ಕತ್ತಲಾದ್ಮೇಲೆ ಸಾಗರ ರಸ್ತೆಯಲ್ಲಿ ಓಡಾಡುವವರೆ ಎಚ್ಚರ, ಕಾರಣವೇನು?

Sagara-Road-Gadikoppa-Shimoga-city

SHIVAMOGGA LIVE NEWS | ROAD | 18 ಮೇ 2022 ಅಪಘಾತ 1 – 2021ರ ಜನವರಿ 2ರಂದು ಹರ್ಷ ಫರ್ನ್ ಹೊಟೇಲ್’ನಲ್ಲಿ ಬಿಜೆಪಿ ಕಾರ್ಯಕಾರಣಿ ಸಭೆ ನಡೆಯಿತು. ಬಂದೋಬಸ್ತ್ ಡ್ಯೂಟಿ ಮುಗಿಸಿ ರಸ್ತೆ (ROAD) ದಾಟುತ್ತಿದ್ದ ಪೊಲೀಸ್ ಸಿಬ್ಬಂದಿಗೆ ಕಾರು ಡಿಕ್ಕಿ ಹೊಡೆದಿದೆ. ಪೊಲೀಸ್ ಸಿಬ್ಬಂದಿ ಜುಲ್ಫಿಕರ್ ಸ್ಥಳದಲ್ಲೆ ಸಾವನ್ನಪ್ಪಿದರು. ಇದನ್ನೂ ಓದಿ – ಕಾರು ಡಿಕ್ಕಿ ಹೊಡೆದು ಮೃತಪಟ್ಟ ಪೊಲೀಸ್ ಸಿಬ್ಬಂದಿಯ ಅಂತಿಮ ದರ್ಶನ, ಹಿರಿಯ ಅಧಿಕಾರಿಗಳಿಂದ ಗೌರವ ಅಪಘಾತ 2 – 2022ರ … Read more

ಬೆಳಗ್ಗೆಯಿಂದ ಮಳೆ, ಶಿವಮೊಗ್ಗ ಸಿಟಿಯಲ್ಲಿ ಹೇಗಿತ್ತು ಪರಿಸ್ಥಿತಿ? ಇಲ್ಲಿದೆ ಫೋಟೊ ನ್ಯೂಸ್

Shimoga-City-Rain-Gopi-Circle

SHIVAMOGGA LIVE NEWS | RAIN PHOTO | 18 ಮೇ 2022 ಶಿವಮೊಗ್ಗ ನಗರದಲ್ಲಿ ಬೆಳಗ್ಗೆಯಿಂದ ನಿರಂತರ ಮಳೆಯಾಗುತಿತ್ತು. ಮಧ್ಯಾಹ್ನದ ನಂತರ ಮಳೆ ಬಿಡುವು ನೀಡಿತ್ತು. ಮಳೆ ಸುರಿಯುತ್ತಿದ್ದ ಅವಧಿಯಲ್ಲಿ ಶಿವಮೊಗ್ಗದಲ್ಲಿ ಹೇಗಿತ್ತು ಪರಿಸ್ಥಿತಿ? ಅದರ ಫೋಟೊ ನ್ಯೂಸ್ ಇಲ್ಲಿದೆ. ಇದನ್ನೂ ಓದಿ | ನಿರಂತರ ಮಳೆಗೆ ತಂಪಾಯ್ತು ಶಿವಮೊಗ್ಗ, ಬೇಸಿಗೆಯಲ್ಲೂ ವಾಡಿಕೆಗಿಂತ ಹೆಚ್ಚು ವರ್ಷಧಾರೆ ಇದನ್ನೂ ಓದಿ – ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ … Read more

ನಿರಂತರ ಮಳೆಗೆ ತಂಪಾಯ್ತು ಶಿವಮೊಗ್ಗ, ಬೇಸಿಗೆಯಲ್ಲೂ ವಾಡಿಕೆಗಿಂತ ಹೆಚ್ಚು ವರ್ಷಧಾರೆ

Rain-in-Shimoga-City-Gopi-Circle-Photos

SHIVAMOGGA LIVE NEWS | RAINFALL | 18 ಮೇ 2022 ಸುಳಿಗಾಳಿಯ ಪರಿಣಾಮ ಶಿವಮೊಗ್ಗ ಜಿಲ್ಲೆಯಾದ್ಯಂತ ನಿರಂತರ ಮಳೆಯಾಗುತ್ತಿದೆ. ಕಳೆದ ಮೂರು ದಿನದಿಂದ ಜಿಲ್ಲೆಯ ವಿವಿಧೆಡೆ ಮಳೆ (RAINFALL) ಅಬ್ಬರಿಸುತ್ತಿದೆ. ಇವತ್ತು ಬೆಳಗ್ಗೆಯಿಂದ ನಿರಂತರ ಮಳೆ ಸುರಿಯುತ್ತಿದೆ. ಕಳೆದ 24 ಗಂಟೆ ಅವಧಿಯಲ್ಲಿ ಶಿವಮೊಗ್ಗ ಜಿಲ್ಲೆಯಾದ್ಯಂತ 8.39 ಮಿ.ಮೀ ಮಳೆಯಾಗಿದೆ. ಶಿವಮೊಗ್ಗ ತಾಲೂಕಿನಲ್ಲಿ 7.40 ಮಿ.ಮೀ, ಭದ್ರಾವತಿಯಲ್ಲಿ 14.60 ಮಿ.ಮೀ, ತೀರ್ಥಹಳ್ಳಿಯಲ್ಲಿ 9.20 ಮಿ.ಮೀ, ಸಾಗರದಲ್ಲಿ 1.20 ಮಿ.ಮೀ, ಶಿಕಾರಿಪುರದಲ್ಲಿ 4 ಮಿ.ಮೀ, ಸೊರಬದಲ್ಲಿ 2.30 … Read more

ಹೊಟ್ಟೆ ನೋವು ಅಂತಾ ಬಂದ ಮಹಿಳೆಯ ಹೊಟ್ಟೆಯಲ್ಲಿತ್ತು ಬೃಹತ್ ಗಡ್ಡೆ

Gadde-in-Woman-stomach-in-Sagara

SHIVAMOGGA LIVE NEWS | OPERATION | 18 ಮೇ 2022 ಹೊಟ್ಟೆನೋವು ಎಂದು ಬಂದ ಮಹಿಳೆಗೆ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು ಹೊಟ್ಟೆಯಲ್ಲಿದ್ದ 7 ಕೆ.ಜಿ.ಗಡ್ಡೆಯನ್ನು ಹೊರತೆಗೆದಿದ್ದಾರೆ. ಸಾಗರದ ನೆಹರೂ ನಗರದ ಸೌಮ್ಯಾ ಡಿಸೋಜಾ ಅವರು ತೀವ್ರ ಹೊಟ್ಟೆನೋವಿನಿಂದ ಬಳಲುತ್ತಿದ್ದರು. ಮೇ 10ರಂದ ತಪಾಸಣೆಗೆ ಬಂದಾಗ ಹೊಟ್ಟೆಯಲ್ಲಿ ಗಡ್ಡೆ ಇರುವುದು ಗೊತ್ತಾಗಿದೆ. ಸೌಮ್ಯಾ ಡಿಸೋಜಾ ಅವರಿಗೆ ಸಾಗರದ ತಾಯಿ-ಮಗು ಅಸ್ಪತ್ರೆಯ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ 7 ಕೆ.ಜೆ ಗಡ್ಡೆಯನ್ನು ಹೊರತೆಗೆದಿದ್ದಾರೆ. ಸ್ತ್ರೀರೋಗ ತಜ್ಞ ಡಾ.ನಾಗೇಂದ್ರಪ್ಪ, ಡಾ.ಸುಚಿತ್ರಾ, ಡಾ.ಸುಷ್ಮಾ, … Read more

ವಿಚಾರಣೆಗೆ ಕರೆತಂದಿದ್ದ ವ್ಯಕ್ತಿ ಪೊಲೀಸ್ ಠಾಣೆಯಿಂದ ಎಸ್ಕೇಪ್

crime name image

SHIVAMOGGA LIVE NEWS | STATION | 18 ಮೇ 2022 ಟ್ರ್ಯಾಕ್ಟರ್ ಮತ್ತು ಟ್ರೇಲರ್ ಕಳ್ಳತನ ಪ್ರಕರಣದ ವಿಚಾರಣೆಗೆ ಕರೆತಂದಿದ್ದ ವ್ಯಕ್ತಿಯೊಬ್ಬ ಪೊಲೀಸ್ ಠಾಣೆಯಿಂದ ಪರಾರಿಯಾಗಿದ್ದಾನೆ. ಶೌಚಕ್ಕೆ ತೆರಳುವುದಾಗಿ ತಿಳಿಸಿ ಆತ ಠಾಣೆಯಿಂದ (STATION) ಎಸ್ಕೇಪ್ ಆಗಿದ್ದಾನೆ. ರಿಪ್ಪನ್ ಪೇಟೆ (RIPPONPETE) ಪೊಲೀಸ್ ಠಾಣೆಯಲ್ಲಿ ಘಟನೆ ಸಂಭವಿಸಿದೆ. ಚೆಂದಾಳದಿಂಬದ ಪ್ರತಾಪ್ ಎಂಬಾತ ಠಾಣೆಯಿಂದ ಪರಾರಿಯಾದಾತ. ಏನಿದು ಘಟನೆ? ಮೇ 13ರ ರಾತ್ರಿ ಸಾಗರ ರಸ್ತೆಯ ಭಗತ್ ಸಿಂಗ್ ಬಡಾವಣೆಯ ವೆಂಕಪ್ಪ ಶೆಟ್ಟಿ ಎಂಬುವವರ ಮನೆ ಶೆಡ್’ನಲ್ಲಿ … Read more

ಸಾಗರ ಗಣಪತಿ ಕೆರೆಯಲ್ಲಿ ಮೃತದೇಹ, ಯುವತಿ ಗುರುತು ಪತ್ತೆ

Sagara Police Station Building

SHIVAMOGGA LIVE NEWS | DEAD | 17 ಮೇ 2022 ಸಾಗರದ (SAGARA) ಗಣಪತಿ ಕೆರೆಯಲ್ಲಿ ಮಂಗಳವಾರ ಬೆಳಗ್ಗೆ ಮೃತದೇಹ (DEAD) ಪತ್ತೆಯಾಗಿತ್ತು. ಮೃತ ಯುವತಿಯ ಗುರುತು ಪತ್ತೆಯಾಗಿದೆ. ಸಾಗರ ಜಂಬಗಾರು ನಿವಾಸಿ ರಕ್ಷಿತಾ (16) ಎಂದು ಗುರುತಿಸಲಾಗಿದೆ. ಸಾಗರದ ಖಾಸಗಿ ಶಾಲೆಯಲ್ಲಿ ರಕ್ಷಿತಾ ಎಸ್ಸೆಸ್ಸೆಲ್ಸಿ ಓದುತ್ತಿದ್ದಳು. ಸೋಮವಾರ ಶಾಲೆಗೆ ಬಂದಿದ್ದ ರಕ್ಷಿತಾ ಮನೆ ಹಿಂತಿರುಗಿರಲಿಲ್ಲ. ಎಲ್ಲೆಡೆ ಹುಡುಕಾಡಿದ ಪೋಷಕರು ರಾತ್ರಿ ಸಾಗರ ನಗರ ಠಾಣೆಗೆ ದೂರು ನೀಡಿದ್ದರು. ಮಂಗಳವಾರ ಬೆಳಗ್ಗೆ ಗಣಪತಿ ಕೆರೆಯಲ್ಲಿ ಮೃತದೇಹ … Read more

ನಡುರಾತ್ರಿ ಮನೆಯೊಳಗೆ ನುಗ್ಗಿದ ಅಪರಿಚಿತ, ಯಜಮಾನನ ಮುಖಕ್ಕೆ ಬ್ಲೇಡ್’ನಿಂದ ಇರಿದ

theft case general image

SHIVAMOGGA LIVE NEWS | BLADE | 17 ಮೇ 2022 ಮನೆಯೊಳಗೆ ಮಲಗಿದ್ದ ವ್ಯಕ್ತಿಯೊಬ್ಬರ ಕೆನ್ನೆ, ಹಣೆ, ಕುತ್ತಿಗೆಗೆ ಅಪರಿಚಿತನೊಬ್ಬ ಬ್ಲೇಡ್’ನಿಂದ (BLADE) ಇರಿದು ಪರಾರಿಯಾಗಿದ್ದಾನೆ. ಗಾಯಗೊಂಡಿದ್ದ ವ್ಯಕ್ತಿಯನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಭದ್ರಾವತಿ (BHADRAVATHI) ತಾಲೂಕು ರಾಮನಕೊಪ್ಪ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಯಲವಟ್ಟಿ ಗ್ರಾಮದ ಕುಮಾರನಾಯ್ಕ ಗಾಯಾಳು ಹೇಗಾಯ್ತು ಘಟನೆ? ಯಲವಟ್ಟಿಯ ಕುಮಾರನಾಯ್ಕ ರಾಮನಕೊಪ್ಪದಲ್ಲಿರುವ ತನ್ನ ಹೆಂಡತಿ ಮನೆಯಲ್ಲಿ ವಾಸವಿದ್ದ. ಭಾನುವಾರ ರಾತ್ರಿ 1.30ರ ಹೊತ್ತಿಗೆ ಅಪರಿಚಿತನೊಬ್ಬ ಮನೆಯೊಳಗೆ ಪ್ರವೇಶ ಮಾಡಿದ್ದಾನೆ. … Read more

ಆಗುಂಬೆಯಲ್ಲಿ ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ, ಗುರುತು ಪತ್ತೆಗೆ ಪೊಲೀಸ್ ಪ್ರಕಟಣೆ

farmer suicide poison

SHIVAMOGGA LIVE NEWS | SUICIDE | 17 ಮೇ 2022 ಆಗುಂಬೆಯಲ್ಲಿ ವ್ಯಕ್ತಿಯೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರ ಗುರುತು ಪತ್ತೆಯಾಗದ ಹಿನ್ನೆಲೆ ಪೊಲೀಸರು ಪ್ರಕಟಣೆ ಹೊರಡಿಸಿದ್ದಾರೆ. ಇದನ್ನೂ ಓದಿ – ಹಾಸ್ಟೆಲ್ ಕೊಠಡಿಯಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿ ನೇಣಿಗೆ ಶರಣು ಆಗುಂಬೆ ಪಟ್ಟಣದ ಮೊಬೈಲ್ ಟವರ್ ಬಳಿ ವ್ಯಕ್ತಿಯೊಬ್ಬ ವಿಷ ಸೇವಿಸಿ ಒದ್ದಾಡುತ್ತಿದ್ದರು. ಕೂಡಲೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದೆ ಚಿಕಿತ್ಸೆಗೆ ಸ್ಪಂದಿಸದೆ ವ್ಯಕ್ತಿ ಮೃತಪಟ್ಟಿದ್ದಾರೆ. ಮೃತರಿಗೆ ಸುಮಾರು 60 … Read more

ಭದ್ರಾವತಿಯಲ್ಲಿ ಲಕ್ಷ್ಮೀ ನರಸಿಂಹಸ್ವಾಮಿ ವೈಭವದ ಬ್ರಹ್ಮರಥೋತ್ಸವ

Bhadravathi-Lakshmi-Narasimha-Swamy-Ratotsava

SHIVAMOGGA LIVE NEWS | TEMPLE | 17 ಮೇ 2022 ಭದ್ರಾವತಿಯ ಪುರಾಣ ಪ್ರಸಿದ್ಧ ಶ್ರೀ ರಂಗನಾಥಸ್ವಾಮಿ ಬ್ರಹ್ಮರಥೋತ್ಸವ ವೈಭವದಿಂದ ನಡೆಯಿತು. ದೊಡ್ಡ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು, ರಥೋತ್ಸವವನ್ನು ಕಣ್ತುಂಬಿಕೊಂಡರು. ಹಳೇನಗರದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವರ ಬ್ರಹ್ಮರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು. ಸೋಮವಾರ ಮಧ್ಯಾಹ್ನ 12 ಗಂಟೆಗೆ ದೇವಸ್ಥಾನದ ಎದುರು ಹೂವಿನಿಂದ ಅಲಂಕರಿಸಿದ ರಥದಲ್ಲಿ ಭೂದೇವಿ ಶ್ರೀದೇವಿ ಸಹಿತನಾದ ಶ್ರೀನಿವಾಸಸ್ವಾಮಿಯ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜಾ ಕಾರ್ಯಗಳನ್ನು ನೆರವೇರಿಸಲಾಯಿತು. ಇದನ್ನೂ ಓದಿ – ಶಿವಮೊಗ್ಗ … Read more

ಶಿವಮೊಗ್ಗ ಹೊಳೆ ಬಸ್ ಸ್ಟಾಪ್’ನಲ್ಲಿ ಅನುಮಾನಾಸ್ಪದ ವರ್ತನೆ, ಆಟೋ ಚಾಲಕ ಅರೆಸ್ಟ್, ಕಾರಣವೇನು?

Arrest News Graphics

SHIVAMOGGA LIVE NEWS | GANJA | 17 ಮೇ 2022 ಶಿವಮೊಗ್ಗದ ಹೊಳೆ ಬಸ್ ಸ್ಟಾಪ್ ಬಳಿ ಅಮಲಿನಲ್ಲಿರುವ ವ್ಯಕ್ತಿಯೊಬ್ಬನನ್ನು ಪೊಲೀಸರು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ. ಗಾಂಜಾ ಸೇವನೆ ಮಾಡಿರುವುದು ದೃಢವಾದ ಹಿನ್ನೆಲೆ ಆತನನ್ನು ಬಂಧಿಸಿ, ಪ್ರಕರಣ ದಾಖಲು ಮಾಡಲಾಗಿದೆ. ಇದನ್ನೂ ಓದಿ – ಬಸ್ ಹತ್ತುವಾಗ ಹೀಗೂ ನಡೆಯುತ್ತೆ ಕಳ್ಳತನ, ಶಿವಮೊಗ್ಗದಲ್ಲಿ ಮಹಿಳೆಯಿಂದ ದೂರು ದಾಖಲು ಆಟೋ ಚಾಲಕ ಪ್ರಕಾಶ್ ಕುಮಾರ್ ಬಂಧಿತ ಆರೋಪಿ. ಭಾನುವಾರ ಮಧ್ಯಾಹ್ನ ಪ್ರಕಾಶ್ ಕುಮಾರ್ ಶಿವಮೊಗ್ಗದ ಹೊಳೆ … Read more