ಇನ್ಮುಂದೆ ಸಕ್ರೆಬೈಲಿನಲ್ಲಿ ಆನೆಗಳನ್ನು ನೊಡುವುದರ ಜೊತೆಗೆ ದೋಣಿ ವಿಹಾರಕ್ಕೂ ಚಾನ್ಸ್

Boat-Riding-in-Shimoga-Sakrebyle-Elephant-Camp

SHIVAMOGGA LIVE NEWS | SHIMOGA | 2 ಜುಲೈ 2022 ಇನ್ಮುಂದೆ ಸೆಕ್ರಬೈಲಿಗೆ ಹೋದರೆ ಆನೆಗಳನ್ನು ಕಣ್ತುಂಬಿಕೊಳ್ಳುವುದರ ಜೊತೆಗೆ ತುಂಗಾ ನದಿ ಹಿನ್ನೀರಿನಲ್ಲಿ ದೋಣಿ (BOAT RIDE) ವಿಹಾರವನ್ನೂ ಮಾಡಬಹುದಾಗಿದೆ. ತುಂಗೆಯ ಹಿನ್ನೀರಿನಲ್ಲಿ ಬೋಟ್ ಸ್ಪೋರ್ಟ್ಸ್’ಗೆ ಚಾಲನೆ ನೀಡಲಾಗಿದೆ. ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಅವರು ಚಾಲನೆ ನೀಡಿದರು. ಒಂದು ಬೋಟ್, ಎರಡು ಕಯಾಕ್ ಬೋಟ್’ಗಳನ್ನು ಲೋಕಾರ್ಪಣೆ ಮಾಡಲಾಗಿದೆ. ಸಂಸದರಿಂದ ದೋಣಿ ಸವಾರಿ ದೋಣಿ ವಿಹಾರಕ್ಕೆ (BOAT RIDE) ಚಾಲನೆ ನೀಡಿದ ಬಳಿಕ ಸಂಸದ ಬಿ.ವೈ.ರಾಘವೇಂದ್ರ ಅವರು … Read more

ಶಿವಮೊಗ್ಗದಲ್ಲಿ KSRTC ಬಸ್, ಖಾಸಗಿ ಬಸ್ ಮಧ್ಯೆ ಭೀಕರ ಅಪಘಾತ

KSRTC-Bus-KKB-bus-collision-near-totadakere

SHIVAMOGGA LIVE NEWS | SHIMOGA | 1 ಜುಲೈ 2022 ಬಸ್ಸುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು ಇಬ್ಬರ ಚಾಲಕರು ಸೇರಿ 40 ಪ್ರಯಾಣಿಕರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಶಿವಮೊಗ್ಗತ ಲಕ್ಕಿನಕೊಪ್ಪ ಗ್ರಾಮದ ಸಮೀಪದ ತೋಟದ ಕೆರೆ ಬಳಿಕ ಘಟನೆ ಸಂಭವಿಸಿದೆ. KSRTC BUS ಮತ್ತು ಕೆಕೆಬಿ ಸಂಸ್ಥೆಯ ಖಾಸಗಿ ಬಸ್ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಚಾಲಕರಿಗೆ ಗಂಭೀರ ಗಾಯ KSRTC ಬಸ್ ಶೃಂಗೇರಿಯಿಂದ ಶಿವಮೊಗ್ಗಕ್ಕೆ ಆಗಮಿಸುತ್ತಿತ್ತು. ಖಾಸಗಿ ಬಸ್ … Read more

ಸಕ್ರೆಬೈಲಿನಿಂದ 6 ಕಿ.ಮೀ ಸ್ವಚ್ಛತೆ, ವಿನಯ್ ಗುರೂಜಿ, ಡಾ.ಸರ್ಜಿ ನೇತೃತ್ವದಲ್ಲಿ ಅಭಿಯಾನ

Vinay-guruji-cleaning-in-Sakrebyle

SHIVAMOGGA LIVE NEWS | SHIMOGA | 30 ಜೂನ್ 2022 ಪರಿಸರ (NATURE) ರಕ್ಷಣೆಗೆ ಕಠಿಣ ಕಾನೂನು ಜಾರಿ ಮಾಡುವ ಅವಶ್ಯಕತೆ ಇದೆ. ಪರಿಸರ ನಾಶ ಮಾಡುವವರಿಗೆ ದೊಡ್ಡ ಮಟ್ಟದ ದಂಡ ಹಾಕಬೇಕಿದೆ. ಆಗ ಮಾತ್ರ ಪರಿಸರ ರಕ್ಷಣೆ ಮಾಡಲು ಸಾಧ್ಯ ಎಂದು ಹರಿಹರಪುರದ ಗೌರಿಗದ್ದೆ ಅವಧೂತ ವಿನಯ್ ಗುರೂಜಿ (VINAY GURUJI) ಅಭಿಪ್ರಾಯ ವ್ಯಕ್ತಪಡಿಸಿದರು. ಸಕ್ರೆಬೈಲು ಆನೆ ಬಿಡಾರದಿಂದ 6 ಕಿ.ಮೀ  ವ್ಯಾಪ್ತಿಯಲ್ಲಿ ನಡೆದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಸ ಹಾಕಿದವರಿಗೆ ಅರಣ್ಯ … Read more

ಶಿವಮೊಗ್ಗ – ತೀರ್ಥಹಳ್ಳಿ ಹೆದ್ದಾರಿಯಲ್ಲಿ ನಿಲ್ಲಿಸಿದ್ದ ಆಟೋಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಖಾಸಗಿ ಬಸ್

Shimoga Map Graphics

SHIVAMOGGA LIVE NEWS | SHIMOGA | 29 ಜೂನ್ 2022 ರಸ್ತೆ ಬದಿ ನಿಲ್ಲಿಸಿದ್ದ ಆಟೋಗೆ ಖಾಸಗಿ ಬಸ್ ಡಿಕ್ಕಿ (ACCIDENT) ಹೊಡೆದಿದೆ. ಆಟೋದಲ್ಲಿದ್ದವರು ಅದೃಷ್ಟವಶಾತ್ ಪ್ರಣಪಾಯದಿಂದ ಪಾರಾಗಿದ್ದಾರೆ. ಶಿವಮೊಗ್ಗ – ತೀರ್ಥಹಳ್ಳಿ ಹೆದ್ದಾರಿಯ ಹೊನ್ನಾಪುರ ಗ್ರಾಮದ ಬಸ್ ನಿಲ್ದಾಣದ ಬಳಿ ಘಟನೆ ಸಂಭವಿಸಿದೆ. ಘಟನೆಯಲ್ಲಿ ಕಾವ್ಯಾ (25), ಸಾವಿತ್ರಮ್ಮ (65), ರಾಜು (35) ಎಂಬುವವರು ಗಾಯಗೊಂಡಿದ್ದಾರೆ. ಹೇಗಾಯ್ತು ಘಟನೆ? ಹಸುಗಳಿಗೆ ಮೇವು ತರಲು ಸಾವಿತ್ರಮ್ಮ ಅವರು ಲಗೇಜ್ ಆಟೋದಲ್ಲಿ ಮಗ ಮತ್ತು ಸೊಸೆಯ ಜೊತೆ … Read more

ದೇವಸ್ಥಾನದಲ್ಲಿ ಅಪ್ರಾಪ್ತೆಯ ಮದುವೆ, 8 ಮಂದಿ ವಿರುದ್ಧ ಕೇಸ್, ಆರೋಪಿಗಳು ನಾಪತ್ತೆ

HIVAMOGGA-NEWS- map

SHIVAMOGGA LIVE NEWS | SHIMOGA | 28 ಜೂನ್ 2022 ದೇವಸ್ಥಾನ ಒಂದರಲ್ಲಿ ಅಪ್ರಾಪ್ತೆಯೊಬ್ಬಳಿಗೆ ವಿವಾಹ ಮಾಡಿಸಲಾಗಿದೆ. ದೂರದ ಸಂಬಂಧಿಯೊಬ್ಬರ ಜೊತೆಗೆ ವಿವಾಹವಾಗಿದೆ (CHILD MARRIAGE). ಈಗ ಬಾಲಕಿಯನ್ನು ರಕ್ಷಣೆ ಮಾಡಿ ಬಾಲಕಿಯರ ಬಾಲ ಮಂದಿರದಲ್ಲಿ ಇರಿಸಲಾಗಿದೆ. ಶಿವಮೊಗ್ಗ ತಾಲೂಕಿನ ಗ್ರಾಮವೊಂದರಲ್ಲಿ ಘಟನೆ ಸಂಭವಿಸಿದೆ. ಗ್ರಾಮದ ದೇವಸ್ಥಾನದಲ್ಲಿ ಬಾಲಕಿಗೆ ವಿವಾಹ (CHILD MARRIAGE) ಮಾಡಿಸಲಾಗಿತ್ತು. ಚಿಕ್ಕಮಗಳೂರಿನ ದೂರದ ಸಂಬಂಧಿಯೊಬ್ಬರ ಜೊತೆಗೆ ಬಾಲಕಿ ಮದುವೆಯಾಗಿದ್ದಳು. 17 ವರ್ಷದ ಬಾಲಕಿಗೆ ವಿವಾಹ ಮಾಡಿಸಿರುವ ಕುರಿತು ಪೊಲೀಸರಿಗೆ ಮಾಹಿತಿ ಲಭ್ಯವಾಗಿತ್ತು. … Read more

ಹೊಳಲೂರು ಸುತ್ತಮುತ್ತ ಜೂನ್ 18ರಂದು ಕರೆಂಟ್ ಇರಲ್ಲ

POWER-CUT-UPDATE-NEWs ELECTRICITY

SHIVAMOGGA LIVE NEWS | SHIMOGA | 17 ಜೂನ್ 2022 ಹೊಳಲೂರು ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಕಾಮಗಾರಿ ನಡೆಸಲಾಗುತ್ತಿದೆ. ಆದ್ದರಿಂದ ಜೂನ್ 18 ರಂದು ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ಹೊಳಲೂರು ಸೇರಿದಂತೆ ವಿವಿಧೆಡೆ ವಿದ್ಯುತ್ ವ್ಯತ್ಯಯವಾಗಲಿದೆ. ಎಲ್ಲೆಲ್ಲಿ ಕರೆಂಟ್ ಇರಲ್ಲ? ಹೊಳಲೂರು, ಮಡಿಕೆ ಚೀಲೂರು, ಹಾಡೋನಹಳ್ಳಿ, ಹೊಳೆಹಟ್ಟಿ, ಸೂಗೂರು, ಕ್ಯಾತಿನಕೊಪ್ಪ, ಬುಳ್ಳಾಪುರ, ಬೇಡರಹೊಸಳ್ಳಿ, ಹರಮಘಟ್ಟ, ಸೋಮಿನಕೊಪ್ಪ, ಆಲದಹಳ್ಳಿ, ಸುತ್ತುಕೋಟೆ, ಕೊಮ್ಮನಾಳ್, ಬಿಕ್ಕೋನಹಳ್ಳಿ, ಬೂದಿಗೆರೆ, ಬೀರನಕೆರೆ, ಬನ್ನಿಕೆರೆ ಗ್ರಾಮಪಂಚಾಯತಿ ಹಾಗೂ … Read more

ಹೊಟ್ಟೆ ತುಂಬಾ ತಿಂದು, ಬಿಲ್ ಕೇಳಿದ್ದಕ್ಕೆ ಹೊಟೇಲ್ ಮಾಲೀಕನಿಗೆ ಒಡೆದ ಬಾಟಲಿಯಲ್ಲಿ ಚುಚ್ಚಿದರು

Tunga-Nagara-Police-Station-Shimoga

SHIVAMOGGA LIVE NEWS | SHIMOGA | 15 ಜೂನ್ 2022 ಹೊಟೇಲ್’ನಲ್ಲಿ ಊಟ ಮಾಡಿ, ಬಿಲ್ ಪಾವತಿಸುವಂತೆ ತಿಳಿಸಿದ ಮಾಲೀಕನಿಗೆ ಒಡೆದ ಬಾಟಲಿಯಲ್ಲಿ ಚುಚ್ಚಲು ಯತ್ನಿಸಿ, ಕೊಲೆ ಬೆದರಿಕೆ ಒಡ್ಡಲಾಗಿದೆ. ಈ ಸಂಬಂಧ ಇಬ್ಬರು ಯುವಕರ ವಿರುದ್ಧ ಪ್ರಕರಣ ದಾಖಲಾಗಿದೆ. ASSAULT ಶಿವಮೊಗ್ಗದ ಸಕ್ರೆಬೈಲು ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಸಕ್ರೆಬೈಲು ಹೊಟೇಲ್’ನ ಕೆ.ಎಂ.ರವಿ ಎಂಬುವವರ ಮೇಲೆ ಹಲ್ಲೆ ನಡೆಸಲಾಗಿದೆ. ಏನಿದು ಪ್ರಕರಣ? ದಾಳಿಗೇನು ಕಾರಣ? ಸಕ್ರೆಬೈಲು ಹೊಟೇಲ್’ಗೆ ಬಂದಿದ್ದ ನಾಲ್ವರು ಯುವಕರು ಮಧ್ಯಾಹ್ನದಿಂದ ಸಂಜೆವರೆಗೆ ಇದ್ದರು. … Read more

ರಾತ್ರಿ ಕೊಟ್ಟಿಗೆಯಲ್ಲಿದ್ದ ಎತ್ತುಗಳು ಬೆಳಗಾಗುವುದರಲ್ಲಿ ಮಾಯ, ಕಂಗಾಲದ ರೈತ

crime name image

SHIVAMOGGA LIVE NEWS | SHIMOGA | 15 ಜೂನ್ 2022 ಮನೆ ಮುಂದಿನ ಕೊಟ್ಟಿಗೆಯಲ್ಲಿ ರಾತ್ರಿ ಕಟ್ಟಿ ಹಾಕಿದ್ದ ಎರಡು ಎತ್ತುಗಳು ಬೆಳಗಾಗುವುದರಲ್ಲಿ ನಾಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿ ಎತ್ತುಗಳು ಕಳ್ಳತನವಾಗಿರುವ ಕುರಿತು ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. OX THEFT ಶಿವಮೊಗ್ಗ ತಾಲೂಕು ಕೆಳಗಿನ ಕುಂಚೇನಹಳ್ಳಿಯ ಚಿನ್ನ ನಾಯ್ಕ್ ಎಂಬುವವರ ಮನೆ ಮುಂದಿನ ಕೊಟ್ಟಿಗೆಯಲ್ಲಿ ಎತ್ತುಗಳು ಕಳ್ಳತನವಾಗಿದೆ. ಮೇ 17ರ ರಾತ್ರಿ ಚಿನ್ನ ನಾಯ್ಕ್ ಅವರು ವ್ಯವಸಾಯದ ಕೆಲಸ ಮುಗಿಸಿ ಎತ್ತುಗಳನ್ನು ತಂದು ಕೊಟ್ಟಿಗೆಯಲ್ಲಿ … Read more

ಬೈಕಿಗೆ ಡಿಕ್ಕಿ ಹೊಡೆದು ಕಾರು ಸಹಿತ ಪರಾರಿಯಾದ ಚಾಲಕ

HIVAMOGGA-NEWS- map

SHIVAMOGGA LIVE NEWS | SHIMOGA | 11 ಜೂನ್ 2022 ಅಪಘಾತಪಡಿಸಿ ಸ್ಥಳದಲ್ಲಿ ನಿಲ್ಲದೆ ಕಾರು ಸಹಿತ ಪರಾರಿಯಾದ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ. ಶಿವಮೊಗ್ಗ ತಾಲೂಕು ಹೊಳೆಬೆನವಳ್ಳಿ ಬಳಿ ಘಟನೆ ಸಂಭವಿಸಿದೆ. ಹಾರೋಬೆನವಳ್ಳಿ ತಾಂಡಾದ ಹಾಲೇಶ್ ನಾಯ್ಕ್ ಅವರು ರಾತ್ರಿ ತಮ್ಮ ಪಲ್ಸರ್ ಬೈಕಿನಲ್ಲಿ ಶಿವಮೊಗ್ಗದಿಂದ ಮನೆಗೆ ತೆರಳುತ್ತಿದ್ದರು. ಹೊಳೆಬೆನವಳ್ಳಿ ಕುಲುಮೆ ಬಳಿ ಎದುರಿನಿಂದ ಬಂದ ಕಾರೊಂದು ಬೈಕಿಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಹಾಲೇಶ್ ನಾಯ್ಕ್ ಅವರು ಗಾಯಗೊಂಡಿದ್ದರು. ಸ್ಥಳೀಯರೆ ಅವರನ್ನು ಸುಬ್ಬಯ್ಯ ಆಸ್ಪತ್ರೆಗೆ … Read more

ಆನವೇರಿಯಲ್ಲಿ ಜಾತ್ರೆ ಹಿನ್ನೆಲೆ, ಮೆಸ್ಕಾಂ ವತಿಯಿಂದ ಜನರಿಗೆ ಎಚ್ಚರಿಕೆ, ಕಾರಣವೇನು?

Bhadravathi News Graphics

SHIVAMOGGA LIVE NEWS | ELECTRICITY | 4 ಜೂನ್ 2022 ಆನವೇರಿ ಗ್ರಾಮದಲ್ಲಿ ಜೂನ್ 5 ರಿಂದ ಜೂನ್ 9ರವರೆಗೆ ಶ್ರೀ ಹಿರಿಮಾವುರದಮ್ಮ ದೇವಿ ಜಾತ್ರೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮೆಸ್ಕಾಂ ವತಿಯಿಂದ ಎಚ್ಚರಿಕೆ ಸಂದೇಶ ಪ್ರಕಟಿಸಲಾಗಿದೆ. ಮೆಸ್ಕಾಂ ಎಚ್ಚರಿಕೆ ಏನು? ಈ ಜಾತ್ರಾ ಮಹೋತ್ಸವದಲ್ಲಿ ಸಾಮೂಹಿಕ ಔತಣ ಕೂಟ ಏರ್ಪಡಿಸುವವರು, ವಿದ್ಯುತ್ ಲೈನ್, ಕಂಬಗಳಲ್ಲಿ ಅಲಂಕಾರಿಕ ದೀಪಗಳನ್ನು ಅಳವಡಿಸುವವರು, ಜಾತ್ರೆಗೆ ಮಳಿಗೆ ಹಾಕುವ ವರ್ತಕರು, ಮನೋರಂಜನಾ ಆಟಿಕೆಯವರು, ಸರ್ಕಸ್, ನಾಟಕ ಕಂಪನಿಯವರು ಇತ್ಯಾದಿಯವರು ಮೆಸ್ಕಾಂನ … Read more