ರಸ್ತೆ ಪಕ್ಕ ನಿಂತುಕೊಂಡು ಮಾತಾಡುತ್ತಿದ್ದ ಸ್ನೇಹಿತರಿಗೆ ಬೈಕ್ ಡಿಕ್ಕಿ, ಒಬ್ಬ ಸಾವು
SHIVAMOGGA LIVE NEWS | BHADRAVATHI | 14 ಜೂನ್ 2022 ಬೈಕ್ ಡಿಕ್ಕಿ ಹೊಡೆದು ರಸ್ತೆ ಪಕ್ಕದಲ್ಲಿ ನಿಂತಿದ್ದ ವ್ಯಕ್ತಿಯೊಬ್ಬ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ಬೈಕ್ ಚಾಲಕನ ಅತಿ ವೇಗವಾಗಿ ಬೈಕ್ ಚಲಾಯಿಸಿದ್ದೆ ಅಪಘಾತಕ್ಕೆ ಕಾರಣ ಎಂದು ಆರೋಪಿಸಲಾಗಿದೆ. ACCIDENT ಅಂತರಗಂಗೆ ಕ್ಯಾಂಪ್’ನ ಸಂತೋಷ್ (35) ಮೃತ ದುರ್ದೈವಿ. ಮಂಜುನಾಥ್ ಎಂಬಾತ ಗಾಯಗೊಂಡಿದ್ದಾರೆ. ಅತಿ ವೇಗವಾಗಿ ಬೈಕ್ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದ ಭದ್ರಾವತಿ ಹೊಸಮನೆಯ ಮುರುಗೇಶ್ ಕೂಡ ಗಾಯಗೊಂಡಿದ್ದಾನೆ. ಹೇಗಾಯ್ತು ಆಪಘಾತ? … Read more