ಶಿವಮೊಗ್ಗ ಜಿಲ್ಲೆಯಾದ್ಯಂತ ಮುಂದುವರೆದ ನಿಷೇಧಾಜ್ಞೆ, ಇವತ್ತು ಶಾಲೆ, ಕಾಲೇಜು ಪುನಾರಂಭ

Police Bus at Shimoga BH Road

SHIVAMOGGA LIVE NEWS | 16 ಮಾರ್ಚ್ 2022 ಹಿಜಾಬ್ ವಿವಾದ ಕುರಿತು ಹೈರ್ಕೋರ್ಟ್ ತೀರ್ಪು ಹಿನ್ನೆಲೆ, ಮುಂಜಾಗ್ರತ ಕ್ರಮವಾಗಿ ಶಿವಮೊಗ್ಗ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಈ ಮಧ್ಯೆ ಇವತ್ತು ಶಾಲೆ, ಕಾಲೇಜುಗಳು ಪುನಾರಂಭವಾಗುತ್ತಿವೆ. ಶಿವಮೊಗ್ಗ ಜಿಲ್ಲೆಯಾದ್ಯಂತ ಮಾರ್ಚ್ 21ರ ರಾತ್ರಿ 10 ಗಂಟೆವರೆಗೆ ನಿಷೇಧಾಜ್ಞೆ ಮುಂದುವರೆಯಲಿದೆ ಎಂದು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆದೇಶ ಹೊರಡಿಸಿದ್ದಾರೆ. ಈ ಅವಧಿಯಲ್ಲಿ ಐದು ಜನ ಅಥವಾ ಅದಕ್ಕಿಂತಲೂ ಹೆಚ್ಚಿನ ಜನರು ಗುಂಪುಗೂಡುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಶಾಲೆ, ಕಾಲೇಜು ಪುನಾರಂಭ ಹೈಕೋರ್ಟ್ ತೀರ್ಪು … Read more

ವಿನೋಬನಗರದಲ್ಲಿ ವಿದ್ಯುತ್ ಕಂಬದಿಂದ ಹಾರಿದ ಕಿಡಿಯಿಂದ ಮರಕ್ಕೆ ಬೆಂಕಿ, ಮೆಸ್ಕಾಂ ಸಿಬ್ಬಂದಿ ವಿರುದ್ಧ ಆಕ್ರೋಶ

Fire-at-Vinobanagara-Tree-60-feet-Road

SHIVAMOGGA LIVE NEWS | 15 ಮಾರ್ಚ್ 2022 ತಾಂತ್ರಿಕ ತೊಂದರೆಯಿಂದ ವಿದ್ಯುತ್ ಕಂಬದಿಂದ ಬೆಂಕಿ ಕಿಡಿ ಬಿದ್ದು, ಮರಕ್ಕೆ ಬೆಂಕಿ ಹೊತ್ತಿಕೊಂಡಿದೆ. ವಿಚಾರ ತಿಳಿಸಿ ಬಹು ಹೊತ್ತಾದರೂ ಸ್ಥಳಕ್ಕೆ ಬಾರದ ಮೆಸ್ಕಾಂ ಸಿಬ್ಬಂದಿ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು. ಶಿವಮೊಗ್ಗ ವಿನೋಬನಗರ 60 ಅಡಿ ರಸ್ತೆ ಆಂಜನೇಯ ದೇವಸ್ಥಾನದ ಬಳಿ ಘಟನೆ ಸಂಭವಿಸಿದೆ. ಕಿಡಿ ಬಿದ್ದು ಮರಕ್ಕೆ ಬೆಂಕಿ ಮಧ್ಯಾಹ್ನದ ವೇಳೆ ವಿದ್ಯುತ್ ಕಂಬದಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿದೆ. ದಿಢೀರ್ ಬೆಂಕಿ ಹೊತ್ತಿದಂತಾಗಿ ಕಿಡಿ ಕೆಳಗೆ ಬಿದ್ದಿದೆ. … Read more

ಇವತ್ತಿನ ಅಡಕೆ ಧಾರಣೆ | 15 ಮಾರ್ಚ್ 2022

Areca Price in Shimoga APMC

SHIVAMOGGA LIVE NEWS | 15 ಮಾರ್ಚ್ 2022 ಶಿವಮೊಗ್ಗ ಸೇರಿದಂತೆ ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಇವತ್ತಿನ ಅಡಕೆ ಧಾರಣೆ ಶಿವಮೊಗ್ಗ ಮಾರುಕಟ್ಟೆ ಗೊರಬಲು 18950 34069 ಬೆಟ್ಟೆ 47000 51363 ರಾಶಿ 42819 45919 ಸರಕು 51000 77399 ಸಾಗರ ಮಾರುಕಟ್ಟೆ ಕೆಂಪುಗೋಟು 31899 34099 ಕೋಕ 26899 29609 ಚಾಲಿ 33599 37459 ಬಿಳೆ ಗೋಟು 9809 27599 ರಾಶಿ 44809 45769 ಸಿಪ್ಪೆಗೋಟು 18399 20389 ಸಿದ್ಧಾಪುರ ಮಾರುಕಟ್ಟೆ ಕೆಂಪುಗೋಟು 26099 38089 ಕೋಕ … Read more

ಸಹ್ಯಾದ್ರಿ ಕಾಲೇಜು ವಿದ್ಯಾರ್ಥಿನಿಯರ ಹಾಸ್ಟೆಲ್’ಗೆ ಕುಲಸಚಿವೆ ಭೇಟಿ, ಅಡುಗೆ, ಶುಚಿತ್ವ ಪರಿಶೀಲನೆ

Kuvempu-University-Registrar-Visit-Sahyadri-College-Hostel.

SHIVAMOGGA LIVE NEWS | 15 ಮಾರ್ಚ್ 2022 ಸಹ್ಯಾದ್ರಿ ಕಾಲೇಜು ವಿದ್ಯಾರ್ಥಿನಿಯರ ಹಾಸ್ಟೆಲ್’ಗೆ ಕುವೆಂಪು ವಿಶ್ವವಿದ್ಯಾಲಯದ ಕುಲಸಚಿವೆ ಜಿ.ಅನುರಾಧ ಅವರು ಇವತ್ತು ಭೇಟಿ ನೀಡಿದ್ದರು. ಹಾಸ್ಟೆಲ್ ಪರಿಶೀಲನೆ ನಡೆಸಿದ ಕುಲಸಚಿವೆ, ವಿದ್ಯಾರ್ಥಿನಿಯರೊಂದಿಗೆ ಸಂವಾದ ನಡೆಸಿದರು. ಸಹ್ಯಾದ್ರಿ ಕಾಲೇಜು ಹಾಸ್ಟೆಲ್’ನ ಸಮಸ್ಯೆ ಕುರಿತು ಸೋಮವಾರ ವಿದ್ಯಾರ್ಥಿನಿಯರು ದಿಢೀರ್ ಪ್ರತಿಭಟನೆ ನಡೆಸಿದ್ದರು. ತಕ್ಷಣವೆ ಸಮಸ್ಯೆಗಳನ್ನು ಪರಿಹಾರಿಸಬೇಕು ಎಂದು ಆಗ್ರಹಿಸಿದ್ದರು. ಈ ಹಿನ್ನೆಲೆಯಲ್ಲಿ ಇವತ್ತು ಕುಲಸಚಿವೆ ಜಿ. ಅನುರಾಧ ಅವರು ವಿದ್ಯಾರ್ಥಿನಿಲಯಗಳಿಗೆ ಭೇಟಿ ನೀಡಿ‌ ಪರಿಶೀಲನೆ ನಡೆಸಿದರು. ವಿದ್ಯಾರ್ಥಿನಿಯರೊಂದಿಗೆ ಸಂವಾದ ಈ … Read more

SHIMOGA JOBS | ಶಿವಮೊಗ್ಗದ ಮಾರ್ಗದರ್ಶಿ ಚಿಟ್ ಫಂಡ್ಸ್ ಸಂಸ್ಥೆಯಲ್ಲಿ ಉದ್ಯೋಗವಕಾಶ, ಅರ್ಹತೆ ಏನು?

jobs news shivamogga live

SHIVAMOGGA LIVE NEWS | 15 ಮಾರ್ಚ್ 2022 ಮಾರ್ಗದರ್ಶಿ ಚಿಟ್ ಫಂಡ್ಸ್ ಸಂಸ್ಥೆಯ ಶಿವಮೊಗ್ಗ ವಿಭಾಗದಲ್ಲಿ ಕೆಲಸ ಖಾಲಿ ಇದೆ. ಆಸಕ್ತರು ಅರ್ಜಿ ಸಲ್ಲಿಸಬಹುದು. ಇದರ ಮಾಹಿತಿ ಇಲ್ಲಿದೆ Required Male staff for Address verification and court work for Margadarsi Chits(Kar) Pvt Ltd Work Location: Shimoga Age: below 25 years Qualification: Degree Candidates interested in fieldwork can contact Tulsi Ram V at 9538749071 … Read more

‘ದಿ ಕಾಶ್ಮೀರ ಫೈಲ್ಸ್’ ಚಿತ್ರ ಉಚಿತ ಪ್ರದರ್ಶನಕ್ಕೆ ಭರ್ಜರಿ ರೆಸ್ಪಾನ್ಸ್, ಮತ್ತೆರಡು ದಿನ ಫ್ರೀ ಶೋಗೆ ಡೇಟ್ ಫಿಕ್ಸ್

Kashmir-files-in-Shimoga-veerabhadreshwara-Talkies

SHIVAMOGGA LIVE NEWS | 15 ಮಾರ್ಚ್ 2022 ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಕುಟುಂಬ ಸಹಿತವಾಗಿ ‘ದಿ ಕಾಶ್ಮೀರ ಫೈಲ್ಸ್’ ಸಿನಿಮಾ ವೀಕ್ಷಿಸಿದರು. ಬಿಜೆಪಿ ಸೇರಿದಂತೆ ವಿವಿಧ ಸಂಘಟನೆಗಳ ಕಾರ್ಯಕರ್ತರು, ನಾಗರಿಕರು ದೊಡ್ಡ ಸಂಖ್ಯೆಯಲ್ಲಿ ಚಿತ್ರ ವೀಕ್ಷಿಸುತ್ತಿದ್ದಾರೆ. ಶಿವಮೊಗ್ಗದ ವೀರಭದ್ರೇಶ್ವರ ಚಿತ್ರಮಂದಿರದಲ್ಲಿ ‘ದಿ ಕಾಶ್ಮೀರ ಫೈಲ್ಸ್’ ಸಿನಿಮಾದ ವಿಶೇಷ ಪ್ರದರ್ಶನ ಆಯೋಜಿಸಲಾಗಿದೆ. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ಈ.ಕಾಂತೇಶ್ ಅವರು ಉಚಿತ ಪ್ರದರ್ಶನ ಆಯೋಜಿಸಿದ್ದಾರೆ. ಚಿತ್ರ ವೀಕ್ಷೆಣೆಗೆ ಜನವೋ ಜನ ದಿ ಕಾಶ್ಮೀರ ಫೈಲ್ಸ್ ಚಿತ್ರ … Read more

BREAKING NEWS | ಭಾರಿ ಸ್ಪೋಟ, ಮನೆ ಸುಟ್ಟು ಭಸ್ಮ, ಗ್ರಾಮದಲ್ಲಿ ಕೆಲಕಾಲ ಆತಂಕ

Cylinder-Blast-At-Antaragange-in-Bhadravathi.

SHIVAMOGGA LIVE NEWS | 15 ಮಾರ್ಚ್ 2022 ಸಿಲಿಂಡರ್ ಸ್ಫೋಟಗೊಂಡು ಮನೆಯಲ್ಲಿದ್ದ ವಸ್ತುಗಳೆಲ್ಲ ಸುಟು ಭಸ್ಮವಾಗಿವೆ. ಅದೃಷ್ಟವಶಾತ್ ಯಾವುದೆ ಪ್ರಾಣಹಾನಿ ಸಂಭವಿಸಿಲ್ಲ. ಭದ್ರಾವತಿ ತಾಲೂಕು ಅಂತರಗಂಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಂಗನಾಥಪುರ ಗ್ರಾಮದಲ್ಲಿ ಇವತ್ತು ಮಧ್ಯಾಹ್ನ ಘಟನೆ ಸಂಭವಿಸಿದೆ. ಭಾರಿ ಶಬ್ದಕ್ಕೆ ಬೆಚ್ಚಿಬಿದ್ದರು ಮಧ್ಯಾಹ್ನ 3.30ರ ಹೊತ್ತಿಗೆ ರಂಗನಾಥಪುರ ಗ್ರಾಮದಲ್ಲಿ ಸ್ಪೋಟದ ಶಬ್ದ ಕೇಳಿದೆ. ಭಾರಿ ಶಬ್ದಕ್ಕೆ ಜನರು ಬೆಚ್ಚಿಬಿದ್ದಿದ್ದಾರೆ. ಈ ವೇಳೆ ರಂಗನಾಥಪುರ ಗ್ರಾಮದ ವಳ್ಳೂರುಮದಿ ಅವರ ಮನೆ ಸಂಪೂರ್ಣ ಸುಟ್ಟು ಹೋಗಿದೆ. ಅದೃಷ್ಟವಶಾತ್ ಉಳಿಯಿತು … Read more

ಶಿವಮೊಗ್ಗದಲ್ಲಿ ನಿಷೇಧಾಜ್ಞೆ, ವ್ಯಾಪಾರ, ವಹಿವಾಟಿಗೆ ಇಲ್ಲ ನಿರ್ಬಂಧ, ಹೇಗಿದೆ ನಗರದ ಪರಿಸ್ಥಿತಿ?

BH Road Shivappanayaka Statue 1

SHIVAMOGGA LIVE NEWS | 15 ಮಾರ್ಚ್ 2022 ನಿಷೇಧಾಜ್ಞೆ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ವ್ಯಾಪಾರ, ವಾಹಿವಾಟು ಸಾಮಾನ್ಯ ದಿನದ ಹಾಗೆ ಇದೆ. ಕಚೇರಿಗಳು ಎಂದಿನಂತೆ ಕಾರ್ಯ ನಿರ್ವಹಿಸುತ್ತಿವೆ. ಹಿಜಾಬ್ ಕುರಿತು ಹೈಕೋರ್ಟ್ ತೀರ್ಪು ಹಿನ್ನೆಲೆ ಶಿವಮೊಗ್ಗ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ವ್ಯಾಪಾರಿಗಳು, ಗ್ರಾಹಕರಿಗೆ ಇದರು ಆತಂಕ ಉಂಟು ಮಾಡಿತ್ತು. ಸಹಜವಾಗಿದೆ ಶಿವಮೊಗ್ಗ ಶಿವಮೊಗ್ಗದಲ್ಲಿ ವ್ಯಾಪಾರ, ವಹಿವಾಟಿಗೆ ಯಾವುದೆ ತೊಂದರೆ ಇಲ್ಲ. ಬೆಳಗ್ಗೆಯಿಂದಲು ಅಗತ್ಯ ವಸ್ತುಗಳ ಖರೀದಿಗೆ ಜನರು ಬರುತ್ತಿದ್ದಾರೆ. ಗಾಂಧಿ … Read more

‘ಮುಸ್ಲಿಂ ಹೆಣ್ಣು ಮಕ್ಕಳಿಗೆ ಅನ್ಯಾಯ ಆಗದ ರೀತಿ ಸರ್ಕಾರ ಯೋಚಿಸಲಿದೆ’

Minister KS Eshwarappa

SHIVAMOGGA LIVE NEWS | 15 ಮಾರ್ಚ್ 2022 ಸರ್ಕಾರದ ತೀರ್ಮಾನವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ. ಮುಸ್ಲಿಂ ಹೆಣ್ಣು ಮಕ್ಕಳಿಗೆ ಅನ್ಯಾಯ ಆಗದ ರೀತಿಯಲ್ಲಿ ಸರ್ಕಾರ ಯೋಚನೆ ಮಾಡಲಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಕೆ.ಎಸ್.ಈಶ್ವರಪ್ಪ ಅವರು, ಕೋರ್ಟ್ ತೀರ್ಮಾನವನ್ನು ಸ್ವಾಗತ ಮಾಡುತ್ತೇನೆ. ದೇಶದಲ್ಲಿ ಇರುವ ಗೊಂದಲ ನಿವಾರಣೆ ಆಗಿದೆ. ಎಲ್ಲಾ ವಿದ್ಯಾರ್ಥಿಗಳು ತಕ್ಷಣದಿಂದ ಶಾಲೆ, ಕಾಲೇಜುಗಳಿಗೆ ತೆರಳಬೇಕು ಎಂದು ಸಲಹೆ ನೀಡಿದರು. ಮಕ್ಕಳ ಶಿಕ್ಷಣ ಹಾಳಾಗಿದೆ ಮಕ್ಕಳ ಶಿಕ್ಷಣಕ್ಕೆ ಸಮಸ್ಯೆ ಆಗಿದೆ. … Read more

ಹೊಟ್ಟೆ ತುಂಬಾ ಊಟ ಮಾಡಿ ಅಡುಗೆ ಭಟ್ಟನ ಮುಖದ ಮೇಲೆ ಬಿಸಿ ಎಣ್ಣೆ ಎರಚಿದರು, ದಾಂಧಲೆಯ ವಿಡಿಯೋ ವೈರಲ್

crime name image

SHIVAMOGGA LIVE NEWS | 15 ಮಾರ್ಚ್ 2022 ಹೊಟ್ಟೆ ಬಿರಿಯುವ ಹಾಗೆ ಮಾಂಸದೂಟ ಮಾಡಿ ಯುವಕರ ಗುಂಪು ಬಿಲ್ ಕೇಳಿದಾಗ ಜಗಳ ಶುರು ಮಾಡಿ ಹೊಟೇಲ್ ಮಾಲೀಕನ ಮೇಲೆ ಹಲ್ಲೆ ನಡೆಸಿದ್ದಾರೆ. ಅಡುಗೆ ಭಟ್ಟನ ಮುಖದ ಮೇಲೆ ಬಾಣೆಲೆಯಲ್ಲಿದ್ದ ಬಿಸಿ ಎಣ್ಣೆಯನ್ನು ಎರಚಿದ್ದಾರೆ. ಭದ್ರಾವತಿಯ ಜನ್ನಾಪುರದಲ್ಲಿ ಘಟನೆ ಸಂಭವಿಸಿದೆ. ಮಿಲ್ಟ್ರಿ ಹೊಟೇಲ್ ಒಂದರಲ್ಲಿ ಹೊಟ್ಟೆ ಬಿರಿಯುವ ಹಾಗೆ ಮಾಂಸದ ಊಟ ಮಾಡಿದ ಯುವಕರ ಗುಂಪು, ಬಿಲ್ ಕೇಳಿದಾಗ ಗಲಾಟೆ ಶುರು ಮಾಡಿದ್ದಾರೆ. ಮಾಲೀಕನ ಮೇಲೆ ಹಲ್ಲೆ ಜನ್ನಾಪುರದ … Read more