ಶಿವಮೊಗ್ಗ ಎಂಆರ್‌ಎಸ್‌ ಸರ್ಕಲ್‌ನಲ್ಲಿ ಯುದ್ದ ವಿಮಾನ, ಯುದ್ದ ಟ್ಯಾಂಕರ್

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | SHIMOGA NEWS | 31 MARCH 2021

ಶಿವಮೊಗ್ಗದ ಎಂಆರ್‌ಎಸ್‌ಗೆ ಬರಲಿದೆ ಯುದ್ದ ಟ್ಯಾಂಕರ್‌, ಸರ್ಕಲ್‌ನಲ್ಲೇ ನಿಲ್ಲಲಿದೆ ಯುದ್ದ ವಿಮಾನ.

ಭಾರತೀಯ ಸೇನೆಯಲ್ಲಿ ಬಳಕೆಯಾಗಿ, ನಿರುಪಯುಕ್ತವಾಗಿರುವ ಯುದ್ದ ಟ್ಯಾಂಕರ್‌ ಮತ್ತು ಯುದ್ದ ವಿಮಾನಗಳನ್ನು ದೇಶದ ವಿವಿಧೆಡೆ ಸಾರ್ವಜನಿಕ ಸ್ಥಳದಲ್ಲಿ ಪ್ರದರ್ಶನಕ್ಕೆ ಇರಿಸಲಾಗುತ್ತದೆ. ಅದೆ ರೀತಿ ಶಿವಮೊಗ್ಗದಲ್ಲಿಯೂ ಯುದ್ದ ಟ್ಯಾಂಕರ್‌ ಮತ್ತು ವಿಮಾನವನ್ನು ಪ್ರದರ್ಶನಕ್ಕೆ ಇರಿಸಲು ನಿರ್ಧರಿಸಲಾಗಿದೆ.

ನಿರುಪಯುಕ್ತವಾಗಿರುವ ಒಂದು ಯುದ್ದ ಟ್ಯಾಂಕರ್‌ ಮತ್ತು ಒಂದು ಯುದ್ದ ವಿಮಾನವನ್ನು ಶಿವಮೊಗ್ಗಕ್ಕೆ ಕಳುಹಿಸಲು ರಕ್ಷಣಾ ಸಚಿವರು ಒಪ್ಪಿಗೆ ನೀಡಿದ್ದಾರೆ. ಸಂಸದ ಬಿ.ವೈ.ರಾಘವೇಂದ್ರ ಅವರು ಈ ಕುರಿತು ರಕ್ಷಣಾ ಸಚಿವರಿಗೆ ಮನವಿ ಮಾಡಿದ್ದರು. ಇವೆರಡನ್ನು ನಗರದ ಪ್ರಮುಖ ಸ್ಥಳದಲ್ಲಿ ಇರಿಸಬೇಕಿದ್ದು, ಈ ಕುರಿತು ಸೈನಿಕ ಕಲ್ಯಾಣ ಇಲಾಖೆ ಅಧಿಕಾರಿಗಳು ಮಹಾನಗರ ಪಾಲಿಕೆ ಮೇಯರ್‌ ಮತ್ತು ಅಧಿಕಾರಿಗಳ ಜೊತೆಗೆ ಚರ್ಚಿಸಿದ್ದಾರೆ.

ʼಶಿವಮೊಗ್ಗದ ಎಂಆರ್‌ಎಸ್‌ ಸರ್ಕಲ್‌ನಲ್ಲಿ ಇವರೆಡನ್ನು ಇರಿಸುವ ಯೋಚನೆ ಇದೆ. ಸಹ್ಯಾದ್ರಿ ಕಾಲೇಜು ಇರುವುದರಿಂದ ಮತ್ತು ಯುವ ಸಮೂಹ ಹೆಚ್ಚು ಓಡಾಡುವ ಜಾಗವಾಗಿರುವುರಿಂದ, ಅಲ್ಲಿಯೇ ಯುದ್ದ ಟ್ಯಾಂಕರ್‌ ಮತ್ತು ಯುದ್ದ ವಿಮಾನವನ್ನು ಇರಿಸಲಾಗುತ್ತದೆ. ಇದಕ್ಕಾಗಿ ಮೂರು ಲಕ್ಷ ರೂ. ಮೀಸಲಿರಸಲಾಗಿದೆʼ ಎಂದು ಶಿವಮೊಗ್ಗ ಪಾಲಿಕೆ ಮೇಯರ್‌ ಸನೀತಾ ಅಣ್ಣಪ್ಪ ತಿಳಿಸಿದರು.

ವಿಡಿಯೋ ರಿಪೋರ್ಟ್‌


ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200

ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment