ಇರುವಕ್ಕಿ ಸುತ್ತಮುತ್ತ ಕಲ್ಲುಕ್ವಾರಿಗೆ ವಿರೋಧ, ಉಪ ವಿಭಾಗಾಧಿಕಾರಿಗೆ ದೂರು

Iruvakki-villagers-submit-memorandum-against-stone-mining

SHIVAMOGGA LIVE NEWS | 28 SEPTEMBER 2023 SAGARA : ಇರುವಕ್ಕಿ ಗ್ರಾಮ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ಕಲ್ಲುಕ್ವಾರಿಗಳಿಗೆ (Stone Mining) ಅವಕಾಶ ನೀಡಬಾರದು ಎಂದು ಒತ್ತಾಯಿಸಿ ಗ್ರಾಮಸ್ಥರು ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದರು. ಇರುವಕ್ಕಿ ಗ್ರಾಮದ ಸರ್ವೆ ನಂಬರ್‌ 30 ಹಾಗೂ 31ರಲ್ಲಿ ಹೊಸದಾಗಿ ಕಲ್ಲುಕ್ವಾರಿ ಆರಂಭಿಸಲು ಕೆಲವರು ಮುಂದಾಗಿದ್ದಾರೆ. ಈ ಪ್ರದೇಶ ಶರಾವತಿ ಉಪ ನದಿಯ ದಂಡೆ. ಕಲ್ಲುಕ್ವಾರಿಗೆ (Stone Mining) ಅವಕಾಶ ನೀಡಿದರೆ ಕೃಷಿ ಚಟುವಟಿಕೆಗೆ ನೀರು ಪೂರೈಸಲು ತೊಂದರೆಯಾಗುತ್ತದೆ. ಪರಿಸರ ನಾಶವಾಗಲಿದ್ದು, … Read more

ಸಾಗರ – ಸಿಗಂದೂರು ರಸ್ತೆಯ ಲೇ ಔಟ್‌ನಲ್ಲಿ ಅಪರೂಪದ ಕಾಡುಪಾಪ ಪತ್ತೆ

Slender-loris-Found-in-Sagara-sigandur.

SHIVAMOGGA LIVE NEWS | 24 SEPTEMBER 2023 SAGARA : ಪಟ್ಟಣದ ಬಡಾವಣೆಯೊಂದರಲ್ಲಿ (Layout) ಅಪರೂಪದ ತಳಿಯ ಕಾಡುಪಾಪ ಕಾಣಿಸಿಕೊಂಡಿದೆ. ಪರಿಸರ ಕಾರ್ಯಕರ್ತ ಅಖಿಲೇಶ್‌ ಚಿಪ್ಪಳಿ ಅವರ ನೇತೃತ್ವದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಯೊಂದಿಗೆ ಅದನ್ನು ಕಾಡಿಗೆ ಬಿಡಲಾಯಿತು. ಸಾಗರ – ಸಿಗಂದೂರು (Sigandur) ರಸ್ತೆಯ ಲೇ ಔಟ್‌ನ ಬೇಲಿಯ ನಡುವೆ ಈ ಕಾಡುಪಾಪ ಕಾಣಿಸಿಕೊಂಡಿದೆ. ಇಂಗ್ಲಿಷ್‌ನಲ್ಲಿ ಇದನ್ನು ಸ್ಲೆಂಡರ್ ಲೋರಿಸ್ ಎಂದು ಕರೆಯಲಾಗುತ್ತದೆ. ನಿಧಾನವಾಗಿ ಸಾಗುವ, ಓಡಲು, ಹಾರಲು ಬಾರದ ಸೌಮ್ಯ ಸ್ವಭಾವದ ಪ್ರಾಣಿ ಎಂದು … Read more

ಮರಸ ಗ್ರಾಮದ ಬಳಿ ಲಾರಿ ಪಲ್ಟಿ, ಸೊರಬದ ಚಾಲಕ ಸಾವು

Truck-incident-near-marasa-village-in-Sagara.

SHIVAMOGGA LIVE NEWS | 21 SEPTEMBER 2023 SAGARA : ಹೆಂಚು ತುಂಬಿಕೊಂಡು ಹೋಗುತ್ತಿದ್ದ ಲಾರಿ (Truck) ಪಲ್ಟಿಯಾಗಿ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಸಾಗರ ತಾಲೂಕು ಮರಸ ಗ್ರಾಮದ ಸಮೀಪ ಘಟನೆ ಸಂಭವಿಸಿದೆ. ಸೊರಬ ತಾಲೂಕಿನ ಉಸ್ಮಾನ್‌ ಖಾನ್‌ (41) ಮೃತ ಚಾಲಕ. ಸಾಗರದಿಂದ ಸೊರಬಕ್ಕೆ ಹೆಂಚು ತುಂಬಿಕೊಂಡು ಲಾರಿ (Truck) ತೆರಳುತ್ತಿತ್ತು. ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿಯಾಗಿದೆ. ಸಾಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ – ಶಿವಮೊಗ್ಗದಲ್ಲಿ ಬಸ್ಸಿಗಾಗಿ ಕಾದು ಕಾದು … Read more

ಇಂಟರ್‌ಸಿಟಿ ರೈಲು ಗಂಟೆಗಟ್ಟಲೆ ತಡವಾಗಿದ್ದಕ್ಕೆ ಕಾರಣ ಬಯಲು, ಕುಂಸಿಯ ಯುವಕರು, ಶಿವಮೊಗ್ಗದ ವ್ಯಾಪಾರಿಗಳು ಅರೆಸ್ಟ್‌

Railway-Police-arrest-five-for-electric-wire-theft-in-Shimoga-sagara.webp

SHIVAMOGGA LIVE NEWS | 14 SEPTEMBER 2023 SAGARA : ರೈಲ್ವೆಯ ಒಹೆಚ್‌ಇ ತಾಮ್ರದ ತಂತಿ ಕಳ್ಳತನ ಮಾಡಿದ್ದ ಆರೋಪಿಗಳು ಮತ್ತು ಅದನ್ನು ಖರೀದಿಸಿದ್ದ ವ್ಯಾಪಾರಿಗಳು ಸೇರಿದಂತೆ ಐವರನ್ನು ಬಂಧಿಸಲಾಗಿದೆ. ಇವರಿಂದ 2 ಲಕ್ಷ ರೂ. ಮೌಲ್ಯದ ತಾಮ್ರದ ತಂತಿ ವಶಕ್ಕೆ ಪಡೆಯಲಾಗಿದೆ ಎಂದು ರೈಲೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಸೆ.6ರ ರಾತ್ರಿ ಸಾಗರ ಮತ್ತು ಆನಂದಪುರ ಮಧ್ಯೆ ರೈಲ್ವೆ ವಿದ್ಯುದೀಕರಣದ ತಾಮ್ರದ ತಂತಿ ತುಂಡಾಗಿ ಹಳಿ ಮೇಲೆ ಬಿದ್ದಿತ್ತು. ಸೆ.7ರಂದು ಬೆಳಗ್ಗೆ ತಾಳಗುಪ್ಪದಿಂದ ಹೊರಟಿದ್ದ … Read more

ಸಾಗರ, ಆನಂದಪುರ, ಕುಂಸಿ ಮಧ್ಯೆ ರೈಲ್ವೆ ಲೆವೆಲ್‌ ಕ್ರಾಸಿಂಗ್‌ ತಾಂತ್ರಿಕ ಪರಿಶೀಲನೆ, ವಾಹನಗಳಿಗೆ ಪರ್ಯಾಯ ಮಾರ್ಗ

railway-track-general-image.webp

SHIVAMOGGA LIVE NEWS | 14 SEPTEMBER 2023 SHIMOGA : ಸಾಗರ ಜಂಬಗಾರು – ಆನಂದಪುರ ಮತ್ತು ಕುಂಸಿ – ಆನಂದಪುರ ರೈಲ್ವೆ ನಿಲ್ದಾಣಗಳ (Railway Stations) ನಡುವೆ ರೈಲ್ವೆ ಲೆವಲ್ ಕ್ರಾಸಿಂಗ್‌ಗಳಲ್ಲಿ ತಾಂತ್ರಿಕ ಪರಿಶೀಲನೆ ನೆಡಸಲಾಗುತ್ತಿದೆ. ಈ ಹಿನ್ನೆಲೆ ಸೆ.13 ರಿಂದ 15 ಹಾಗೂ ಸೆ.20 ರಿಂದ 22ರ ವರೆಗೆ ಗೇಟ್ ಮುಚ್ಚಿ ಪರ್ಯಾಯ ಮಾರ್ಗ ಕಲ್ಪಿಸಲಾಗಿದೆ. ಸೆ.13 ರಿಂದ 15ರವರೆಗೆ ಸಾಗರ ಜಂಬಗಾರು – ಆನಂದಪುರ ಮಧ್ಯೆ ಬರುವ ರೈಲ್ವೆ ಲೆವಲ್ ಕ್ರಾಸಿಂಗ್, … Read more

ಶಿವಮೊಗ್ಗ, ಭದ್ರಾವತಿ, ಸಾಗರದಲ್ಲಿ ರೌಡಿಗಳ ಪರೇಡ್‌, ಖಡಕ್‌ ವಾರ್ನಿಂಗ್‌

Rowdy-Parade-in-Shimoga-city-and-sagara.webp

SHIVAMOGGA LIVE NEWS | 14 SEPTEMBER 2023 SHIMOGA : ಮುಂಬರುವ ಗೌರಿ ಗಣೇಶ ಮತ್ತು ಈದ್ ಮಿಲಾದ್ ಹಬ್ಬದ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ರೌಡಿ ಪರೇಡ್ (Rowdy Parade) ಮಾಡಲಾಯಿತು. ಶಿವಮೊಗ್ಗ ನಗರದಲ್ಲಿ 144 ಜನ, ಭದ್ರಾವತಿಯಲ್ಲಿ 79 ಮತ್ತು ಸಾಗರದಲ್ಲಿ 40 ರೌಡಿಗಳು ಸೇರಿ ಒಟ್ಟು 263 ಜನ ರೌಡಿಗಳು ಹಾಜರಿದ್ದರು. ಪರೇಡ್‌ನಲ್ಲಿ ಹಾಜರಿದ್ದ ರೌಡಿಗಳ ಹಾಲಿ ವಿಳಾಸ, ಆದಾಯದ ಮೂಲ ಮತ್ತು ಜೀವನೋಪಾಯಕ್ಕಾಗಿ ಮಾಡುತ್ತಿರುವ ಕೆಲಸಗಳ ಕುರಿತು ಮಾಹಿತಿ ಪಡೆಯಲಾಯಿತು. ಅಲ್ಲದೆ … Read more

ವಾಹನಗಳಿಗೆ ದುಬಾರಿ ತೆರಿಗೆ, ಸಾಗರದಲ್ಲಿ ಆಕ್ರೋಶ, ಪ್ರತಿಭಟನಾಕಾರರ ಬೇಡಿಕೆ ಏನು?

Vehicle-owners-protest-in-sagara-over-tax-system.webp

SHIVAMOGGA LIVE NEWS | 11 SEPTEMBER 2023 SAGARA : ವಾಹನಗಳ ಮೇಲಿನ ಪೂರ್ಣಾವಧಿ ತೆರಿಗೆ (Vehicle Tax) ಹಿಂದಕ್ಕೆ ಪಡೆಯಬೇಕು ಎಂದು ಆಗ್ರಹಿಸಿ ವಾಹನ ಮಾಲೀಕರು ಮತ್ತು ಚಾಲಕರ ಸಂಘದ ವತಿಯಿಂದ ಸಾಗರ ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಮಹಾ ಗಣಪತಿ ದೇವಸ್ಥಾನದಿಂದ ಪ್ರದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿವರೆಗೆ ಮೆರವಣಿಗೆ ನಡೆಸಲಾಯಿತು. ಹಲವು ಲಘು ವಾಹನಗಳು ಮೆರವಣಿಗೆಯಲ್ಲಿದ್ದವು. ಇದನ್ನೂ ಓದಿ – ಬೆಳ್ಳಂಬೆಳಗ್ಗೆ ಶಿವಮೊಗ್ಗ ಜಿಲ್ಲೆಯಲ್ಲಿ 241 ರೌಡಿಗಳ ಮನೆ ಮೇಲೆ ಪೊಲೀಸರ ದಾಳಿ, ಖುದ್ದು … Read more

ರೈಲ್ವೆ ನಿಲ್ದಾಣಕ್ಕೆ ಆರ್‌ಎಂಎಲ್‌ ಹೆಸರಿಡುವಂತೆ ಆಗ್ರಹ, ಡಿಸಿಗೆ ಮನವಿ

090923 Kalluru Megharaj memorandum about sagara railway station

SHIVAMOGGA LIVE NEWS | 9 SEPTEMBER 2023 SHIMOGA : ಸಾಗರದ ಜಂಬಗಾರು ರೈಲು ನಿಲ್ದಾಣಕ್ಕೆ ರಾಮಮನೋಹರ ಲೋಹಿಯಾ ಅವರ ಹೆಸರು ನಾಮಕರಣ ಮಾಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವಂತೆ ಆಗ್ರಹಿಸಿ ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್ ಸದಸ್ಯರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಬಂಧನಕ್ಕೆ ಒಳಗಾಗಿದ್ದರು ರಾಮಮನೋಹರ ಲೋಹಿಯಾ ಅವರು 1951ರ ಜೂನ್ 13ರಂದು ಜಂಬಗಾರು ರೈಲು ನಿಲ್ದಾಣದಲ್ಲಿ ‘ಉಳುವವನೇ ಹೊಲದೊಡೆಯ’ ಕಾಗೋಡು ಸತ್ಯಾಗ್ರಹದಲ್ಲಿ ಭಾಗವಹಿಸಿ ಬಂಧನಕ್ಕೆ ಒಳಗಾಗಿದ್ದರು. ಈ ಹೋರಾಟಕ್ಕೆ 2024ರ ಜೂ.13ಕ್ಕೆ … Read more

ಸಾಗರದಲ್ಲಿ ಎಂಎಲ್‌ಎ ನೇತೃತ್ವದಲ್ಲಿ ಭಾರತ್‌ ಜೋಡೋ

080923-Bharat-Jodo-in-Sagara-Beluru-Gopalakrishna-and-Kagodu-Thimmappa.webp

SHIVAMOGGA LIVE NEWS | 8 SEPTEMBER 2023 SAGARA : ಭಾರತ್ ಜೋಡೋ (BHARAT JODO) ಯಾತ್ರೆಯ ಮೂಲಕ ರಾಹುಲ್ ಗಾಂಧಿಯವರು ಇಡೀ ದೇಶವನ್ನು ಜೋಡಿಸುವ ಕೆಲಸವನ್ನು ಮಾಡಿದರು. ಈ ಯಾತ್ರೆಯಿಂದ ಕಾಂಗ್ರೆಸ್ ಪಕ್ಷದ ವರ್ಚಸ್ಸು ಹೆಚ್ಚಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು. ಇದನ್ನೂ ಓದಿ – ಎಂ.ಶ್ರೀಕಾಂತ್‌ ಕಾಂಗ್ರೆಸ್‌ ಸೇರ್ಪಡೆಗೆ ಮುಹೂರ್ತ ಫಿಕ್ಸ್‌, ವೈರಲ್‌ ಆಯ್ತು ಫೋಟೋ, ಯಾವಾಗ ಸೇರ್ಪಡೆ? ಸಾಗರ್ ಹೋಟೆಲ್ ವೃತ್ತದಲ್ಲಿ ಆಯೋಜಿಸಿದ್ದ ಭಾರತ್ ಜೋಡೋ ಯಾತ್ರೆ ಒಂದು ವರ್ಷ ಪೂರೈಸಿದ … Read more

ಬಾವಿ ತೆಗೆಯುವಾಗ ತಲೆ ಮೇಲೆ ಕಲ್ಲು ಬಿದ್ದು ಕಾರ್ಮಿಕ ಸ್ಥಳದಲ್ಲೇ ಸಾವು, ಹೇಗಾಯ್ತು ಘಟನೆ?

sagara graphics

SHIVAMOGGA LIVE NEWS | 8 SEPTEMBER 2023 SAGARA : ಬಾವಿ (Well) ತೆಗೆಯುವ ಕಾಮಗಾರಿ ವೇಳೆ ಕಾರ್ಮಿಕ ಮೃತಪಟ್ಟಿರುವ ಘಟನೆ ಸಾಗರದ ನೆಹರೂ ನಗರ ಬಡಾವಣೆಯಲ್ಲಿ ನಡೆದಿದೆ. ಇದನ್ನೂ ಓದಿ – ಶಿವಮೊಗ್ಗದಲ್ಲಿ ಬೈಕ್‌ ಓಡಿಸಿ ಸಿಕ್ಕಿಬಿದ್ದ ಮಗ, ಅಪ್ಪನಿಗೆ 25 ಸಾವಿರ ರೂ. ದಂಡ, ಏನಿದು ಕೇಸ್‌? ಮೋಹನ (55) ಮೃತ ಕಾರ್ಮಿಕ. ಮೂವರು ಕಾರ್ಮಿಕರು ನಿರ್ಮಾಣ ಹಂತದಲ್ಲಿದ್ದ ಬಾವಿಯಲ್ಲಿ ಇಳಿದು ಕೆಲಸ ಮಾಡುತ್ತಿದ್ದರು. ಬಾವಿಯ ಮೇಲ್ಬಾದಿಂದ ಕಲ್ಲು ಉರುಳಿ ಮೋಹನ್ ಅವರ ತಲೆ … Read more