ಆನಂದಪುರದಲ್ಲಿ ಕೇರಳದ ವ್ಯಕ್ತಿಯ ತಲೆಗೆ ಬಿಯರ್ ಬಾಟಲಿಯಿಂದ ಹೊಡೆದು ಹಲ್ಲೆ

Anandapura Sagara Graphics

SHIVAMOGGA LIVE NEWS | ANANDAPURA | 19 ಏಪ್ರಿಲ್ 2022 ಬಾರ್ ಒಂದರಲ್ಲಿ ಕ್ಷುಲಕ ವಿಚಾರಕ್ಕೆ ಗಲಾಟೆಯಾಗಿ ವ್ಯಕ್ತಿಯೊಬ್ಬನ ತಲೆಗೆ ಬಿಯರ್ ಬಾಟಲಿಯಿಂದ ಹೊಡೆಯಲಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿಯನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕೇರಳದ ಜಿಸ್ ಎಂಬಾತನ ಮೇಲೆ ಹಲ್ಲೆಯಾಗಿದೆ. ಸಾಗರ ತಾಲೂಕು ಆನಂದಪುರದ ಬಾರ್ ಒಂದರಲ್ಲಿ ಘಟನೆ ಸಂಭವಿಸಿದೆ. ರಬ್ಬರ್ ಟಾಪಿಂಗ್ ಕೆಲಸ ಮಾಡುತ್ತಿದ್ದ ಜಿಸ್ ಎಂಬಾತ ಆನಂದಪುರದ ಬಾರ್ ಒಂದಕ್ಕೆ ಹೋಗಿದ್ದಾನೆ. ಜಿಸ್’ಗೆ ಕನ್ನಡ ಭಾಷೆ ಬರುವುದಿಲ್ಲ. ಬಾರ್’ನಲ್ಲಿ ಯಾರೊಂದಿಗೋ … Read more

ಬಸ್ಸಿನಲ್ಲಿ ಯುವತಿಗೆ ಪೀಡಿಸುತ್ತಿದ್ದವನ ವಿರುದ್ಧ ಕೇಸ್ ದಾಖಲು

crime name image

SHIVAMOGGA LIVE NEWS | CRIME | 19 ಏಪ್ರಿಲ್ 2022 ಬಸ್ಸಿನಲ್ಲಿ ಯುವತಿಯೊಬ್ಬಳನ್ನು ಪೀಡಿಸುತ್ತಿದ್ದವನ ವಿರುದ್ಧ ಪ್ರಕರಣ ದಾಖಲಾಗಿದೆ. ಯುವತಿಯೊಬ್ಬಳನ್ನು ಹಿಂಬಾಲಿಸಿ ಬಂದು ಬಸ್ಸಿನಲ್ಲಿ ಪೀಡಿಸುತ್ತಿದ್ದ ಆರೋಪ ಸಂಬಂಧ ದೂರು ದಾಖಲಾಗಿತ್ತು. ಪ್ರವೀಣ ಎಂಬಾತನ ವಿರುದ್ಧ ಯುವತಿಯೊಬ್ಬಳು ದೂರು ನೀಡಿದ್ದಾಳೆ. ಯುವತಿ ಕಚೇರಿ ಮುಗಿಸಿ ಬರುವಾಗ ಕಾದು ನಿಂತು, ಆಕೆ ಹತ್ತಿದ ಬಸ್ಸಿಗೆ ಹತ್ತಿ ಯುವಕ ಪೀಡಿಸುತ್ತಿದ್ದ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಮಾನಸಿಕ ಹಿಂಸೆ ತಾಳಲಾರದೆ ಯುವತಿಯು ಬಸ್ ಕಂಡಕ್ಟರ್ ಮತ್ತೆ ಡ್ರೈವರ್’ಗೆ ತಿಳಿಸಿದ್ದಾಳೆ. ಅವರು ಕೂಡ … Read more

ಲಕ್ಷಾಂತರ ಮೌಲ್ಯದ ತಿಮಿಂಗಿಲದ ವಾಂತಿ ಸಾಗಿಸುತ್ತಿದ್ದ ಮೂವರ ಮೇಲೆ ಸಾಗರ ಪೊಲೀಸರ ದಾಳಿ

Sagara Police Station Building

SHIVAMOGGA LIVE NEWS | Ambergris  | 12 ಏಪ್ರಿಲ್ 2022 ಬೆಲೆಬಾಳುವ ತಿಮಿಂಗಿಲ ವಾಂತಿ ಮಾರಾಟಕ್ಕೆ ಯತ್ನಿಸುತ್ತಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಭಾನುವಾರ ರಾತ್ರಿ ಕಾರ್ಯಾಚರಣೆ ನಡೆಸಿದ ಪೊಲೀಸರು ಮಾಲು ಸಹಿತ ಆರೋಪಿಗಳನ್ನು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಕೆಳದಿ ರಸ್ತೆಯ ರಾಮಪ್ಪ (40), ಕಾರ್ಗಲ್’ನ ಸಂದೀಪ್ ಜಾನ್ (49), ಸಾಗರ ನೆಹರೂ ನಗರದ ರೋಹಿತ್ (42) ಬಂಧಿತರು. ಸಾಗರ ರೈಲ್ವೆ ನಿಲ್ದಾಣದ ಬಳಿ ಕಾರ್ಯಾಚರಣೆ ನಡೆಸಿ ತಿಮಿಂಗಿಲ ವಾಂತಿ (ಅಂಬರ್ಗ್ರೀಸ್) ವಶಕ್ಕೆ ಪಡೆಯಲಾಗಿದೆ. ಅರ್ಧ … Read more

ಶರಾವತಿ ಹಿನ್ನೀರಿನಲ್ಲಿ ತೆಪ್ಪ ಮಗುಚಿ ವ್ಯಕ್ತಿ ಸಾವು

sagara graphics

SHIVAMOGGA LIVE NEWS | INSTAGRAM | 9 ಏಪ್ರಿಲ್ 2022 ತೆಪ್ಪ ಮಗುಚಿ ಶರಾವತಿ ಹಿನ್ನೀರಿನಲ್ಲಿ ಮುಳುಗಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಮೃತರನ್ನು ಕಣಿಕೆ ಗ್ರಾಮದ ಯಲ್ಲಪ್ಪ (55) ಎಂದು ಗುರುತಿಸಲಾಗಿದೆ. ಸಿಗಂದೂರು ಸಮೀಪದ ಹೊಳೆಬಾಗಿಲು ಸಮೀಪದ ಕಣಿಕೆ ಗ್ರಾಮದ ಬಳಿ ಶರಾವತಿ ಹಿನ್ನೀರಿನಲ್ಲಿ ಯಲ್ಲಪ್ಪ ಮೀನು ಹಿಡಿಯಲು ತೆರಳಿದ್ದರು. ಮೀನು ಹಿಡಿಯುತ್ತಿದ್ದಾಗ ತೆಪ್ಪ ಮಗುಚಿಕೊಂಡು, ಯಲ್ಲಪ್ಪ ಮುಳುಗಿ ಸಾವನ್ನಪ್ಪಿದ್ದಾರೆ. ಯಲ್ಲಪ್ಪ ಅವರಿಗಾಗಿ ಶೋಧ ಕಾರ್ಯ ನಡೆಸಲಾಯಿತು. ಶುಕ್ರವಾರ ಅವರ ಮೃತದೇಹ ತೇಲಿ ಬಂದಿದೆ. ಸಾಗರ ಗ್ರಾಮಾಂತರ … Read more

ಒಂದು ಬೈಕ್ ಕಳ್ಳತನ ಕೇಸ್ ಬೆನ್ನು ಹತ್ತಿದ ಪೊಲೀಸರಿಗೆ ಸಿಕ್ಕಿದ್ದು 22 ಬೈಕುಗಳು

Bike-Thieves-Arrest-in-Sagara

SHIVAMOGGA LIVE NEWS | 7 ಏಪ್ರಿಲ್ 2022 ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಒಂದರ ಕಳ್ಳತನ ಪ್ರಕರಣದ ತನಿಖೆ ನಡೆಸಿದ ಪೊಲೀಸರಿಗೆ ನಾಲ್ವರು ಕಳ್ಳರು, 22 ಬೈಕುಗಳು ಸಿಕ್ಕಿವೆ. ಹಲವು ಜಿಲ್ಲೆಗಳಲ್ಲಿ ಬೈಕ್ ಕಳವು ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಸಾಗರ ಪೊಲೀಸರು ಬಂಧಿಸಿ 22 ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಹಾವೇರಿಯ ಸುದೀಪ್ ಅಲಿಯಾಸ್ ಚೂಪಾ, ಅಜಯ್ ಅಲಿಯಾಸ್ ಅಜ್ಜಪ್ಪ, ಗಂಗಾಧರ್ ಅಲಿಯಾಸ್ ಸಂಜು ಅಲಿಯಾಸ್ ಡಿಜೆ ಅಲಿಯಾಸ್ ಗಂಗಾ ಬಂಧಿತರು. ಒಂದು ಬೈಕ್ ಕಳವು ಕೇಸ್ ಸಾಗರ … Read more

ಸಾಗರ ಚತುಷ್ಪಥ ರಸ್ತೆ ಕಾಮಗಾರಿಗೆ ಗಡುವು ನಿಗದಿ, ಮಂಜೂರಾದ ಹಣವೆಷ್ಟು? ಎಲ್ಲಿಂದ ಶುರುವಾಗುತ್ತೆ ರಸ್ತೆ?

Haratalu-Halappa-about-NH-Road-in-Sagara

SHIVAMOGGA LIVE NEWS | 5 ಏಪ್ರಿಲ್ 2022 ಮುಂದಿನ ಮಾರಿಕಾಂಬಾ ಜಾತ್ರೆ ವೇಳೆಗೆ ಚತುಷ್ಪಥ ರಸ್ತೆ ಲೋಕಾರ್ಪಣೆಗೊಳ್ಳಲಿದೆ ಎಂದು ಶಾಸಕ ಹರತಾಳು ಹಾಲಪ್ಪ ತಿಳಿಸಿದರು. ಪಟ್ಟಣದ ಬಿ.ಹೆಚ್.ರಸ್ತೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಕೈಗೊಳ್ಳಲಾಗಿರುವ ರಾಷ್ಟ್ರೀಯ ಹೆದ್ದಾರಿ 206 ಆಗಲೀಕರಣಕ್ಕೆ ಸಂಬಂಧಪಟ್ಟಂತೆ ಅಧಿಕಾರಿಗಳ ಜತೆ ಸ್ಥಳ ಪರಿಶೀಲನೆ ನಡೆಸಿ ಮಾತನಾಡಿ, ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರ ಕಾಳಜಿಯಿಂದ ಚತುಷ್ಪಥ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ ಎಂದರು. ಕಾಮಗಾರಿಗೆ 77 ಕೋಟಿ ರೂ. ಮಂಜೂರಾಗಿದೆ. ಆರಂಭದಲ್ಲಿ ತ್ಯಾಗರ್ತಿ ಕ್ರಾಸ್ನಿಂದ ಅಗಲೀಕರಣ … Read more

ಶಿಕಾರಿಪುರದಿಂದ ಬಂದವನ ಬೈಕ್ ತಪಾಸಣೆ ಮಾಡಿ ಪೊಲೀಸರಿಗೆ ಒಪ್ಪಿಸಿದ ಗೌತಮಪುರದ ಯುವಕರು

Anandapura Sagara Graphics

SHIVAMOGGA LIVE NEWS | 4 ಏಪ್ರಿಲ್ 2022 ಗೋಮಾಂಸ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಯುವಕರೆ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಸಾಗರ ತಾಲೂಕು ಆನಂದಪುರ ಸಮೀಪದ ಗೌತಮಪುರದಲ್ಲಿ ಘಟನೆ ಸಂಭವಿಸಿದೆ. ಶಿಕಾರಿಪುರದ ಹಬೀಬ್ (35) ಬಂಧಿತ. ಈತ ಬೈಕಿನಲ್ಲಿ ಗೋಮಾಂಸ ತಂದು ಮಾರಾಟ ಮಾಡುತ್ತಿರುವ ಖಚಿತ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಗೌತಮಪುರದ ಯುಕವರು ಭಾನುವಾರ ಹಬೀಬ್’ನನ್ನು ತಡೆದು ವಾಹನ ಪರಿಶೀಲಿಸಿದಾಗ ಗೋಮಾಂಸ ಪತ್ತೆಯಾಗಿದೆ. ಹಬೀಬ್’ನ ಬೈಕ್ ಸೈಡ್ ಬ್ಯಾಗಿನಲ್ಲಿ ಸುಮಾರು 6 ಕೆ.ಜಿಯಷ್ಟು ಗೋಮಾಂಸ ಪತ್ತೆಯಾಗಿದೆ. … Read more

ಸಾಗರದ ಗಣಪತಿ ಕೆರೆಗೆ ಹಾರಿ ವೈದ್ಯೆ ಆತ್ಮಹತ್ಯೆ

Dr-Sharmada-commits-suicide-in-Sagara.

SHIVAMOGGA LIVE NEWS | 29 ಮಾರ್ಚ್ 2022 ವೈದ್ಯೆಯೊಬ್ಬರು ಸಾಗರದ ಗಣಪತಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೃತ್ಯಕ್ಕೆ ನಿಖರ ಕಾರಣ ತಿಳಿದು ಬಂದಿದೆ. ಡಾ.ಶರ್ಮದಾ (36) ಅವರು ಕೆರೆಗೆ ಹಾರಿದವರು. ಸೋಮವಾರ ರಾತ್ರಿ ಘಟನೆ ಸಂಭವಿಸಿದೆ. ಗಣಪತಿ ಕೆರೆ ಬಳಿ ಬಂದ ಡಾ.ಶರ್ಮದಾ, ಸ್ಕೂಟಿ ನಿಲ್ಲಿಸಿ, ಚಪ್ಪಲಿಯನ್ನು ಕೆರೆ ದಂಡೆ ಬಿಟ್ಟು ಹಾರಿದ್ದಾರೆ ಎಂದು ತಿಳಿದು ಬಂದಿದೆ. ಡಾ.ಶರ್ಮದಾ ಅವರು ಕೆರೆಗೆ ಹಾರಿದ್ದನ್ನು ಗಮನಿಸಿದ ಸ್ಥಳೀಯರು ಅವರ ರಕ್ಷಣೆ ಮಾಡಿದ್ದಾರೆ. ಈ ಸಂದರ್ಭ ಅವರು … Read more

ಸಾಗರದಲ್ಲಿ ಗುಡುಗು ಸಹಿತ ಭಾರಿ ಮಳೆಗೆ ಧರೆಗುರುಳಿದ ಮರ

tree-fall-during-Rain-at-sagara.

SHIVAMOGGA LIVE NEWS | 28 ಮಾರ್ಚ್ 2022 ಸಾಗರದಲ್ಲಿ ಗುಡುಗು, ಸಿಡಿಲು ಸಹಿತ ಭಾರಿ ಮಳೆಯಾಗಿದೆ. ಕೆಲವು ಕಡೆ ಮರಗಳು ಧರೆಗುರುಳಿವೆ. ಭಾನುವಾರ ಸಾಗರದಲ್ಲಿ ಜೋರು ಗಾಳಿ, ಗುಡುಗು, ಸಿಡಿಲು ಸಹಿತ ಭಾರಿ ಮಳೆ ಸುರಿದಿದೆ. ಜೋರು ಮಳೆಯಿಂದಾಗಿ ಚರಂಡಿಗಳು ತುಂಬಿ ರಸ್ತೆಗಳ ಮೇಲೆ ನೀರು ಹರಿದು ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ಜೋಗ ರಸ್ತೆಯಲ್ಲಿ ಉರುಳಿದ ಮರ ಭಾರಿ ಗಾಳಿ, ಮಳೆಗೆ ಸಾಗರದ JOG ರಸ್ತೆಯಲ್ಲಿ ಮರ ಧೆರೆಗುರುಳಿತು. ವಾಹನ ಸಂಚಾರಕ್ಕೆ ಕೆಲ ಹೊತ್ತು ಅಡಚಣೆ ಉಂಟಾಯಿತು. … Read more

ಐಪಿಎಲ್ ಹವಾ | ಸಾಗರದಲ್ಲಿ RCB ಕಾರ್, ವಿಡಿಯೋ ವೈರಲ್, ಹೇಗಿದೆ ಕಾರು?

RCB-Car-in-Sagara-Sadguru-Santhosh

SHIVAMOGGA LIVE NEWS | 25 ಮಾರ್ಚ್ 2022 ಇಂಡಿಯನ್ ಪ್ರೀಮಿಯರ್ ಲೀಗ್ (IPL) ಪಂದ್ಯಾವಳಿಗೆ ಕ್ಷಣಗಣನೆ ಶುರುವಾಗಿದೆ. ಈ ಭಾರಿಯೂ ರಾಯಲ್ ಚಾಲೆಂಜರ್ಸ್ (RCB) ಕ್ರೇಜ್ ಜೋರಾಗಿದೆ. ಅಭಿಮಾನಿಯೊಬ್ಬರು RCBಗಾಗಿ ತಮ್ಮ ಕಾರಿಗೆ ಹೊಸ ರೂಪ ಕೊಟ್ಟಿದ್ದಾರೆ. ಸಾಗರದ ಸದ್ಗುರು ಸಂತೋಷ್ ಅವರು RCB ತಂಡದ ಅಪ್ಪಟ ಅಭಿಮಾನಿ. ಇದೆ ಕಾರಣಕ್ಕೆ ತಮ್ಮ ಫಿಯಟ್ ಕಾರಿಗೆ ಹೊಸ ಲುಕ್ ಕೊಟ್ಟಿದ್ದಾರೆ. ಈ ಕಾರು ಸಾಗರದಲ್ಲಿ ಜನರ ಗಮನ ಸೆಳೆಯುತ್ತಿದೆ. ಸೆಲ್ಫಿ, ಫೋಟೊಗಾಗಿ ಜನರು ಮುಗಿಬಿದ್ದಿದ್ದಾರೆ. 1980ರ … Read more