ಮದುವೆ ಮನೆಯಲ್ಲಿ ಫೋಟೊ ಕ್ಲಿಕ್ಕಿಸುತ್ತಿದ್ದ ಛಾಯಾಗ್ರಾಹಕನ ಮೇಲೆ ಹಲ್ಲೆ, ಕ್ಯಾಮರಾ ಪುಡಿ ಪುಡಿ

ಶಿವಮೊಗ್ಗ ಲೈವ್.ಕಾಂ | SHIMOGA NEWS | 12 ಸೆಪ್ಟೆಂಬರ್ 2021 ಮದುವೆ ಮನೆಯಲ್ಲಿ ಫೋಟೊ ತೆಗೆಯುತ್ತಿದ್ದ ಛಾಯಾಗ್ರಾಹಕನ ಮೇಲೆ ಹಲ್ಲೆ ನಡೆಸಿ, ಕ್ಯಾಮರಾವನ್ನು ಪುಡಿ ಮಾಡಲಾಗಿದೆ. ಈ ಸಂಬಂಧ ಶಿವಮೊಗ್ಗದ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗುಡ್ಡೇಕಲ್ ಬಾಲಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಸಮುದಾಯ ಭಾವನದಲ್ಲಿ ಘಟನೆ ಸಂಭವಿಸಿದೆ. ಸೋಮಿನಕೊಪ್ಪದ ಗಣೇಶ್ ಅವರು ಇಲ್ಲಿ ನಡೆಯುತ್ತಿದ್ದ ಮದುವೆಯೊಂದರ ಫೋಟೊ ಕ್ಲಿಕ್ಕಿಸುತ್ತಿದ್ದರು. ಈ ವೇಳೆ ದಾಳಿ ನಡೆಸಿ ಅವರ ಮೇಲೆ ಹಲ್ಲೆ ಮಾಡಿ, ಕ್ಯಾಮರಾವನ್ನು ಪುಡಿಗಟ್ಟಲಾಗಿದೆ. ಹಲ್ಲೆಗೆ … Read more

ಆಯನೂರಿನಲ್ಲಿ ಅಂಗಡಿ ಬಾಗಿಲು ಮುರಿದು ಹಣಕ್ಕಿಂತಲೂ ಹೆಚ್ಚಿನ ಮೊತ್ತದ ಗುಟ್ಕಾ, ಸಿಗರೇಟು ಕಳ್ಳತನ

Ayanuru General Image Board 1

ಶಿವಮೊಗ್ಗ ಲೈವ್.ಕಾಂ | AYANUR NEWS | 7 ಸೆಪ್ಟೆಂಬರ್ 2021 ಅಂಗಡಿಯೊಂದರ  ಬಾಗಿಲು ಮುರಿದು ಒಳ ನಗ್ಗಿದ ಕಳ್ಳರು ಹಣಕ್ಕಿಂತಲೂ ಹೆಚ್ಚಿನ ಮೊತ್ತದ ಗುಟ್ಕಾ, ಸಿಗರೇಟು ಕದ್ದು ಪರಾರಿಯಾಗಿದ್ದಾರೆ. ಈ ಸಂಬಂಧ ಕುಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆಯನೂರಿನ ಬಿ.ಹೆಚ್.ರಸ್ತೆಯಲ್ಲಿರುವ ಭರತ್ ರಾಜ್ ಅವರಿಗೆ ಸೇರಿದ ಸಿದ್ಧೇಶ್ವರ ಪ್ರಾವಿಜನ್ ಸ್ಟೋರ್’ನಲ್ಲಿ ಕಳ್ಳತನವಾಗಿದೆ. ಅಂಗಡಿಯ ರೋಲಿಂಗ್ ಶೆಟರ್ ಮುರಿದು ಖದೀಮರು ಕೈಚಳಕ ತೋರಿಸಿದ್ದಾರೆ. ಗುಟ್ಕಾ, ಸಿಗರೇಟ್ ಕಳವು ಖದೀಮರು ಅಂಗಡಿಯಲ್ಲಿ ಸುಮಾರು 5 ಸಾವಿರ ರೂ. ನಗದು … Read more

ಪಿಇಎಸ್ ಕಾಲೇಜು ಬಸ್ಸುಗಳಿಂದ ಡಿಸೇಲ್ ಕದ್ದವರು ಅರೆಸ್ಟ್, ಸಿಕ್ಕಿಬಿದ್ದಿದ್ದು ಹೇಗೆ?

040921 Diesel Theft Case Two Arrested in Vinobanagara

ಶಿವಮೊಗ್ಗ ಲೈವ್.ಕಾಂ |SHIMOGA NEWS | 4 ಸೆಪ್ಟೆಂಬರ್ 2021 ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕುಟುಂಬಕ್ಕೆ ಸೇರಿದ ಶಿಕ್ಷಣ ಸಂಸ್ಥೆ ಬಸ್ಸುಗಳಿಂದ ಡಿಸೇಲ್ ಕಳ್ಳತನ ಮಾಡಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಇವರಿಂದ ಡಿಸೇಲ್ ಮತ್ತು ಸರಕು ಸಾಗಣೆ ವಾಹನವೊಂದನ್ನು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ | ರಾತ್ರೋರಾತ್ರಿ ಸೋಮಿನಕೊಪ್ಪದಲ್ಲಿ ಶಿಕ್ಷಣ ಸಂಸ್ಥೆಯ ನಾಲ್ಕು ಬಸ್ಸುಗಳಿಂದ ಡಿಸೇಲ್ ಕಳ್ಳತನ ಟಿಪ್ಪುನಗರದ ಸಯ್ಯದ್ ಸಬ್ರೇದ್ ಮತ್ತು ಸಯ್ಯದ್ ಜಾಫರ್ ಬಂಧಿತರು. ಡಿಸೇಲ್ ಕಳ್ಳತನ ಮಾಡುತ್ತಿದ್ದ ಸಂಬಂಧ ಶಂಕೆ ಮೇಲೆ ಬಂಧಿಸಿ … Read more

ಬೆಳಗ್ಗೆ ತೋಟಕ್ಕೆ ಬಂದ ಮಾಲೀಕನಿಗೆ ಶಾಕ್, 68 ಮರಗಳಲ್ಲಿದ್ದ ಅಡಕೆ ಕೊನೆಗಳು ನಾಪತ್ತೆ

ARECA-TREE-GENERAL-IMAGE

ಶಿವಮೊಗ್ಗ ಲೈವ್.ಕಾಂ | SHIRALAKOPPA NEWS | 4 ಸೆಪ್ಟೆಂಬರ್ 2021 ಒಂದೆಡೆ ಅಡಕೆ ಬೆಲೆ ಗಗನಮುಖಿಯಾಗುತ್ತಿದೆ. ಬೆಳಗಾರರಲ್ಲಿ ಮಂದಹಾಸ ಮೂಡಿಸಿದೆ. ಮತ್ತೊಂದೆಡೆ ಅಡಕೆ ಕಳ್ಳತನ ಪ್ರಕರಣಗಳು ವರದಿಯಾಗುತ್ತಿವೆ. ರಾತ್ರೋರಾತ್ರಿ ತೋಟವೊಂದರಿಂದ ಅಡಕೆ ಕೊನೆಗಳನ್ನು ಕದ್ದೊಯ್ದಿರುವ ಪ್ರಕರಣ ವರದಿಯಾಗಿದೆ. ಶಿಕಾರಿಪುರ ತಾಲೂಕು ಉಡುಗಣಿ ಹೋಬಳಿಯ ಕೊಡಿಕೊಪ್ಪ ಗ್ರಾಮದ ತೋಟವೊಂದರಲ್ಲಿ ಅಡಕೆ ಕೊನೆಗಳು ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಜಯಪ್ಪ ಎಂಬುವವರಿಗೆ ಸೇರಿದ ತೋಟದಲ್ಲಿ ರಾತ್ರಿ ಕಳ್ಳರು ಅಡಕೆ ಕೊನೆಗಳನ್ನು ಕೊಯ್ದುಕೊಂಡು ಹೋಗಿದ್ದಾರೆ. 68 ಮರಗಳಿಂದ ಕೊನೆ ಕಳವು ಮಾಡಲಾಗಿದೆ. … Read more

ಗ್ರಾಮ ಪಂಚಾಯಿತಿ ಬೀಗ ಒಡೆದು ಪಿಡಿಒ ಕೊಠಡಿಯಲ್ಲಿ ಕಳ್ಳತನ

theft case general image

ಶಿವಮೊಗ್ಗ ಲೈವ್.ಕಾಂ | SORABA NEWS | 3 ಸೆಪ್ಟೆಂಬರ್ 2021 ಗ್ರಾಮ ಪಂಚಾಯಿತಿ ಕಟ್ಟಡವೊಂದರ ಬೀಗ ಒಡೆದ ಕಳ್ಳರು, ಕಂಪ್ಯೂಟರ್ ಉಪಕರಣಗಳನ್ನು ಕದ್ದೊಯ್ದಿದ್ದಾರೆ. ಸೊರಬ ತಾಲೂಕು ಮುಟಗುಪ್ಪೆ ಗ್ರಾಮ ಪಂಚಾಯಿತಯಲ್ಲಿ ಘಟನೆ ಸಂಭವಿಸಿದೆ. ಗ್ರಾಮ ಪಂಚಾಯಿತಿ ಪಿಡಿಒ ಕಚೇರಿಯಲ್ಲಿದ್ದ ಕಂಪ್ಯೂಟರ್ ಮಾನಿಟರ್, ಕೀ ಬೋರ್ಡ್, ಮೌಸ್, ಕಬೋರ್ಡ್’ನಲ್ಲಿದ್ದ ವೆಬ್ ಕ್ಯಾಮರಾ, ಡಿಜಿ ಕ್ಯಾಮರಾ, ಆಡಳಿತಾಧಿಕಾರಿ ಕೊಠಡಿಯಲ್ಲಿದ್ದ ಕಂಪ್ಯೂಟರ್ ಮಾನಿಟರ್, ಕೀ ಬೋರ್ಡ್, ಮೌಸ್, ಸಿಸಿಟಿವಿಯ ಡಿವಿಆರ್ ಕಳ್ಳತನ ಮಾಡಲಾಗಿದೆ. ಕಳುವಾದ ವಸ್ತುಗಳ ಅಂದಾಜು ಮೌಲ್ಯ 50 … Read more

ದೇವಸ್ಥಾನದ ಬೀಗ ಒಡೆದು ಆರತಿ ತಟ್ಟೆ, ಗಂಟೆ, ಕಾಣಿಕೆ ಹಣ ಸಹಿತ ಹಲವು ವಸ್ತುಗಳ ಕಳ್ಳತನ

theft case general image

ಶಿವಮೊಗ್ಗ ಲೈವ್.ಕಾಂ | SHIMOGA NEWS | 2 ಸೆಪ್ಟೆಂಬರ್ 2021 ದೇವಸ್ಥಾನದ ಬೀಗ ಒಡೆದ ಕಳ್ಳರು ಕಾಣಿಕೆ ಹಣ ಮತ್ತು ಪೂಜಾ ಸಾಮಾಗ್ರಿಗಳನ್ನು ಕದ್ದೊಯ್ದಿದ್ದಾರೆ. ಈ ಸಂಬಂಧ ದೂರು ದಾಖಲಾಗಿದ್ದು ತನಿಖೆ ನಡೆಯುತ್ತಿದೆ. ಶಿವಮೊಗ್ಗ ತಾಲೂಕು ದೊಡ್ಡಮತಲಿ ಗ್ರಾಮದ ಶ್ರೀ ಹುಲಿಯಾಂಬಿಕ ದೇವಸ್ಥಾನದಲ್ಲಿ ಘಟನೆ ಸಂಭವಿಸಿದೆ. ಮಂಗಳವಾರ ಮಾತ್ರ ಪೂಜೆ ಶ್ರೀ ಹುಲಿಯಾಂಬಿಕ ದೇವಸ್ಥಾನದಲ್ಲಿ ವಾರಕ್ಕೆ ಒಮ್ಮೆ ಮಾತ್ರ ಪೂಜೆ ಸಲ್ಲಿಸಲಾಗುತ್ತದೆ. ಮಂಗಳವಾರದಂದು ಮಾತ್ರ ಅರ್ಚಕರು ಬಂದ ಪೂಜೆ ಮಾಡುತ್ತಿದ್ದರು. ಈ ವೇಳೆ ಗ್ರಾಮಸ್ಥರು ಪಾಲ್ಗೊಳ್ಳುತ್ತಿದ್ದರು. … Read more

ಸ್ನೇಹಿತನೊಂದಿಗೆ ಊಟ ಮುಗಿಸಿ ಬರುವಷ್ಟರಲ್ಲಿ ಬೈಕ್ ನಾಪತ್ತೆ

ಶಿವಮೊಗ್ಗ ಲೈವ್.ಕಾಂ | SHIMOGA NEWS | 1 ಸೆಪ್ಟೆಂಬರ್ 2021 ಸ್ನೇಹಿತನೊಂದಿಗೆ ಹೊಟೇಲ್’ಗೆ ಹೋಗಿ ಊಟ ಮುಗಿಸಿ ವಾಪಾಸ್ ಬರುಷ್ಟರಲ್ಲಿ ಬೈಕ್ ಕಳ್ಳತನವಾಗಿದೆ. ಶಿವಮೊಗ್ಗದ KSRTC ಬಸ್ ನಿಲ್ದಾಣದ ಬಳಿ ಘಟನೆ ಸಂಭವಿಸಿದೆ. ಸಂತೆಕಡೂರು ನಿವಾಸಿ ಉಮೇಶ್ ಅವರು ತಮ್ಮ ಸ್ನೇಹಿತನೊಂದಿಗೆ KSRTC ಬಸ್ ನಿಲ್ದಾಣದ ಬಳಿ, ಹೊಟೇಲ್ ಒಂದಕ್ಕೆ ಊಟಕ್ಕೆ ತೆರಳಿದ್ದರು. ತಮ್ಮ ಹೋಂಡಾ ಶೈನ್ ಬೈಕನ್ನು ಹೊಟೇಲ್ ಮುಂಭಾಗ ನಿಲ್ಲಿಸಿದ್ದರು. ರಾತ್ರಿ 10.30ಕ್ಕೆ ಊಟಕ್ಕೆ ಹೋಗಿ 11.30ರ ಹೊತ್ತಿಗೆ ಹೊರಗೆ ಬಂದಿದ್ದಾರೆ. ವಾಪಸ್ … Read more

ನೆಹರೂ ಸ್ಟೇಡಿಯಂನಲ್ಲಿ ಯುವತಿಯ ಮೊಬೈಲ್, ಹಣ ಖದೀಮರ ಪಾಲು

271119 Nehru Stadium Track 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 1 ಸೆಪ್ಟೆಂಬರ್ 2021 ಪಿಎಸ್ಐ ಹುದ್ದೆಯ ದೈಹಿಕ ಪರೀಕ್ಷೆಯ ಸಿದ್ಧತೆಗಾಗಿ ನೆಹರೂ ಸ್ಟೇಡಿಯಂಗೆ ಬಂದಿದ್ದ ಯುವತಿಯ ಮೊಬೈಲ್ ಮತ್ತು ನಗದು ಕಳುವಾಗಿದೆ. ಈ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹರ್ಷಿತಾ ಎಂಬುವವರಿಗೆ ಸೇರಿದ 32 ಸಾವಿರ ರೂ. ಮೌಲ್ಯದ ಮೊಬೈಲ್ ಮತ್ತು 2 ಸಾವಿರ ರೂ. ನಗದು ಕಳ್ಳತನವಾಗಿದೆ. ಹೇಗಾಯ್ತು ಘಟನೆ? ಪಿಎಸ್ಐ ಹುದ್ದೆಯ ದೈಹಿಕ ಪರೀಕ್ಷೆಯ ಸಿದ್ಧತೆಗಾಗಿ ಹರ್ಷಿತಾ ಅವರು ಆಗಸ್ಟ್ 24ರ ಸಂಜೆ … Read more

ರಾತ್ರೋರಾತ್ರಿ ಸೋಮಿನಕೊಪ್ಪದಲ್ಲಿ ಶಿಕ್ಷಣ ಸಂಸ್ಥೆಯ ನಾಲ್ಕು ಬಸ್ಸುಗಳಿಂದ ಡಿಸೇಲ್ ಕಳ್ಳತನ

vinobanagara police station

ಶಿವಮೊಗ್ಗ ಲೈವ್.ಕಾಂ | SHIMOGA NEWS | 1 ಸೆಪ್ಟೆಂಬರ್ 2021 ಖಾಸಗಿ ಶಿಕ್ಷಣ ಸಂಸ್ಥೆಗೆ ಸೇರಿದ ನಾಲ್ಕು ಬಸ್ಸುಗಳಲ್ಲಿ ಡಿಸೇಲ್ ಕಳ್ಳತನ ಮಾಡಲಾಗಿದೆ. ರಾತ್ರಿ ವೇಳೆ ಡಿಸೇಲ್ ಟ್ಯಾಂಕ್’ನ ಕ್ಯಾಪ್ ತೆಗೆದು 580 ಲೀಟರ್ ಡಿಸೇಲ್ ಕಳುವು ಮಾಡಲಾಗಿದೆ. ಸಮೀಪದಲ್ಲೇ ಸೆಕ್ಯೂರಿಟಿಗಳಿದ್ದರೂ ಕಳ್ಳರು ತಮ್ಮ ಕರಾಮತ್ತು ತೋರಿಸಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ. ಹೇಗಾಯ್ತು ಘಟನೆ? ಶಿವಮೊಗ್ಗ ಸೋಮಿನಕೊಪ್ಪದ ಮೈತ್ರಿ ಅಪಾರ್ಟ್’ಮೆಂಟ್ ಬಳಿ ಘಟನೆ ಸಂಭವಿಸಿದೆ. ಪಿಇಎಸ್ ಶಿಕ್ಷಣ ಸಂಸ್ಥೆಗೆ ಸೇರಿದ ಎರಡು ದೊಡ್ಡ ಬಸ್ ಮತ್ತು … Read more

ಬೀಗ ಹಾಕಿದ್ದ ಮನೆ ಮುಂದೆ ಅನುಮಾನಾಸ್ಪದ ವರ್ತನೆ, ಗಸ್ತು ಪೊಲೀಸರ ಕಂಡು ಎಸ್ಕೇಪ್ ಆಗಲು ಯತ್ನ

vinobanagara polic station and police jeep

ಶಿವಮೊಗ್ಗ ಲೈವ್.ಕಾಂ | SHIMOGA NEWS | 1 ಸೆಪ್ಟೆಂಬರ್ 2021 ಬೀಗ ಹಾಕಿದ್ದ ಮನೆಯೊಂದರ ಬಳಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಹಿಡಿದು ವಿಚಾರಣೆ ನಡೆಸಿದ ಪೊಲೀಸರು, ಆತನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಶಿವಮೊಗ್ಗ ನಗರದ ವಿನೋಬನಗರ ಠಾಣೆ ವ್ಯಾಪ್ತಿಯ ರತ್ನಾಕರ ಲೇಔಟ್’ನಲ್ಲಿ ಘಟನೆ ಸಂಭವಿಸಿದೆ. ಬೀಗಿ ಹಾಕಿದ್ದ ಮನೆಯ ಬಳಿಗೆ ನಿಂತಿದ್ದ ವ್ಯಕ್ತಿಯೊಬ್ಬ, ಗಸ್ತು ಪೊಲೀಸರನ್ನು ಕಂಡು ಓಡಲು ಯತ್ನಿದ್ದಾನೆ. ರಾತ್ರಿ 8 ಗಂಟೆಗೆ ಹೊತ್ತಿಗೆ ಈ ಘಟನೆ ಸಂಭವಿಸಿದೆ. ತಪ್ಪಿಸಿಕೊಳ್ಳಲು ಯತ್ನಿಸಿದ ವ್ಯಕ್ತಿಯ ಬೆನ್ನಟ್ಟಿ … Read more