ತಹಶೀಲ್ದಾರ್, ರೆವಿನ್ಯೂ ಇನ್ಸ್ ಪೆಕ್ಟರ್, ಗ್ರಾಮ ಲೆಕ್ಕಿಗ ಸೇರಿ ನಾಲ್ವರ ವಿರುದ್ಧ ಶಿವಮೊಗ್ಗದಲ್ಲಿ ಕೇಸ್

crime name image

SHIVAMOGGA LIVE NEWS | 2 ಮಾರ್ಚ್ 2022 ನಕಲಿ ಜಾತಿ ಪ್ರಮಾಣ ಪತ್ರ ವಿತರಣೆ ಸಂಬಂಧ ಶಿವಮೊಗ್ಗ ತಹಶೀಲ್ದಾರ್ ಸೇರಿ ನಾಲ್ವರ ವಿರುದ್ಧ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯ ದೂರು ನೀಡಿದೆ. ತಹಶೀಲ್ದಾರ್, ರೆವಿನ್ಯೂ ಇನ್ಸ್ ಪೆಕ್ಟರ್, ಗ್ರಾಮ ಲೆಕ್ಕಿಗ ಸೇರಿ ನಾಲ್ಕು ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ. ಏನಿದು ಕೇಸ್? ಸುಳ್ಳು ಮಾಹಿತಿ ನೀಡಿ ವೈ.ಸಿ.ಶೇಷಪ್ಪ ಎಂಬುವವರು ನಕಲಿ ಜಾತಿ ಪ್ರಮಾಣ ಪತ್ರ ಪಡೆದುಕೊಂಡಿದ್ದಾರೆ ಎಂದು ಆರೋಪಿಸಲಾಗಿತ್ತು. ಜಿಲ್ಲಾ ಜಾತಿ ಪರಿಶೀಲನಾ ಸಮಿತಿಯ ಜಿಲ್ಲಾಧಿಕಾರಿ ಅವರು … Read more

ಶಿವಮೊಗ್ಗದ ಓ.ಟಿ.ರಸ್ತೆಯಲ್ಲಿ ಬೊಲೆರೋ ಪಿಕಪ್ ವಾಹನದ ಮೇಲೆ ಪೊಲೀಸರ ದಾಳಿ

Doddapete police station in shimoga

SHIVAMOGGA LIVE NEWS | 2 ಮಾರ್ಚ್ 2022 ಪಡಿತರ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲು ಕೊಂಡೊಯ್ಯುತ್ತಿದ್ದ ಬೊಲೇರೋ ಪಿಕಪ್ ವಾಹನದ ಮೇಲೆ ದಾಳಿ ನಡೆಸಲಾಗಿದೆ. ಖಚಿತ ಮಾಹಿತಿ ಮೇರೆಗೆ ಆಹಾರ ಇಲಾಖೆ ಅಧಿಕಾರಿಗಳು, ಪೊಲೀಸರ ನೆರವಿನೊಂದಿಗೆ ದಾಳಿ ನಡೆಸಿದ್ದಾರೆ. ಶಿವಮೊಗ್ಗದ ಓ.ಟಿ.ರಸ್ತೆಯ ಆಜಾದ್ ನಗರದ 3ನೇ ತಿರುವಿನಲ್ಲಿ ದಾಳಿ ನಡೆಸಲಾಯಿತು. ಹೇಗಾಯ್ತು ದಾಳಿ? ಎಷ್ಟು ಅಕ್ಕಿ ಸಿಕ್ತು? ಬೊಲೆರೋ ಪಿಕಪ್ ವಾಹನದಲ್ಲಿ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಕೊಂಡೊಯ್ಯಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಫುಡ್ … Read more

ಶಿವಮೊಗ್ಗ KSRTC ಬಸ್ ನಿಲ್ದಾಣದಲ್ಲಿ ಬ್ಯಾಗ್ ಕಳ್ಳರ ಹಾವಳಿ, ಕೆಲವೆ ನಿಮಿಷದಲ್ಲಿ ಯುವತಿ ಬ್ಯಾಗ್ ನಾಪತ್ತೆ

KSRTC-Bus-After-Curfew-In-Shimoga-city

SHIVAMOGGA LIVE NEWS | 2 ಮಾರ್ಚ್ 2022 ಶಿವಮೊಗ್ಗದ KSRTC ಬಸ್ ನಿಲ್ದಾಣದಲ್ಲಿ ಬ್ಯಾಗ್ ಕಳ್ಳರ ಹಾವಳಿ ಮುಂದುವರೆದಿದೆ. ಮೈಸೂರಿಗೆ ತೆರಳಲು ಬಸ್ ಹತ್ತಿದ್ದ ಯುವತಿಯೊಬ್ಬರ ಲ್ಯಾಪ್ ಟಾಪ್ ಬ್ಯಾಗ್ ಕಳವು ಮಾಡಲಾಗಿದೆ. ಖಾಸಗಿ ಕಂಪನಿ ಉದ್ಯೋಗಿ ಅನುಶ್ರೀ ಎಂಬುವವರು ಮೈಸೂರಿಗೆ ತೆರಳಲು ಬಸ್ ಹತ್ತಿದ್ದರು. ಲಗೇಜ್ ಬ್ಯಾಗ್ ಮತ್ತು ಲ್ಯಾಪ್ ಟಾಪ್ ಬ್ಯಾಗನ್ನು ಸೀಟಿನಲ್ಲಿ ಇರಿಸಿದ್ದರು. ಕಂಡಕ್ಟರ್’ಗೆ ತಿಳಿಸಿ ಶೌಚಾಲಯಕ್ಕೆ ಹೋಗಿ ಬರುವಷ್ಟರಲ್ಲಿ ಲ್ಯಾಪ್ ಟಾಪ್ ಬ್ಯಾಗ್ ನಾಪ್ತೆಯಾಗಿತ್ತು. ಲ್ಯಾಪ್ ಟಾಪ್ ಬ್ಯಾಗಿನಲ್ಲಿ ಒಂದು ಲ್ಯಾಪ್ … Read more

ಶಿವಮೊಗ್ಗದಲ್ಲಿ ರಾತ್ರೋರಾತ್ರಿ 250 ಕೆ.ಜಿ. ಅಡಕೆ ನಾಪತ್ತೆ

Areca-Nuts-General-Image

SHIVAMOGGA LIVE NEWS | 1 ಮಾರ್ಚ್ 2022 ರಾತ್ರೋರಾತ್ರಿ ಸುಮಾರು 250 ಕೆ.ಜಿ.ಯಷ್ಟು ಸಿಪ್ಪೆಗೋಟು ಅಡಕೆ ಕಳ್ಳತನವಾಗಿದೆ. ಈ ಸಂಬಂಧ ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಳೆ ಹೊನ್ನಾಪುರದ ರಮೇಶ್ ಎಂಬುವವರಿಗೆ ಸೇರಿದ 250 ಕೆ.ಜಿ. ಸಿಪ್ಪೆಗೋಟು ಅಡಕೆ ಕಳವಾಗಿದೆ. ರಮೇಶ್ ಅವರು ಮನೆ ಬಳಿಕ ಅಡಕೆಯನ್ನು ಒಣಗಿಸಲು ಹಾಕಿದ್ದರು. ರಾತ್ರಿ 11 ಗಂಟೆಗೆ ಅಡಕೆಯನ್ನು ಪರಿಶೀಲಿಸಿ ಬಂದಿದ್ದರು. ಬೆಳಗ್ಗೆ 6 ಗಂಟೆಗೆ ಎದ್ದು ನೋಡಿದಾಗ, ಸುಮಾರು 250 ಕೆ.ಜಿ.ಯಷ್ಟು ಅಡಕೆ ಕಳ್ಳತನವಾಗಿತ್ತು. ಇದರ ಮೌಲ್ಯ … Read more

ಜೂಜಾಟದಲ್ಲಿ ತೊಡಗಿದ್ದವರ ವಿರುದ್ಧ ಆನವಟ್ಟಿ ಠಾಣೆಯಲ್ಲಿ ಎರಡು ಪ್ರತ್ಯೇಕ ಕೇಸ್

soraba anavatti graphics

SHIVAMOGGA LIVE NEWS | 1 ಮಾರ್ಚ್ 2022 ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಜೂಜಾಟ ಆಡುತ್ತಿದ್ದವರ ವಿರುದ್ಧ, ಸೊರಬ ತಾಲೂಕು ಆನವಟ್ಟಿ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದೆ. ಕೇಸ್ 1 : ಚಿಕ್ಕ ಹಿಡಗೋಡು ಗ್ರಾಮ ಇಲ್ಲಿನ ಆರೊಟ್ಟಿ ಕೆರೆ ಬಳಿ ಸುಮಾರು 8 ಮಂದಿ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದರು. ಖಚಿತ ಮಾಹಿತಿ ಮೇರೆಗೆ ಪರಿಶೀಲನೆ ನಡೆಸಿದ ಪೊಲೀಸ್ ಸಿಬ್ಬಂದಿ, ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಕೇಸ್ 2 : ಬಿಳಗಲಿ ಗ್ರಾಮ ರಸ್ತೆ ಪಕ್ಕದ ಮರವೊಂದರ … Read more

ಸೇತುವೆ ಕಟ್ಟೆಗೆ ಲಾರಿ ಡಿಕ್ಕಿ, ಹಿಂಬದಿ ಇದ್ದ ಅಕೇಶಿಯಾ ಪೋಲ್ಸ್ ಬಿದ್ದು ವೈದ್ಯ ಸೇರಿ ಇಬ್ಬರಿಗೆ ಗಾಯ

Sagara Rural Police Station

SHIVAMOGGA LIVE NEWS | 1 ಮಾರ್ಚ್ 2022 ಲಾರಿಯೊಂದು ಸೇತುವೆಗೆ ಡಿಕ್ಕಿ ಹೊಡೆದು ಹಿಂಬದಿಯಲ್ಲಿದ್ದ ಅಕೇಶಿಯಾ ಪೋಲ್’ಗಳು ಬಿದ್ದು ಆಯುರ್ವೇದ ವೈದ್ಯ ಸೇರಿದಂತೆ ಇಬ್ಬರು ಗಾಯಗೊಂಡಿದ್ದಾರೆ. ಸಾಗರ ತಾಲೂಕು ಹರುಡಿಕೆ ಗ್ರಾಮದ ಬಳಿ ಘಟನೆ ಸಂಭವಿಸಿದೆ. ಆಯುರ್ವೇದ ವೈದ್ಯ ಬಿವಾಶ್ ಕುಮಾರ್ ಡಾಲಿ ಅವರಿಗೆ ಬಲಗೈ ಮೂಳೆ ಮುರಿದಿದೆ. ವೈದ್ಯರೊಂದಿಗೆ ಬೈಕಿನಲ್ಲಿ ತೆರಳುತ್ತಿದ್ದ ಗಣೇಶ್ ಎಂಬುವವರ ಹೊಟ್ಟೆ, ಸೊಂಟಕ್ಕೆ ಗಾಯವಾಗಿದೆ. ಹೇಗಾಯ್ತು ಘಟನೆ? ರೋಗಿಯೊಬ್ಬರಿಗೆ ಚಿಕಿತ್ಸೆ ನೀಡಲು ಆಯುರ್ವೇದ ವೈದ್ಯ ಬಿವಾಶ್ ಕುಮಾರ್ ಡಾಲಿ ಅವರು … Read more

ಕಣದಲ್ಲಿ ಒಣಗಿಸಲು ಹಾಕಿದ್ದ ಸಿಪ್ಪೆಗೋಟು ಅಡಕೆ ರಾತ್ರೋರಾತ್ರಿ ನಾಪತ್ತೆ

Areca-Nuts-General-Image

SHIVAMOGGA LIVE NEWS | 1 ಮಾರ್ಚ್ 2022 ಮನೆಯ ಕಣದಲ್ಲಿ ಒಣಗಿಸಲು ಹಾಕಿದ್ದ ಅಡಕೆ ರಾತ್ರೋರಾತ್ರಿ ನಾಪತ್ತೆ ಆಗಿದೆ. 1.50 ಲಕ್ಷ ಮೌಲ್ಯದ ಅಡಕೆ ಕಳ್ಳತನವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಸಾಗರ ತಾಲೂಕು ಯಲಗಳಲೆ ಗ್ರಾಮದ ನಾಗರಾಜ ಎಂಬುವವರಿಗೆ ಸೇರಿದ ಅಡಕೆ ಕಳ್ಳತನವಾಗಿದೆ. ತಮ್ಮ ತೋಟದಲ್ಲಿ ಬೆಳೆದ ಸಿಪ್ಪೆಗೋಟು ಅಡಕೆಯನ್ನು ಅವರು ಮನೆ ಹಿಂಭಾಗದ ಕಣದಲ್ಲಿ ಒಣಗಿಸಿದ್ದರು. ಕಳೆದ ಶುಕ್ರವಾರ ಸಂಜೆ ಒಣಗಿಸಿದ್ದ ಅಡಕೆಯನ್ನ ನಾಗರಾಜ ಅವರು ನೋಡಿಕೊಂಡು ಬಂದಿದ್ದರು. ಅದನ್ನು ಸರಿ ಮಾಡಿಟ್ಟು ಬಂದಿದ್ದರು. … Read more

ಕರ್ನಾಟಕ ಸಂಘ ಬಳಿ ಬ್ರಾಂಚ್ ಮ್ಯಾನೇಜರ್ ಬ್ಯಾಗ್ ಲಪಟಾಯಿಸಿದ ಕಳ್ಳರು

crime name image

SHIVAMOGGA LIVE NEWS | 1 ಮಾರ್ಚ್ 2022 ಫೈನಾನ್ಸ್ ಸಂಸ್ಥೆಯೊಂದರ ಬ್ರಾಂಚ್ ಮ್ಯಾನೇಜರ್ ಒಬ್ಬರ ಲ್ಯಾಪ್ ಟಾಪ್ ಬ್ಯಾಗ್ ಮತ್ತು ದಾಖಲೆಗಳ ಕಳ್ಳತನವಾಗಿದೆ. ದಾವಣಗೆರೆಯಿಂದ ಶಿವಮೊಗ್ಗಕ್ಕೆ ಬರುವ ಕೆ.ಎಸ್.ಆರ್.ಟಿ.ಸಿ ಬಸ್ಸಿನಲ್ಲಿ ಘಟನೆ ಸಂಭವಿಸಿದೆ. ವಿಶ್ವನಾಥ್ ಎಂಬುವವರು ತಮ್ಮ ಲ್ಯಾಪ್ ಟಾಪ್, ಸೇರಿದಂತೆ ಪ್ರಮುಖ ದಾಖಲೆಗಳನ್ನು ಕಳೆದುಕೊಂಡಿದ್ದಾರೆ. ಹೇಗಾಯ್ತು ಘಟನೆ? ವಿಶ್ವನಾಥ್ ಅವರು ಡೆಪ್ಯುಟೇಷನ್ ಮೇಲೆ ಫೈನಾನ್ಸ್ ಸಂಸ್ಥೆಯ ಶಿವಮೊಗ್ಗ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸಲು ಬರುತ್ತಿದ್ದರು. ದಾವಣಗೆರೆಯಿಂದ ಕೆ.ಎಸ್.ಆರ್.ಟಿ.ಸಿ ಬಸ್ ಮೂಲಕ ಶಿವಮೊಗ್ಗಕ್ಕೆ ಆಗಮಿಸುತ್ತಿದ್ದರು. ತಾವು ಕುಳಿತಿದ್ದ ಸೀಟಿನ … Read more

ಶಿವಮೊಗ್ಗದ ಖಾಸಗಿ ಬಸ್ ನಿಲ್ದಾಣದ ಬಳಿ ಯುವಕ ಅರೆಸ್ಟ್

Arrest News Graphics

SHIVAMOGGA LIVE NEWS | 1 ಮಾರ್ಚ್ 2022 ಶಿವಮೊಗ್ಗದ ಖಾಸಗಿ ಬಸ್ ನಿಲ್ದಾಣದ ಬಳಿ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದ ಯುವಕನೊಬ್ಬನ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಗಾಂಜಾ ಸೇವನೆ ಮಾಡಿರುವುದು ದೃಢವಾಗಿದ್ದು, ಆತನನ್ನು ಬಂಧಿಸಿದ್ದಾರೆ. ಜೆ.ಸಿ.ನಗರ ನಿವಾಸಿ ಅರ್ಬಾಜ್ ಖಾನ್ (21) ಬಂಧಿತ. ಪೊಲೀಸರು ಗಸ್ತು ತಿರುಗುತ್ತಿದ್ದ ಸಂದರ್ಭ ಖಾಸಗಿ ಬಸ್ ನಿಲ್ದಾಣದ ಬಳಿ ಅರ್ಬಾಜ್ ಖಾನ್ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದ. ವಿಚಾರಣೆ ನಡೆಸಿದಾಗ ಗಾಂಜಾ ಸೇವನೆ ಮಾಡಿರುವ ಅನುಮಾನ ಮೂಡಿದೆ. ಅರ್ಬಾಜ್ ಖಾನ್’ನನ್ನು ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ … Read more

ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗದ ರೈತರಿಗೆ ಶಿಮುಲ್’ನಿಂದ ಮಹಾಶಿವರಾತ್ರಿಯ ಗಿಫ್ಟ್

Shimoga-Milk-Union-President-Shripad-Rao-Press-Meet

SHIVAMOGGA LIVE NEWS | 28 ಫೆಬ್ರವರಿ 2022 ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಹಾಲು ಒಕ್ಕೂಟವು ರೈತರಿಗೆ ಮಹಾಶಿವರಾತ್ರಿ ಹಬ್ಬದ ಕೊಡುಗೆ ನೀಡಿದೆ. ಮಾರ್ಚ್ 1 ರಿಂದ ಒಕ್ಕೂಟದ ವ್ಯಾಪ್ತಿಯ ಜಿಲ್ಲೆಗಳಾದ ಶಿವಮೊಗ್ಗ ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ರೈತರಿಂದ ಖರೀದಿಸುವ ಹಾಲಿನ ದರವನ್ನು ಪ್ರತಿ ಲೀಟರ್’ಗೆ 2.50 ರೂ. ಹೆಚ್ಚಿಸಲಾಗಿದೆ. ಶಿಮುಲ್’ನಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಶಿಮುಲ್ ಅಧ್ಯಕ್ಷ ಶ್ರೀಪಾದರಾವ್ ತಿಳಿಸಿದರು ಅವರು, ಒಕ್ಕೂಟವು ತನ್ನ ಒಕ್ಕೂಟದ ಆರ್ಥಿಕ ಪರಿಸ್ಥಿತಿಯನ್ನು ಅವಲೋಕಿಸಿ ಕಾಲ ಕಾಲಕ್ಕೆ … Read more