ವಾಕಿಂಗ್‌ ತೆರಳಿದ್ದದವರಿಗೆ ಕರಿ ಚಿರತೆ ಗೋಚರ, ಆತಂಕ

KARGAL-SAGARA-NEWS-1.jpg

SHIVAMOGGA LIVE NEWS | 4 JANUARY 2024 ಸಾಗರ : ಕಾರ್ಗಲ್‌ನ ಜೋಗ ರಸ್ತೆಯ ಮಹಾವೀರ ಸರ್ಕಲ್ ಮತ್ತು ಶ್ರೀಪುರ ಮದ್ಯದ ಮುಖ್ಯ ರಸ್ತೆಯಲ್ಲಿ ಶುಕ್ರವಾರ ಬೆಳಗ್ಗೆ ಕರಿ ಚಿರತೆ (Black Panther) ಕಾಣಿಸಿಕೊಂಡಿದೆ. ಅರಣ್ಯದೊಳಕ್ಕೆ ಹೋಗಲು ಶ್ವಾನವನ್ನು ಕಚ್ಚಿಕೊಂಡ ಕರಿ ಚಿರತೆ ರಸ್ತೆ ಮಧ್ಯಕ್ಕೆ ಜಿಗಿದಿದೆ. ವಾಕಿಂಗ್ ತೆರಳುತ್ತಿದ್ದ ಪಟ್ಟಣದ ಉದ್ಯಮಿ ಶಿವಪ್ರಸಾದ್ ಅವರಿಗೆ ಕರಿ ಚಿರತೆ ಕಾಣಿಸಿಕೊಂಡಿದೆ. ಕೂಡಲೆ ಪಟ್ಟಣ ಪಂಚಾಯಿತಿಗೆ ಮಾಹಿತಿ ನೀಡಿದ್ದಾರೆ. ‘ಸಾರ್ವಜನಿಕರು ಈ ಸ್ಥಳದಲ್ಲಿ ಜಾಗರೂಕರಾಗಿ ಸಂಚರಿಸುವಂತೆ’ ಪಟ್ಟಣ … Read more

ಚಲಿಸುತ್ತಿದ್ದ ಆಟೋದಲ್ಲಿ ಚಾಲಕನ ಕುತ್ತಿಗೆ ಹಿಸುಕಲು ಯತ್ನಿಸಿದ ಪ್ರಯಾಣಿಕ

crime name image

SHIVAMOGGA LIVE NEWS, 3 JANUARY 2024 ಸಾಗರ : ಚಲಿಸುತ್ತಿದ್ದ ಆಟೋದಲ್ಲಿ (Auto) ಪ್ರಯಾಣಿಕನೊಬ್ಬ ಚಾಲಕನ ಕುತ್ತಿಗೆಗೆ ಕೈ ಹಾಕಿ ಬಿಗಿಯಾಗಿ ಒತ್ತಲು ಪ್ರಯತ್ನಸಿದ್ದಾನೆ. ಚಾಲಕ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ಮೊಬೈಲ್‌ ಫೋನ್‌ನಿಂದ ಕುತ್ತಿಗೆಗೆ ಹೊಡೆದು ಪರಾರಿಯಾಗಿದ್ದಾನೆ. ಅದೃಷ್ಟವಶಾತ್‌ ಚಾಲಕ ಪಾರಾಗಿದ್ದಾನೆ. ಸಾಗರ ತಾಲೂಕು ಮಾಸೂರು ಬಳಿ ಘಟನೆ ಸಂಭವಿಸಿದೆ. ಆಟೋ ಚಾಲಕ ಗಣೇಶ್‌ ಕುತ್ತಿಗೆ ನೋವಿನಿಂದಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಸಾಗರ to ಸೊರಬ, ರಾತ್ರಿ ಆಟೋ ಪ್ರಯಾಣ ಸಾಗರ ಬಸ್‌ ನಿಲ್ದಾಣದ ಬಳಿ ವ್ಯಕ್ತಿಯೊಬ್ಬ … Read more

ಅಡಿಕೆ ಬೆಳೆಗಾರರ ಬೃಹತ್‌ ಸಮಾವೇಶ, ಷೋಕಾರ್ಡ್‌ ರಿಲೀಸ್‌

Areca-growers-conference-show-card-released.

SHIVAMOGGA LIVE NEWS, 2 JANUARY 2025 ಸಾಗರ : ಜ.18ರಂದು ನಡೆಯಲಿರುವ ಅಡಿಕೆ ಬೆಳೆಗಾರರ ಸಮಾವೇಶದ ಷೋಕಾರ್ಡ್‌ (Show Card) ಬಿಡುಗಡೆ ಮಾಡಲಾಯಿತು. ಖಾಸಗಿ ಬಸ್‌ ಸ್ಟಾಂಡ್‌ ಆವರಣದಲ್ಲಿರುವ ಸಾಗರ ಪ್ರಾಂತ್ಯ ಅಡಿಕೆ ಬೆಳೆಗಾರರ ಸಂಘದ ಕಚೇರಿಯಲ್ಲಿ ತೋಟಗಾರ್ಸ್‌ ಅ‍ಧ್ಯಕ್ಷ ಕೆ.ಸಿ.ದೇವಪ್ಪ ಷೋಕಾರ್ಡ್‌ ಬಿಡುಗಡೆ ಮಾಡಿದರು. ಪ್ರಾಂತ್ಯ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ವ.ಶಂ.ರಾಮಚಂದ್ರ ಭಟ್‌, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಹಕ್ರೆ ಮಲ್ಲಿಕಾರ್ಜುನ್‌ ಸೇರಿದಂತೆ ಹಲವರು ಈ ಸಂದರ್ಭ ಇದ್ದರು. ಇದನ್ನೂ ಓದಿ » ಅಡಿಕೆ … Read more

ಕಾರು, ಬಸ್‌ ಮುಖಾಮುಖಿ ಡಿಕ್ಕಿ, ಇಬ್ಬರು ಸಾವು

Car-and-Bus-mishap-at-anandapura-murugha-mutt.

SHIVAMOGGA LIVE NEWS | 29 DECEMBER 2024 ಆನಂದಪುರ : ಕಾರು ಮತ್ತು ಬಸ್‌ ಮುಖಾಮುಖಿ ಡಿಕ್ಕಿಯಾಗಿ (Mishap) ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸಾಗರ ತಾಲೂಕು ಆನಂದಪುರದ ಮುರುಘಮಠದ ಸಮೀಪ ಇಂದು ಬೆಳಗ್ಗೆ ಘಟನೆ ಸಂಭವಿಸಿದೆ. ಕಾರು ಸಾಗರದಿಂದ ಶಿವಮೊಗ್ಗ ಕಡೆಗೆ ತೆರಳುತ್ತಿತ್ತು. ಬಸ್ಸು ಶಿವಮೊಗ್ಗದಿಂದ ಸಾಗರ ಕಡೆಗೆ ತೆರಳುತ್ತಿತ್ತು. ಇಬ್ಬರು ಮೃತಪಟ್ಟಿದ್ದು ಅವರ ಗುರುತು ಇನ್ನಷ್ಟೆ ಪತ್ತೆ ಆಗಬೇಕಿದೆ. ಸ್ಥಳಕ್ಕೆ ಆನಂದಪುರ ಠಾಣೆ ಪೊಲೀಸರು ಭೇಟಿ ನೀಡಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೆ ತಿಳಿದು ಬರಬೇಕಿದೆ. … Read more

ಆನಂದಪುರ ಬಳಿ ಕಾಡಾನೆಗಳು ಪ್ರತ್ಯಕ್ಷ, ತೋಟ, ಗದ್ದೆಯಲ್ಲಿ ಸಂಚಾರ

Wild-Elephants-at-anandapura-lakkavalli

SHIVAMOGGA LIVE NEWS | 27 DECEMBER 2024 ಸಾಗರ : ಆನಂದಪುರ ಸುತ್ತಮುತ್ತ ಆನೆಗಳ ಉಪಟಳ (Wild Elephants) ಹೆಚ್ಚಾಗಿದೆ. ಇವತ್ತು ಬೆಳಗ್ಗೆ ಲಕ್ಕವಳ್ಳಿ ಸಮೀಪ ಆನೆಯೊಂದು ಮರಿಯಾನೆ ಜೊತೆಗೆ ಕಾಣಿಸಿಕೊಂಡಿದೆ. ಕೂಡಲೆ ಗ್ರಾಮಸ್ಥರು ಜೋರಾಗಿ ಕೂಗಿ ಆನೆಗಳನ್ನು ಓಡಿಸಿದ್ದಾರೆ. ಇದರ ವಿಡಿಯೋ ವೈರಲ್‌ ಆಗಿದೆ. ಲಕ್ಕವಳ್ಳಿಯ ಲಕ್ಷ್ಮಣಪ್ಪ ಎಂಬುವವರ ತೋಟದ ಸಮೀಪ ಆನೆಗಳು ಕಾಣಿಸಿಕೊಂಡಿವೆ. ಸ್ಥಳೀಯರು ಜೋರಾಗಿ ಕೂಗಿಕೊಂಡಿದ್ದರಿಂದ ಆನೆಗಳು ಓಡಿ ಹೋಗಿವೆ. ಇದರ ವಿಡಿಯೋ ಇಲ್ಲಿದೆ. ಇದನ್ನೂ ಓದಿ » ಶಿವಮೊಗ್ಗ ನಗರದಲ್ಲಿ ಏನೇನಾಯ್ತು? … Read more

ಸಾಗರದಲ್ಲಿ ಹೆದ್ದಾರಿಗೆ ಅಡ್ಡಲಾಗಿ ಕುಳಿತು ವಿದ್ಯಾರ್ಥಿಗಳು, ಗ್ರಾಮಸ್ಥರ ಆಕ್ರೋಶ, ಕಾರಣವೇನು?

protest-for-ksrtc-bus-at-kanle-in-sagara.

SHIVAMOGGA LIVE NEWS, 19 DECEMBER 2024 ಸಾಗರ : ಕೆಎಸ್ಆರ್‌ಟಿಸಿ ಬಸ್ (Bus) ನಿಲುಗಡೆ ಮಾಡದೆ ಇರುವುದನ್ನು ಖಂಡಿಸಿ ಗ್ರಾಮಸ್ಥರು, ವಿದ್ಯಾರ್ಥಿಗಳು ರಸ್ತೆತಡೆ ನಡೆಸಿ ಪ್ರತಿಭಟಿಸಿದರು. ಸಾಗರ ತಾಲೂಕು ತಾಲ್ಲೂಕಿನ ಕಾನ್ಲೆ ಮಾರ್ಗದಲ್ಲಿ ಸಾಗರಕ್ಕೆ ಸಂಚರಿಸುವ ಬಸ್‌ಗಳು ನಿಲುಗಡೆ ನೀಡದಿರುವುದಕ್ಕೆ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು. ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಿಂದ ಕಾನ್ಲೆ ಮಾರ್ಗವಾಗಿ ಸಾಗರಕ್ಕೆ ಸಂಚರಿಸುವ ಕೆಎಸ್ಆರ್‌ಟಿಸಿ ಬಸ್‌ಗಳನ್ನು ಎಲ್ಲಾ ಕಡೆ ನಿಲುಗಡೆ ಮಾಡಬೇಕು. ಈ ಬಸ್‌ನಲ್ಲಿ ವಿದ್ಯಾರ್ಥಿಗಳು ಸಿರಿವಂತೆ, ಸಾಗರದ ಶಾಲಾ ಕಾಲೇಜುಗಳಿಗೆ ತೆರಳುತ್ತಾರೆ. … Read more

ಮೂರು ತಿಂಗಳು ಜೋಗ ಜಲಪಾತಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧ, ಕಾರಣವೇನು?

JOG FALLS GENERAL IMAGE

SHIVAMOGGA LIVE NEWS, 16 DECEMBER 2024 ಶಿವಮೊಗ್ಗ : ಜೋಗ ಜಲಪಾತದಲ್ಲಿ (Jog Falls) ವಿವಿಧ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆ ಮೂರು ತಿಂಗಳು ಜಲಪಾತಕ್ಕೆ ಪ್ರವಾಸಿಗರ ಭೇಟಿ ನಿರ್ಬಂಧಿಸಿ ಜಿಲ್ಲಾಧಿಕಾರಿ ಮತ್ತು ಜೋಗ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಆದೇಶಿಸಿದ್ದಾರೆ. ಸಾಗರ ತಾಲ್ಲೂಕಿನ ಜೋಗ ಜಲಪಾತದ ಮುಖ್ಯದ್ವಾರ ಮತ್ತು ಪ್ರವಾಸಿಗರಿಗೆ ಮೂಲ ಸೌಲಭ್ಯ ಒದಗಿಸಲು ಸಮಗ್ರ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ. ಆದ್ದರಿಂದ ಜನವರಿ 1 ರಿಂದ ಮಾರ್ಚ್ 15ರ ವರೆಗೆ ಸಾರ್ವಜನಿಕರು ಮತ್ತು ಪ್ರವಾಸಿಗರ ಪ್ರವೇಶ ನಿರ್ಭಂದಿಸಲಾಗಿದೆ. … Read more

ಬಸ್‌ ಪಲ್ಟಿ, ಸಾಗರದಲ್ಲಿ ಯಾರೆಲ್ಲ ಹೇಗೆಲ್ಲ ನೆರವಾದರು? ಇಲ್ಲಿದೆ ಡಿಟೇಲ್ಸ್‌

161224 Muppane bus incident

SHIVAMOGGA LIVE NEWS, 16 DECEMBER 2024 ಸಾಗರ : ಜೋಗ ಪ್ರವಾಸಕ್ಕೆ ಬಂದಿದ್ದ ಖಾಸಗಿ ಬಸ್‌ (Bus) ಪಲ್ಟಿಯಾಗಿ ಮಂಗಳೂರಿನ ಪ್ರವಾಸಿಗರು ಗಾಯಗೊಂಡಿದ್ದಾರೆ. ಸಾಗರ ತಾಲೂಕು ಅರಲಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಪ್ಪಾನೆ ತಿರುವಿನಲ್ಲಿ ಭಾನುವಾರ ಘಟನೆ ನಡೆದಿದೆ. ಅಪಘಾತದ ನಂತರ ಏನೇನಾಯ್ತು? ಇಲ್ಲಿದೆ ಪಾಯಿಂಟ್ಸ್‌ ದೇವರ ದರ್ಶನಕ್ಕೆ ಹೊರಟಿದ್ದರು ಮಂಗಳೂರಿನ ಬಿ.ಸಿ. ರಸ್ತೆ ಸುತ್ತಮುತ್ತಲ 49 ಪ್ರವಾಸಿಗರು ಜೋಗ ಪ್ರವಾಸ ಕೈಗೊಂಡಿದ್ದರು. ಅಲ್ಲಿಂದ ವಡನಬೈಲು ಪದ್ಮಾವತಿ ದೇಗುಲ, ಸಿಗಂದೂರು ದೇವಸ್ಥಾನಕ್ಕೆ ತೆರಳುವವರಿದ್ದರು. ಮುಪ್ಪಾನೆ ಬಳಿ … Read more

ಸಾಗರದಲ್ಲಿ ಬೆಳಗ್ಗೆ ಅಂಗಡಿಗೆ ಬಂದ ಮಾಲೀಕನಿಗೆ ಕಾದಿತ್ತು ಶಾಕ್

Sagara Police Station Building

SHIVAMOGGA LIVE NEWS, 15 DECEMBER 2024 ಸಾಗರ : ಅಂಗಡಿಯ (Shop) ಶಟರ್‌ ಮುರಿದು ಹಣ ಮತ್ತು ಸಿಸಿಟಿವಿಯ ಡಿವಿಆರ್‌ ಕಳ್ಳತನ ಮಾಡಲಾಗಿದೆ. ಸಾಗರದ ಜೋಗ ರಸ್ತೆಯಲ್ಲಿರುವ ಮಗಿ ಏಜೆನ್ಸಿಯಲ್ಲಿ ಕಳ್ಳತನವಾಗಿದೆ. ಮಾಲೀಕ ಅಶೋಕ್‌ ಅವರು ಡಿ.13ರಂದು ರಾತ್ರಿ ಅಂಗಡಿ ಬಾಗಿಲು ಹಾಕಿ ಮನೆಗೆ ತೆರಳಿದ್ದರು. ಮರುದಿನ ಬೆಳಗ್ಗೆ ಅಂಗಡಿ ಬಳಿ ಬಂದಾಗ ಶಟರ್‌ ತೆರೆದಿತ್ತು. ಪರಿಶೀಲಿಸಿದಾಗ ಕ್ಯಾಶ್‌ ಡ್ರಾದಲ್ಲಿರುವ 15 ರಿಂದ 20 ಸಾವಿರ ರೂ. ಹಣ ಕಳುವಾಗಿತ್ತು. ಇನ್ನು, ಸಿಸಿಟಿವಿ ಡಿವಿಆರ್‌ ಅನ್ನು … Read more

ಸಾಗರದಿಂದ ಮಂಗಳೂರಿಗೆ ಹೊಸ ರಾಜಹಂಸ ಬಸ್‌, ಟೈಮಿಂಗ್‌ ಏನು?

Sagara-Mangalore-Rajahamsa-bus-launch-Beluru-Gopalakrishna

SHIVAMOGGA LIVE NEWS, 5 DECEMBER 2024 ಸಾಗರ : ಸಾಗರದಿಂದ ಮಂಗಳೂರಿಗೆ ನೂತನವಾಗಿ ಆರಂಭಗೊಂಡಿರುವ ಕೆಎಸ್ಆರ್‌ಟಿಸಿ ರಾಜಹಂಸ ಬಸ್ (Rajahamsa Bus) ಸಂಚಾರಕ್ಕೆ ಶಾಸಕ ಬೇಳೂರು ಗೋಪಾಲಕೃಷ್ಣ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಬುಧವಾರ ಹಸಿರು ನಿಶಾನೆ ತೋರಿಸಿದರು. ಬಸ್ಸಿನ ಟೈಮಿಂಗ್‌ ಏನು? ನೂತನ ರಾಜಹಂಸ ಬಸ್‌ ಸಾಗರದಿಂದ ರಾತ್ರಿ 10.10ಕ್ಕೆ ಹೊರಡಲಿದೆ. ಬೆಳಗಿನ ಜಾವ 4ಕ್ಕೆ ಮಂಗಳೂರು, 4.45ಕ್ಕೆ ಯನಪೋಯ ಆಸ್ಪತ್ರೆ ತಲುಪುತ್ತದೆ. ಮಂಗಳೂರಿನಿಂದ ರಾತ್ರಿ 10.10ಕ್ಕೆ ಹೊರಡುವ ಬಸ್ ಬೆಳಗಿನ ಜಾವ 4.30ಕ್ಕೆ ಸಾಗರ … Read more