ್ತುಂಬಿಕೊಳ್ಳಲು ಬರ್ತಿದ್ದಾರೆ ಜನ, ಮೀನುಗಾರರಿಗೆ ಸಂಕಷ್ಟ

040221 NEERU NAYI at Sagara Ganapathi Kere 1

ಶಿವಮೊಗ್ಗ ಲೈವ್.ಕಾಂ | SAGARA NEWS | 04 FEBRUARY 2021 ಸಾಗರದ ಗಣಪತಿ ಕೆರೆಯಲ್ಲಿ ನೀರು ನಾಯಿಗಳು ಪ್ರತ್ಯಕ್ಷವಾಗಿವೆ. ಇವುಗಳ ಚಲನವಲನ, ಚಿನ್ನಾಟವನ್ನು ಕಣ್ತುಂಬಿಕೊಳ್ಳಲು, ಮೊಬೈಲ್‍ನಲ್ಲಿ ಸೆರೆ ಹಿಡಿಯಲು ಹಲವರು ಕೆರೆ ಬಳಿಗೆ ಬರುತ್ತಿದ್ದಾರೆ. ಕಳೆದ ಕೆಲವು ದಿನದಿಂದ ದೊಡ್ಡ ಸಂಖ್ಯೆಯಲ್ಲಿ ನೀರು ನಾಯಿಗಳು ಗಣಪತಿ ಕೆರೆಯಲ್ಲಿ ಪ್ರತ್ಯಕ್ಷವಾಗಿವೆ. ಕೆರೆಯಲ್ಲಿ ಇರುವ ಮೀನುಗಳನ್ನ ಹಿಡಿದು ತಿನ್ನುತ್ತಿರುವ ನೀರು ನಾಯಿ, ಸ್ಥಳೀಯರ ಆಕರ್ಷಣೆಯಾಗಿವೆ. ಶರವಾತಿ ಹಿನ್ನೀರು, ವರದಾ ನದಿಗಳು ನೀರು ನಾಯಿಗಳ ಆವಾಸ ಸ್ಥಾನ. ವರದಾ ನದಿಯ … Read more

SAGARA | ತಾಳಗುಪ್ಪದಲ್ಲಿ ಹೆದ್ದಾರಿ ತಡೆದು ಪ್ರತಿಭಟನೆ, ಸಮಸ್ಯೆ ಬಗೆಹರಿಯದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ

030221 Talaguppa Road Block Protest 1

ಶಿವಮೊಗ್ಗ ಲೈವ್.ಕಾಂ | SAGARA NEWS | 03 FEBRUARY 2021 ರಾಷ್ಟ್ರೀಯ ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿ ವಿರೋಧಿಸಿ ಸಾಗರ ತಾಲೂಕು ತಾಳಗುಪ್ಪದಲ್ಲಿ  ಇವತ್ತು ಪ್ರತಿಭಟನೆ ನಡೆಸಲಾಯಿತು. ರಸ್ತೆ ತಡೆ ನಡೆಸಿದ ಸ್ಥಳೀಯರು, ಹೆದ್ದಾರಿ ಪ್ರಾಧಿಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ರಾಷ್ಟ್ರೀಯ ಹೆದ್ದಾರಿ 206ರಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ಸರಿಯಾಗಿ ಮಣ್ಣು ಹಾಕಿಲ್ಲ. ಗ್ರಾವೆಲ್ ಸರಿಯಾಗಿ ಆಗದೆ ಇರುವುದರಿಂದ ಅಪಘಾತಗಳು ಹೆಚ್ಚಾಗಿವೆ. ಇಕ್ಕೆಲಗಳಲ್ಲಿ ಸರಿಯಾಗಿ ಡಾಂಬರೀಕರಣವು ಆಗಿಲ್ಲ.  ಹಾಗಾಗಿ ರಸ್ತೆಯ ಅಂಚಿಗೆ ಬಂದು ಹಲವು ದ್ವಿಚಕ್ರ ವಾಹನ ಸವಾರರು … Read more