ದೇಗುಲದ ಗೇಟ್ ಬೀಗ ಮುರಿದು ಕಳ್ಳತನ, ಮನೆ ಬಾಗಿಲು ಬೀಗ ಒಡೆದು ಚಿನ್ನ, ನಗದು ದೋಚಿದ ಖದೀಮರು

311220 Bommanakatte Temple Theft 1

ಈಗ ಬಟ್ಟೆ ಒಗೆಯೋದು ಬಹಳ ಸುಲಭ, ಹೇಗದು? | ವಿಡಿಯೋಗಾಗಿ ಕ್ಲಿಕ್ ಮಾಡಿ ಶಿವಮೊಗ್ಗ ಲೈವ್.ಕಾಂ | SHIMOGA NEWS | 31 DECEMBER 2020 ಶಿವಮೊಗ್ಗದ ಮುತ್ತುಮಾರಿಯಮ್ಮ ದೇವಸ್ಥಾದನಲ್ಲಿ ಕಳ್ಳತನ ಮಾಡಲಾಗಿದೆ. ಗೇಟ್‍ನ ಬಾಗಿಲು ಮುರಿದು ಕೃತ್ಯ ಎಸಗಲಾಗಿದೆ. ಬೊಮ್ಮನಕಟ್ಟೆಯ ಆಶ್ರಯ ಬಡಾವಣೆಯಲ್ಲಿರುವ ಮುತ್ತುಮಾರಿಯಮ್ಮ ದೇವಸ್ಥಾನದಲ್ಲಿ ಕಳ್ಳತನವಾಗಿದೆ. ದೇವರ ಆಭರಣಗಳನ್ನು ಕಳ್ಳರು ಕದ್ದೊಯ್ದಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ದೇವಸ್ಥಾನದ ಹುಂಡಿ ಹೊಡೆದು, ಹಣದ ದೋಚಲಾಗಿದೆ ಎಂದು ತಿಳಿಸಿದ್ದಾರೆ. ಮನೆ ಬೀಗ ಮುರಿದ ಖದೀಮರು ಮತ್ತೊಂದೆಡೆ ಬೊಮ್ಮನಕಟ್ಟೆಯ … Read more

ಭದ್ರಾವತಿ ಜನ್ನಾಪುರದಲ್ಲಿ ಮನೆ ಬಾಗಿಲು ಮುರಿದು ಚಿನ್ನಾಭರಣ, ಹಣ ಕಳ್ಳತನ

theft case general image

ಶಿವಮೊಗ್ಗ ಲೈವ್.ಕಾಂ |BHADRAVATHI NEWS | 26 NOVEMBER 2020 ಮನೆಯಲ್ಲಿ ಯಾರೂ ಇಲ್ಲದ ವೇಳೆ ಬಾಗಿಲು ಮುರಿದು ಕಳ್ಳತನ ಮಾಡಲಾಗಿದೆ. 1.10 ಲಕ್ಷ ಮೌಲ್ಯದ ಚಿನ್ನಾಭರಣ, 20 ಸಾವಿರ ನಗದು ದೋಚಲಾಗಿದೆ. ಭದ್ರಾವತಿಯ ಜನ್ನಾಪುರದ ಕುರುಬರ ಬೀದಿಯ ಕೆ.ಸಿ.ರಾಮಚಂದ್ರ ಅವರ ಮನೆಯಲ್ಲಿ ಕಳ್ಳತನವಾಗಿದೆ. ಪತ್ನಿಯ ಚಿಕಿತ್ಸೆಗಾಗಿ ರಾಮಚಂದ್ರ ಅವರು ಬೆಂಗಳೂರಿಗೆ ತೆರಳಿದ್ದರು. ಹಿಂತಿರುಗಿ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಇಂಟರ್‍ಲಾಕ್‍ ಮುರಿದ ಕಳ್ಳರು ಮನೆಯ ಕೊಠಡಿಯಲ್ಲಿದ್ದ ಬೀರುವಿನ ಇಂಟರ್‍ಲಾಕ್‍ ಮುರಿದಿರುವ ಕಳ್ಳರು 20 ಸಾವಿರ ರೂ. … Read more

ಲಾಠಿ ಬಿಟ್ಟು ಮೈಕ್ ಹಿಡಿದ ಶಿವಮೊಗ್ಗ ಪೊಲೀಸ್, ಕಳ್ಳತನದ ವಿರುದ್ಧ ಜಾಗೃತಿಗೆ ವಿಭಿನ್ನ ಪ್ರಯೋಗ

141120 Shimoga Police Announcement in Shimoga 1

ಶಿವಮೊಗ್ಗ ಲೈವ್.ಕಾಂ |SHIMOGA NEWS | 14 NOVEMBER 2020 ಹಬ್ಬದ ಸಂದರ್ಭ ಶಿವಮೊಗ್ಗ ಸಿಟಿಯಲ್ಲಿ ಪೊಲೀಸರು ಜಾಗೃತಿ ಅಭಿಯಾನ ಆರಂಭಿಸಿದ್ದಾರೆ. ಹೆಚ್ಚು ಜನ ಸೇರುವ ಕಡೆಯಲ್ಲಿ ಮೈಕ್ ಹಿಡಿದು ಎಚ್ಚರಿಕೆಯ ಸಂದೇಶ ಸಾರುತ್ತಿದ್ದಾರೆ. ‘ಇದು ಶಿವಮೊಗ್ಗ ಪೊಲೀಸ್ ಪ್ರಕಟಣೆ’ ಹಬ್ಬದ ಖರೀದಿಯಲ್ಲಿ ತಲ್ಲೀನರಾದವರಲ್ಲಿ ಜಾಗೃತಿ ಮೂಡಿಸಲು, ಪೊಲೀಸರು ಮೈಕ್ ಹೆಗಲಿಗೇರಿಸಿಕೊಂಡು ನಗರದಾದ್ಯಂತ ಸಂಚರಿಸುತ್ತಿದ್ದಾರೆ. ಹೆಚ್ಚು ಜನರು ಸೇರಿರುವ ಕಡೆಯಲ್ಲಿ ಮೈಕ್ ಹಿಡಿದು, ‘ಇದು ಶಿವಮೊಗ್ಗ ಜಿಲ್ಲಾ ಪೊಲೀಸ್ ಪ್ರಕಟಣೆ’ ಅಂತಾ ಸಾರ್ವಜನಿಕರ ಗಮನ ಸೆಳೆದು, ಮಾಹಿತಿ … Read more

ಶನಿಮಹಾತ್ಮ ದೇವಸ್ಥಾನದ ಹುಂಡಿ ಹಣ, ದೇವರ ಬೆಳ್ಳಿ ವಸ್ತು ಕದ್ದರು ಅರೆಸ್ಟ್

131020 RML Nagara Temple Theft 1

ಶಿವಮೊಗ್ಗ ಲೈವ್.ಕಾಂ | SHIMOGA CRIME NEWS | 15 ಅಕ್ಟೋಬರ್ 2020 ಶಿವಮೊಗ್ಗದ ಆರ್.ಎಂ.ಎಲ್ ನಗರದಲ್ಲಿ ಶನಿಮಹಾತ್ಮ ದೇವಸ್ಥಾನಕ್ಕೆ ಕನ್ನ ಹಾಕಿದ್ದ ಇಬ್ಬರನ್ನು ದೊಡ್ಡಪೇಟೆ ಠಾಣೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಇನ್ನಿಬ್ಬರು ಎಸ್ಕೇಪ್ ಅಗಿದ್ದು, ಅವರ ಪತ್ತೆ ಕಾರ್ಯ ನಡೆಯುತ್ತಿದೆ. ಬುದ್ಧನಗರದ ವಸೀಮ್ ಅಕ್ರಂ (19), ರಾಗಿಗುಡ್ಡ ನಿವಾಸಿ ಮೊಹಮ್ಮದ್ ಕರೀಂ (19) ಬಂಧಿತರು. ಇವರು ಹಣ್ಣಿನ ವ್ಯಾಪಾರಿಗಳು. ದೇವಸ್ಥಾನದ ಶಟರ್ ಮುರಿದು 15 ಸಾವಿರ ರೂ. ಕಾಣಿಕೆ ಹಣ, ಗರ್ಭಗುಡಿಯ ಬೀರುವಿನಲ್ಲಿದ್ದ 5 ಸಾವಿರ … Read more

ಬಾಗಿಲು ಒಡೆದು ಮನೆಯೊಳಗೆ ನುಗ್ಗಲು ದರೋಡೆಕೋರರ ಯತ್ನ, ಮಲೆನಾಡ ಒಂಟಿ ಮನೆಗಳಲ್ಲಿ ಹೆಚ್ಚಾಯ್ತು ಆತಂಕ

131020 Megaravalli House theft attempt 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 13 ಅಕ್ಟೋಬರ್ 2020 ತೀರ್ಥಹಳ್ಳಿ ತಾಲೂಕಿನ ಒಂಟಿ ಮನೆಯೊಂದಕ್ಕೆ ನುಗ್ಗಿದ ದುಷ್ಕರ್ಮಿಗಳು, ಮನೆ ಸದಸ್ಯರ ಹತ್ಯೆಗೆ ಯತ್ನಿಸಿ, ದರೋಡೆ ಪ್ರಯತ್ನ ಮಾಡಿದ್ದಾರೆ. ತಾಲೂಕಿನ ಮೇಗರವಳ್ಳಿ ಗ್ರಾಮದ ಪುರುಷೋತ್ತಮ ಹೆಗ್ಡೆ ಅವರ ಮನೆ ಮೇಲೆ ರಾತ್ರಿ ವೇಳೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಆರು ಮಂದಿ ದುಷ್ಕರ್ಮಿಗಳು ಇನ್ನೋವಾ ಕಾರಿನಲ್ಲಿ ಬಂದಿದ್ದರು ಎಂದು ತಿಳಿದು ಬಂದಿದೆ. ಬಾಗಿಲು ಒಡೆದು ಮನೆಯೊಳಗೆ ನುಗ್ಗಲು ಯತ್ನಿಸಿದ್ದಾರೆ. ಕಳ್ಳರು ನುಗ್ಗುವುದನ್ನು ತಡೆಯಲು ಮುಂದಾದ ಪುರುಷೋತ್ತಮ ಹೆಗ್ಡೆ, … Read more

ದೇವಸ್ಥಾನದಲ್ಲಿ ಹುಂಡಿ, ದೇವರ ಬೆಳ್ಳಿ ವಸ್ತುಗಳ ಕಳ್ಳತನ, ಮನೆಗೆ ನುಗ್ಗಿ 24 ಸಾವಿರ ಮೌಲ್ಯದ ವಸ್ತುಗಳ ಕಳವು

131020 RML Nagara Temple Theft 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 13 ಅಕ್ಟೋಬರ್ 2020 ಶಿವಮೊಗ್ಗದಲ್ಲಿ ಬೀಗ ಒಡೆದು ಕಳ್ಳತನ ಮಾಡಲಾಗಿದೆ. ಎರಡು ಪ್ರತ್ಯೇಕ ಪ್ರಕರಣಗಳು ವರದಿಯಾಗಿದೆ. ದೇವಸ್ಥಾನದಲ್ಲಿ ಕಳ್ಳತನ ಆರ್.ಎಂ.ಎಲ್.ನಗರದ ಶ್ರೀ ಶನೇಶ್ಚರ ದೇವ್ಥಾನದ ಶಟರ್ ಮುರಿದು ಕಳ್ಳತನ ಮಾಡಲಾಗಿದೆ. ದೇವರ ಹುಂಡಿ, ದೇವರಿಗೆ ತೊಡಿಸಿದ್ದ ಬೆಳ್ಳಿ ಆಭರಣಗಳು ಕಳ್ಳತನ ಮಾಡಲಾಗಿದೆ. ದೊಡ್ಡಪೇಟೆ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮನೆಯಲ್ಲಿ ಕಳ್ಳತನ ಅಜಾದ್ ನಗರದ ಮೂರನೇ ತಿರುವಿನಲ್ಲಿ ಮನೆಗೆ ಕನ್ನ ಹಾಕಿರುವ … Read more

ಬೆಳಗ್ಗೆ ಏಳುವಷ್ಟರಲ್ಲಿ ಶೂ, ಚಪ್ಪಲಿ ಮಾಯ, ಈ ಜನರ ಗೋಳು ಕೇಳೋಕೆ ಯಾರೂ ಇಲ್ವಾ? ಏನಿದು? ಯಾಕಿಂಗೆ ಆಗ್ತಿದೆ?

200920 Show Theft at Gopalagowda Layout 1

ಶಿವಮೊಗ್ಗ ಲೈವ್.ಕಾಂ | SHIMOGA CITY NEWS | 20 ಸೆಪ್ಟಂಬರ್ 2020 ಕೇಸ್ 1 ಕೋವಿಡ್ ಆತಂಕದ ನಡುವೆಯು ಪರೀಕ್ಷೆಗೆ ಸಂಪೂರ್ಣ ಸಿದ್ಧವಾಗಿದ್ದ ವಿದ್ಯಾರ್ಥಿನಿ. ಪರೀಕ್ಷೆಗೆ ಹೊರಡಲು ಸಿದ್ಧಳಾಗಿ ಮನೆಯಿಂದ ಹೊರಬಂದಾಗ ಶೂ, ಚಪ್ಪಲಿಗಳಿಲ್ಲ. ವಿದ್ಯಾರ್ಥಿನಿಗಷ್ಟೆ ಅಲ್ಲ, ಅವರ ಪೋಷಕರು ಗಾಬರಿಯಾದರು. ಆತಂಕಕ್ಕೀಡಾದರು. ಕೇಸ್ 2 ಹೊಸ ಶೂಗಳು, ಚಪ್ಪಲಿಗಳು. ಹೆಚ್ಚೆಂದರೆ ನಾಲ್ಕೈದು ಬಾರಿ ಬಳಕೆಯಾಗಿತ್ತು. ರಾತ್ರಿ ಊಟ ಮಾಡಿ ಮನೆ ಆವರಣದಲ್ಲೇ ವಾಕಿಂಗ್ ಮುಗಿಸಿ ಒಳಗೆ ಹೋಗುವಾಗ ಬಾಗಿಲ ಬಳಿ ಇದ್ದವು. ಬೆಳಗೆದ್ದು ವಾಕಿಂಗ್ … Read more

ಎರಡು ಲಕ್ಷ ರೂ. ಮೊತ್ತದ ಮೊಬೈಗಳನ್ನು ಕದ್ದು ಮಾರಾಟ ಮಾಡುತ್ತಿದ್ದವನು ಭದ್ರಾವತಿಯಲ್ಲಿ ಅರೆಸ್ಟ್

030520 Mobile Thief Arrest in Shimoga 1

ಶಿವಮೊಗ್ಗ ಲೈವ್.ಕಾಂ | SHIMOGA | 3 ಮೇ 2020 ಎರಡು ಲಕ್ಷ ರುಪಾಯಿ ಮೊತ್ತದ ಮೊಬೈಲ್‌ಗಳನ್ನು ಕಳ್ಳತನ ಮಾಡಿ, ಮಾರಾಟ ಮಾಡುತ್ತಿದ್ದ ಕಳ್ಳನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಭದ್ರಾವತಿ ತಾಲೂಕು ತಿಪ್ಲಾಪುರ ಕ್ಯಾಂಪ್‌ನ ನಿವಾಸಿ ಅಬ್ದುಲ್‌ ಖಾದರ್‌ (30) ಬಂಧಿತ. ರಾಜ್ಯದ ವಿವಿಧೆಡೆ ಕಳ್ಳತನ ಮಾಡಿದ್ದ ಹಲವು ಬ್ರಾಂಡ್‌ಗಳ ಮೊಬೈಲ್‌ಗಳು ಈತನ ಬಳಿ ಪತ್ತೆಯಾಗಿದೆ. ಇವುಗಳ ಮೊತ್ತ 2.08 ಲಕ್ಷ ರೂ. ಎಂದು ಅಂದಾಜು ಮಾಡಲಾಗಿದೆ. ಭದ್ರಾವತಿ ಡಿವೈಎಸ್‌ಪಿ ಸುಧಾಕರ್‌ ನಾಯಕ ಅವರ ಮಾರ್ಗದರ್ಶನದಲ್ಲಿ ಗ್ರಾಮಾಂತರ ಠಾಣೆ … Read more

ನೆಹರೂ ರೋಡ್ ಲಾಡ್ಜ್’ನಲ್ಲಿ ಸ್ನೇಹಿತನ ಹಣ, ಕಾರು ಕದ್ದು ಪರಾರಿಯಾಗಿದ್ದ ಖತರ್ನಾಕ್ ಕಳ್ಳ ಅರೆಸ್ಟ್, ಯಾರು ಗೊತ್ತ ಈ ಖದೀಮ?

Shimoga City Nehru Road General Image 1

ಶಿವಮೊಗ್ಗ ಲೈವ್.ಕಾಂ | SHIMOGA | 27 ಡಿಸೆಂಬರ್ 2019 ಸ್ನೇಹಿತನ ಕಾರು ಮತ್ತು ಹಣವನ್ನೇ ಕದ್ದಿದ್ದ ಕಳ್ಳನೊಬ್ಬನನ್ನು ಶಿವಮೊಗ್ಗ ಪೊಲೀಸರು ಬಂಧಿಸಿದ್ದಾರೆ. ಗೆಳೆಯನ ಜೊತೆಗೆ ಲಾಡ್ಜ್’ನಲ್ಲಿ ಉಳಿದುಕೊಂಡಿದ್ದಾಗಲೇ, ಈ ಖದೀಮ ತನ್ನ ಖತರ್ನಾಕ್ ಬುದ್ದಿ ಪ್ರದರ್ಶಿಸಿದ್ದ. ಬಿಜಾಪುರದ ಇಂಡಿ ತಾಲೂಕಿನ ಭುಯಾರ್ ಗ್ರಾಮದ ಆಕಾಶ್ ಸಿಂದಗಿ (20) ಬಂಧಿತ. ಕೋಟೆ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ, ಈತನನ್ನು ಬಂಧಿಸಿದ್ದಾರೆ. ಗೆಳೆಯನ ಕಾರು, ದುಡ್ಡು ಕದ್ದ ಶಿವಮೊಗ್ಗದ ಕೃಷಿ ನಗರ ನಿವಾಸಿ ಪ್ರದೀಪ್, ತನ್ನ ಸ್ನೇಹಿತ ಆಕಾಶ್ … Read more

ದುಬೈನಿಂದ ದೊಡ್ಡಪೇಟೆ ಠಾಣೆಗೆ ಕೊರಿಯರ್’ನಲ್ಲಿ ಬರ್ತಿದೆ ಮೂರು ಮೊಬೈಲ್, ಪಾರ್ಸಲ್ ಬರ್ತಿರೋದ್ಯಾಕೆ? ಕಳುಹಿಸ್ತಿರೋದ್ಯಾರು?

Doddapete police station in shimoga

ಶಿವಮೊಗ್ಗ ಲೈವ್.ಕಾಂ | SHIMOGA | 10 ಡಿಸೆಂಬರ್ 2019 ಒಮ್ಮೆ ಕಳವಾದ ಮೊಬೈಲ್ ವಾಪಸ್ ಕೈಸೇರುವುದು ವಿರಳ. ಅದರಲ್ಲೂ ಕಳ್ಳತನದ ಮಾಲು ಖರೀದಿಸಿದವರೇ ಪೋಸ್ಟ್ ಮೂಲಕ ಹೊರದೇಶದಿಂದ ಆ ಮೊಬೈಲ್‌ಗಳನ್ನು ಹಿಂದುರುಗಿಸುವುದು ಅಪರೂಪ. ಆದರೆ, ಇಂತಹ ಸನ್ನಿವೇಶಕ್ಕೆ ದೊಡ್ಡಪೇಟೆ ಪೊಲೀಸ್ ಠಾಣೆ ಸಾಕ್ಷಿಯಾಗಲಿದೆ. ಹೌದು, ಇನ್ನೂ ಮೂರ್ನಾಲ್ಕು ದಿನಗಳಲ್ಲಿ ಕಳವಾದ ಸ್ಮಾರ್ಟ್‌ಫೋನ್‌ಗಳು ಮಾಲೀಕರ ಕೈಸೇರಲಿದ್ದು, ದುಬೈನಿಂದ ಅವುಗಳನ್ನು ಪಾರ್ಸಲ್ ಮಾಡಲಾಗಿದೆ. ಪೊಲೀಸರ ಮೊಬೈಲ್’ಗಳನ್ನೇ ಕದ್ದಿದ್ದ ಕಳ್ಳ ಅಕ್ಟೋಬರ್‌ನಲ್ಲಿ ನಡೆದ ಹಿಂದೂ ಮಹಾಸಭಾ ಗಣೇಶ ಮೆರವಣಿಗೆ ಬಂದೋಬಸ್ತ್‌ಗೆ … Read more